ಭೂಮಿ ಸಂತ್ರಸ್ತರಿಗೆ ಪರಿಹಾರ ನೀಡಿ
Team Udayavani, Feb 18, 2020, 12:16 PM IST
ಸಾಂದರ್ಭಿಕ ಚಿತ್ರ
ಹೂವಿನಹಡಗಲಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ರೈತರು ಕಳೆದುಕೊಂಡಿರುವ ಭೂಮಿಗೆ ಇದುವರೆಗೂ ಪರಿಹಾರ ದೊರಕಿಲ್ಲ. ಈ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮುಂಡರಗಿ ತಾಲೂಕಿನ ಮುಂಡವಾಡ, ಹಮ್ಮಿಗಿ ಗ್ರಾಮದ ರೈತರು ಹಡಗಲಿ ವಿಶೇಷ ಭೂಸ್ವಾಧೀನ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತರು ನಮ್ಮದು ಇರುವ ಆಲ್ಪ ಸ್ವಲ್ಪ ಭೂಮಿ ಸಿಂಗಟಾಲೂರು ಯೋಜನೆ ಕಾಲುವೆ ನಿರ್ಮಾಣಕ್ಕೆ ಹೋಗಿದೆ. ಭೂಮಿ ಕಳೆದುಕೊಂಡು ಸುಮಾರು ವರ್ಷಗಳಾದರೂ ಯಾವುದೇ ಪರಿಹಾರ ದೊರಕಿಲ್ಲ. ಇತ್ತ ಸ್ವಾಧೀನ ಪ್ರಕ್ರಿಯೆಯಲ್ಲಿರುವುದರಿಂದಾಗಿ ಉಳಿದ ಭೂಮಿಯನ್ನು ಅಣ್ಣ ತಮ್ಮಂದಿರುವ ಪಾಲು ಮಾಡಿಕೊಳ್ಳುವ ಹಾಗಿಲ್ಲ. ಕಷ್ಟಕ್ಕೆ ಖರೀದಿ ಕೊಡಲು ಬರುತ್ತಿಲ್ಲ. ಭೂಮಿ ಮೇಲೆ ಸಾಲ ಸಹ ತೆಗೆದುಕೊಳ್ಳಲು ಬರುತ್ತಿಲ್ಲ. ಹೀಗಾದಲ್ಲಿ ನಮ್ಮ ಜೀವನ ನಿರ್ವಹಣೆ ಹೇಗೆ ಎಂದು ಭೂಮಿ ಕಳೆದುಕೊಂಡ ರೈತ ತಿರುಕಪ್ಪ ಹೇಳಿದರು.
ಇನ್ನೂ ದೋಣಿ ಗ್ರಾಮದ ರೈತ ಮಲ್ಲಪ್ಪ ಭೂಮಿ ಕಳೆದುಕೊಂಡು ಪರಿಹಾರಕ್ಕಾಗಿ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಒಂದು ಭಾರಿ ಕಚೇರಿಗೆ ಬರಬೇಕಾದಲ್ಲಿ ಸುಮಾರು ನೂರಾರು ರೂಗಳು ಖರ್ಚಾಗುತ್ತವೆ. ಹಣ ಖರ್ಚು ಮಾಡಿಕೊಂಡು ಕಚೇರಿಗೆ ಬಂದಲ್ಲಿ ಇಲ್ಲಿ ನಮ್ಮ ಗೋಳು ಕೇಳ್ಳೋರು ಯಾರು ಇರುವುದಿಲ್ಲ ಎನ್ನುತ್ತಾರೆ. ಇನ್ನೂ ನಾವು ಪರಿಹಾರಕ್ಕಾಗಿ ಇಂದು ಕಚೇರಿಗೆ ಬಂದು ಪ್ರತಿಭಟನೆ ನಡೆಸುವುದಾಗಿ ಮೊದಲೇ ತಿಳಿಸಿದ್ದರೂ ಕಚೇರಿಯಲ್ಲಿ ಯಾರು ಇಲ್ಲ ನಮ್ಮ ಸಮಸ್ಯೆ ಕೇಳ್ಳೋರು ಯಾರು? ಎಂದು ರೈತರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಬಗೆಹರಿಸುವವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎಂ.ಎಸ್. ಪಾಟೀಲ್, ಬಸಪ್ಪ, ಎಂ.ಸಿ. ಗದ್ದಿಕೇರಿ, ಎಚ್.ಎಂ. ಪಾಟೀಲ್, ಹನುಂತರಾವ್, ಪಕ್ಕೀರಪ್ಪ ನಾಗಪ್ಪ ಪತ್ತಾರ, ಬಸಪ್ಪ ವಡ್ಡಟ್ಟಿ ಶ್ರೀಕಾಂತಪ್ಪ, ಹನುಂತಪ್ಪ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ