ಮಹಿಳಾ ವಿಮುಕ್ತಿಗೆ ಹೋರಾಟ ಅನಿವಾರ್ಯ
ಈಶ್ವರಚಂದ್ರ ವಿದ್ಯಾಸಾಗರ -ಸಾವಿತ್ರಿಬಾಯಿ ಫುಲೆ ಆಶಯ ನನಸು ಮಾಡೋಣ: ಜಿಲ್ಲಾಧ್ಯಕ್ಷೆ ಎ.ಶಾಂತಾ
Team Udayavani, Mar 9, 2020, 1:14 PM IST
ಬಳ್ಳಾರಿ: ಮಹಿಳೆಯರ ವಿಮುಕ್ತಿಗೆ ಇಂದಿಗೂ ಸಹ ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕಾದ ಸ್ಥಿತಿ ಇದೆ ಎಂದು ಎಐಎಂಎಸ್ಎಸ್ನ ಜಿಲ್ಲಾಧ್ಯಕ್ಷೆ ಎ.ಶಾಂತಾ ಹೇಳಿದರು.
ಎಐಎಂಎಸ್ಎಸ್ ಸಂಸ್ಥೆಯಿಂದ ನಗರದ ಐಎಂಎ ಹಾಲ್ ನಲ್ಲಿ ಹಮ್ಮಿಕೊಂಡ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶತಮಾನಗಳ ಹಿಂದೆ ಪ್ರತಿರೋಧದ ಗಟ್ಟಿ ಧ್ವನಿಯ ಪ್ರತೀಕವಾಗಿ ನ್ಯೂಯಾರ್ಕ್ ನಗರದ ಜವಳಿ ಕಾರ್ಖಾನೆಯ ಸಾವಿರಾರು ಹೆಣ್ಣುಮಕ್ಕಳು ದುಡಿತದ ಅವಧಿಯ ಕಡಿತ, ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಹಾಗೂ ಇನ್ನೂ ಅನೇಕ ಬೇಡಿಕೆಗಳೊಂದಿಗೆ ಹೋರಾಟದ ಕಣಕ್ಕೆ ಇಳಿದರು.
ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ ದುಡಿಯುವ ಸುಮಾರು 20ರಿಂದ 30 ಸಾವಿರ ಮಹಿಳಾ ಕಾರ್ಮಿಕರು ಕೊರೆಯುವ ಚಳಿ ಲೆಕ್ಕಿಸದೆ ಸತತವಾಗಿ ಹದಿಮೂರು ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು, ಲಾಠಿ-ಗುಂಡೇಟನ್ನು ಎದುರಿಸಿ ಕೆಲವೊಂದು ಹಕ್ಕುಗಳನ್ನು ಗಳಿಸಿಕೊಂಡರು. ಆ ದಿನವೇ ಮಾರ್ಚ್ 8 ನಮ್ಮೆಲ್ಲರಿಗೂ ಇಂದಿಗೂ ಸ್ಪೂರ್ತಿದಾಯಕವಾಗಿದೆ. ಮಹಿಳೆಯರ ವಿಮುಕ್ತಿಗಾಗಿ ನಾವೆಲ್ಲರೂ ಹೋರಾಡೋಣ ಎಂದರು.
ಐಐಯುಟಿಯುಸಿಯ ಜಿಲ್ಲಾಧ್ಯಕ್ಷರಾದ ಆರ್. ಸೋಮಶೇಖರಗೌಡ ಅವರು ಮಾತನಾಡುತ್ತಾ, 1910ರಲ್ಲಿ ಡೆನ್ಮಾರ್ಕನ ಕೊಪೆನ್ಹೆಗನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದ ಸಂದರ್ಭದಲ್ಲಿ ಸಮಾಜವಾದಿ ನಾಯಕಿಯಾಗಿದ್ದ ಕ್ಲಾರಾ ಜೆಟ್ಕಿನ್ “ಮಾರ್ಚ್ 8’ನ್ನು ವಿಶ್ವ ಮಹಿಳಾ ದಿನವಾಗಿ ಆಚರಿಸಬೇಕು ಎಂದು ಕರೆ ನೀಡಿದರು ಎಂದರು.
ಸಮಾಜದಲ್ಲಿ ಬೇರು ಬಿಟ್ಟಂತಹ ಪೂರ್ವಗ್ರಹಗಳ ವಿರುದ್ಧ ಹೋರಾಡಿ, ಪ್ರಜಾತಾಂತ್ರಿಕ ವಿಚಾರಗಳ ಆಧಾರದ ಮೇಲೆ ಹೊಸ ಮೌಲ್ಯಪ್ರಜ್ಞೆ ಸ್ಥಾಪಿಸಲು ಹೋರಾಟದ ಅಲೆಯನ್ನು ಎಬ್ಬಿಸಿದ ಈಶ್ವರಚಂದ್ರ ವಿದ್ಯಾಸಾಗರರು, ಸಾವಿತ್ರಿಬಾಯಿ ಫುಲೆ, ಪಂಡಿತ ತಾರಾನಾಥ, ಕುದ್ಮುಲ್ ರಂಗರಾವ್ ಹಾಗೂ ಇನ್ನಿತರರ ಆಶಯಗಳನ್ನು ನನಸು ಮಾಡಬೇಕಿದೆ ಎಂದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ಮಾತನಾಡಿ, ಇಂದು ಕೆಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದರೂ, ಒಟ್ಟಾರೆ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಮಹಿಳಾ ಸಮುದಾಯದ ನೈಜ ಕನಸುಗಳಾದ ಸ್ವಾತಂತ್ರ್ಯ , ಸಮಾನತೆ ಮತ್ತು ಗೌರವಯುತ ಜೀವನ ನನಸಾಗದೆಯೇ ಉಳಿದಿದೆ ಎಂದರು.
ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಪಡೆಯುತ್ತಿರುವ ಆರ್ಥಿಕ ಪ್ರತಿಫಲ ಅತ್ಯಂತ ನಿಕೃಷ್ಟವಾಗಿದೆ. ಇವರು ಸಲ್ಲಿಸುವ ಸೇವೆ ಹೆಸರಿನ “ದುಡಿಮೆಗೆ’, ಗರಿಷ್ಠ ಶ್ರಮ ಮತ್ತು ಸಮಯ ವಿನಿಯೋಗವಾದರೂ ಈ ಹೆಣ್ಣುಮಕ್ಕಳು ಕಾರ್ಮಿಕರಲ್ಲ. ಇವರುಗಳನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಜೀವನ ನಡೆಸಲು ಗೌರವಧನ-ಪ್ರೋತ್ಸಾಹಧನದ ಬದಲಾಗಿ ಕನಿಷ್ಟ ಮಾಸಿಕ ವೇತನವನ್ನು ಸರ್ಕಾರಗಳು ನೀಡಬೇಕಾಗಿದೆ ಎಂದರು.
ಎಐಎಂಎಸ್ಎಸ್ನ ಜಿಲ್ಲಾ ಕಾರ್ಯದರ್ಶಿ ಈಶ್ವರಿ ಅಧ್ಯಕ್ಷತೆ ವಹಿಸಿದ್ದರು. ಗೀತಾ, ಪದ್ಮಾ, ಗಿರಿಜ, ವಿದ್ಯಾ, ಭಾರ್ಗವಿ, ರೇಷ್ಮಾ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ