ನಿಧಿ ಆಸೆಗಾಗಿ ಹೊಳೆ ಬಸವೇಶ್ವರ ಮೂರ್ತಿ ಭಗ್ನ
Team Udayavani, Apr 6, 2022, 3:18 PM IST
ಕಂಪ್ಲಿ: ರಾಮಸಾಗರ ಗ್ರಾಮದ ಹೊರವಲಯದಲ್ಲಿ ಗುಡದರೂರ ಮಾಗಾಣಿ ಪ್ರದೇಶದಲ್ಲಿ ತುಂಗಭದ್ರಾ ನದಿ ತೀರದಲ್ಲಿ ಅತ್ಯಂತ ಪುರಾತನ ಹೊಳೆ ಬಸವೇಶ್ವರನ ಶಿಲಾಮೂರ್ತಿ ಯನ್ನು ಭಗ್ನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಭಕ್ತರಲ್ಲಿ ಅಸಮಧಾನ ತಂದಿದೆ.
ರಾಮಸಾಗರ ಗ್ರಾಮದಿಂದ ಸುಮಾರು 3-4 ಕಿಮೀ ದೂರದ ತುಂಗಭದ್ರ ನದಿ ತೀರದಲ್ಲಿ ಗುಡದೂರು ಮಾಗಾಣಿಯ ಹಳೇ ಮಾಗಾಣಿ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳ ಹಿಂದಿನಿಂದ ಬಸವೇಶ್ವರ ಶಿಲಾ ಮೂರ್ತಿ ಇದ್ದು, ನದಿ ತೀರದಲ್ಲಿರುವುದರಿಂದ ಅದನ್ನು ಹೊಳೆ ಬಸವೇಶ್ವರ ಎಂದೇ ಕರೆಯುತ್ತಿದ್ದರು. ರಾಮಸಾಗರ, ನಂ10 ಮುದ್ದಾಪುರ, ಕಂಪ್ಲಿ ಸೇರಿದಂತೆ ಅನೇಕ ಗ್ರಾಮಗಳ ಜನರು ಇಲ್ಲಿಗೆ ಭೇಟಿ ನೀಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದರು. ವಿಶೇಷವಾಗಿ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಸಂದರ್ಭದಲ್ಲಿ ನೂರಾರು ಜನರು ಭೇಟಿ ನೀಡಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ನಂ.10 ಮುದ್ದಾಪುರದ ಭಕ್ತರು ಪೂಜೆಗೆಂದು ಹೋದಾಗ ಬಸವಣ್ಣನ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ನಿಧಿ ಆಸೆಗಾಗಿ ಭಗ್ನಗೊಳಿಸಿರುವುದು ಕಂಡು ಬಂದಿದೆ.
ಬಸವಣ್ಣನ ಕೋಡು, ಕಿವಿ ಸೇರಿದಂತೆ ತುಂಡು ಮಾಡಿ ಹಾಕಿದ್ದಾರೆ. ಇಂಥ ದುಷ್ಕೃತ್ಯವನ್ನು ನಡೆಸಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?