ಉದ್ಘಾಟನೆ ಮುನ್ನವೇ ಬಸ್ನಿಲ್ದಾಣ ಕಾರ್ಯಾರಂಭ
2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ 2018ರ ಮಾ. 13ರಂದು ಭೂಮಿಪೂಜೆ ನೆರವೇರಿತ್ತು
Team Udayavani, Feb 15, 2021, 5:19 PM IST
ಸಿರಗುಪ್ಪ: ನಗರದ ಹೃದಯಭಾಗದಲ್ಲಿ·ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದಬಸ್ನಿಲ್ದಾಣದ ಕಾಮಗಾರಿ ಅಂತೂ ಇಂತಮುಗಿದಿದ್ದು, ಉದ್ಘಾಟನೆಗೆ ಮುನ್ನವೇಕಾರ್ಯಾರಂಭ ಮಾಡಿದ್ದು, ನಿಲ್ದಾಣದ ಒಳಗೆಬಸ್ಗಳು ನಿಲ್ಲುತ್ತಿದ್ದು, ನಿಲ್ದಾಣದ ಒಳಗೆ ಅಂಗಡಿಮುಂಗಟ್ಟುಗಳು ಪ್ರಾರಂಭವಾಗಿದ್ದು, ನಿಲ್ದಾಣದಲ್ಲಿಜನ ಜಂಗುಳಿ ಕಂಡು ಬರುತ್ತಿದೆ.
ರೂ. 2.50 ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ನಿಲ್ದಾಣದ ಕಾಮಗಾರಿಗೆಅಂದಿನ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಮಾ.13, 2018ರಂದು ಭೂಮಿಪೂಜೆ ನೆರವೇರಿಸಿದ್ದರು.ಆದರೆ ರಾಜಕೀಯ ನಾಯಕರ ಒಳಜಗಳದಿಂದ18 ತಿಂಗಳಲ್ಲಿಯೇ ಮುಗಿಯಬೇಕಿದ್ದ ನಿಲ್ದಾಣದಕಾಮಗಾರಿ ಮೂರು ವರ್ಷಕ್ಕೆ ಮುಗಿದಿದ್ದು,ಬಸ್ಸಿಗಾಗಿ ಕಾಯುವ ಜನ ನಿಲ್ದಾಣದಲ್ಲಿಯೇಕುಳಿತುಕೊಳ್ಳಲು ಅನುಕೂಲವಾಗಿದೆ.
ಕಳೆದ ಮೂರು ವರ್ಷಗಳಿಂದ ಬಸ್ಸಿಗಾಗಿರಸ್ತೆಯಲ್ಲಿಯೇ ಮಳೆ, ಚಳಿ, ಬಿಸಿಲು ಎನ್ನದೆಕಾಯುತ್ತಿದ್ದ ಪ್ರಯಾಣಿಕರಿಗೆ ಬಸ್ನಿಲ್ದಾಣದ
ಕಾಮಗಾರಿ ಮುಗಿದಿದ್ದು ರಸ್ತೆಯಲ್ಲಿ ನಿಂತು ಬಸ್ಸಿಗಾಗಿಕಾಯುವ ಪರಿಸ್ಥಿತಿ ತಪ್ಪಿದಂತಾಗಿದೆ. ಬಸ್ನಿಲ್ದಾಣದಕಾಮಗಾರಿ ಮುಗಿದಿದ್ದು, ಸಣ್ಣಪುಟ್ಟ ಕಾಮಗಾರಿಗಳುಬಾಕಿ ಇದೆ. ಬಾಕಿ ಕಾಮಗಾರಿಗಳನ್ನು ಮುಗಿಸಿಶೀಘ್ರವೇ ಬಸ್ನಿಲ್ದಾಣವನ್ನು ಲೋಕಾರ್ಪಣೆಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಬಳ್ಳಾರಿಸಾರಿಗೆ ವಿಭಾಗದ ನಿಯಂತ್ರಣಾಧಿ ಕಾರಿ ಎಸ್.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿರೂ. 2.50ಕೋಟಿ ವೆಚ್ಚದಲ್ಲಿನಿರ್ಮಾಣವಾಗಿರುವ ನೂತನ ಬಸ್ನಿಲ್ದಾಣವನ್ನು ಫೆಬ್ರವರಿ ತಿಂಗಳ ಅಂತ್ಯದೊಳಗೆಲೋಕಾರ್ಪಣೆ ಮಾಡಲು ಸಾರಿಗೆ ಇಲಾಖೆಯಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
ಎಂ.ಎಸ್. ಸೋಮಲಿಂಗಪ್ಪ, ಶಾಸಕ
–ಆರ್. ಬಸವರೆಡ್ಡಿ ಕರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ