ಬಳ್ಳಾರಿ: ರೈತರಿಗೆ ಸೂಕ್ತ ಸೌಲಭ್ಯ ಒದಗಿಸಲು ಒತ್ತಾಯ
Team Udayavani, Oct 1, 2021, 6:50 PM IST
ಬಳ್ಳಾರಿ: ನಗರದ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವಕುಂದು ಕೊರತೆಗಳ ಬಗ್ಗೆ ಎಪಿಎಂಸಿ ಅಧ್ಯಕ್ಷ ಬಿ.ಪಿ. ಉಮೇಶಕುಮಾರ್ಮತ್ತು ಕಾರ್ಯದರ್ಶಿಗಳೊಂದಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿಯವರು ಗುರುವಾರ ಚರ್ಚಿಸಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರೈತರ ಕೃಷಿ ಉತ್ಪನ್ನಗಳನ್ನು ಹೊತ್ತುತರುವ ಲಾರಿ, ಆಟೋಗಳಿಗೆ ಶುಲ್ಕವಿಧಿಸಲಾಗುತ್ತದೆ. ಈ ಕುರಿತು ಹಲವುಗೊಂದಲಗಳು ಇದ್ದು, ಅವುಗಳನ್ನು ಸ್ಪಷ್ಟಪಡಿಸಬೇಕಾಗಿದೆ. ಎಪಿಎಂಸಿಯಲ್ಲಿಧಾನ್ಯಗಳನ್ನು ಒಣಗಿಸುವಾಗ ದನಗಳ ಕಾಟ ಹೆಚ್ಚಾಗಿದೆ.
ಕೃಷಿ ಉತ್ಪನ್ನದೊಂದಿಗೆ ಬಂದರೈತರಿಗೆ ತಂಗಲು ಸೂಕ್ತ ಸೌಲಭ್ಯಗಳಿಲ್ಲದಕುರಿತು ಅಧ್ಯಕ್ಷ ಉಮೇಶಕುಮಾರ್,ಕಾರ್ಯದರ್ಶಿಗಳ ಗಮನಕ್ಕೆಐನಾಥರೆಡ್ಡಿಯವರು ತಂದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷಉಮೇಶಕುಮಾರ್ ಅವರು, ರಾಜ್ಯಸರ್ಕಾರ ಮಾರುಕಟ್ಟೆ ಶುಲ್ಕವನ್ನುಕಡಿತಗೊಳಿಸಿದೆ.
ಇದರಿಂದ ಎಪಿಎಂಸಿಗೆಸಂಪನ್ಮೂಲದ ಕೊರತೆ ಎದುರಾಗಿದ್ದು,ಅಭಿವೃದ್ಧಿ ಕುಂಠಿತವಾಗಿದೆ. ಹಾಗಾಗಿವ್ಯಾಪಾರಸ್ಥರ ಲಾರಿ, ಆಟೋಗಳಿಗೆ ಶುಲ್ಕವಿಧಿಸಲಾಗುತ್ತಿದೆ. ಮಾರುಕಟ್ಟೆ ನಿರ್ವಹಣೆಗೆಇದು ಅನಿವಾರ್ಯವೂ ಆಗಿದೆ ಎಂದವರು ವಿವರಿಸಿದ್ದಾರೆ.
ಈ ವೇಳೆ ಎಪಿಎಂಸಿ ನಿರ್ದೇಶಕಕೆ.ತಿಮ್ಮಾರೆಡ್ಡಿ, ಬಾಬು, ಬುಡಾಅಧ್ಯಕ್ಷ ಪಿ.ಪಾಲಣ್ಣ, ರೈತ ಮೋರ್ಚಾನಗರಾಧ್ಯಕ್ಷ ಟಿ.ಸತ್ಯನಾರಾಯಣ,ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ ರೆಡ್ಡಿ,ಕೆ.ನಾಗರಾಜ, ರೈತ ಮೋರ್ಚಾ ನಗರಉಪಾಧ್ಯಕ್ಷ ಮಾಧವ ರೆಡ್ಡಿ, ಸದಸ್ಯರಾದತಿಪ್ಪೇಸ್ವಾಮಿ, ರಾಘವೇಂದ್ರರೆಡ್ಡಿ,ರಾಮು ಮತ್ತು ರೈತ ಮುಖಂಡರಾದಕೆ.ಗುರುಮೂರ್ತಿ ಬಸವ ಹಾಗೂಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತಮಂಡಳಿಯವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ