ಐತಿಹಾಸಿಕ ಹಂಪಿಯ ರಾಮ- ಲಕ್ಷ್ಮಣ ದೇವಾಲಯದ ತಡೆಗೋಡೆ ಕುಸಿತ
Team Udayavani, Oct 17, 2022, 10:05 PM IST
ಹೊಸಪೇಟೆ:ನಿರಂತರ ಮಳೆಯ ಪರಿಣಾಮ ಐತಿಹಾಸಿಕ ಹಂಪಿಯ ರಾಮ- ಲಕ್ಷ್ಮಣ ದೇವಾಲಯದ ತಡೆಗೋಡೆ ಕುಸಿದ ಘಟನೆ ಸೊಮವಾರ ನಡೆದಿದೆ.
ಹಂಪಿಯ ತುಂಗಭದ್ರಾ ನದಿಗೆ ಅಂಟಿಕೊಂಡಿರುವ ಪುರಾತನ ತಡೆಗೋಡೆ ಉರುಳಿ ಬಿದ್ದಿದೆ. ನಿರಂತರ ಮಳೆಯಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ನೀರಿನ ರಭಸಕ್ಕೆ ತಡೆಗೋಡೆ ಕುಸಿದು ಬಿದ್ದು ಹಾನಿಗೊಳಗಾಗಿದೆ.
ಸಚಿವ ಶ್ರೀರಾಮುಲು ಅವರು, ಇತ್ತೀಚೆಗಷ್ಟೆ ಶ್ರೀ ಕೊದಂಡ ಸ್ವಾಮಿಯ ದೇವಾಲಯ ಸೇರಿದಂತೆ 5 ದೇಗುಲಗಳ ಜೀರ್ಣೋದ್ಧಾರ ಮಾಡಿದ್ದನ್ನು ಸ್ಮರಿಸಬಹುದು.