ಮೈನವಿರೇಳಿಸಿದ ಪವಾಡ ಕಾರ್ಯಕ್ರಮ
Team Udayavani, Mar 3, 2021, 6:52 PM IST
ಹೂವಿನಹಡಗಲಿ: ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಐತಿಹಾಸಿಕ ಪವಾಡ ಕಾರ್ಯಕ್ರಮಗಳು ಜರುಗಿದವು.
ಸಂಪ್ರದಾಯದಂತೆ ವಿವಿಧ ಬಾಬುದಾರರಿಗೆ ಮೀಸಲಾಗಿದ್ದ ಪವಾಡ ಕಾರ್ಯಕ್ರಮ ಗಂಗಿಮಾಳವ್ವ ದೇವಸ್ಥಾನದ ಮುಂದೆ ಜರುಗಿದವು. ಕಂಚಾವೀರರು ಬಗಣಿ ಗೂಟವನ್ನು ಕಾಲಲ್ಲಿ ಬಡಿದುಕೊಳ್ಳುವುದು. ಮುಳ್ಳುಗಳನ್ನು ಕಾಲಿನಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆ ಚುಚ್ಚಿಕೊಳ್ಳುವ ಮೂಲಕವಾಗಿ ಹೊರತೆಗೆಯುವುದು ಹಾಗೆಯೇ ಕಬ್ಬಿಣ ಸರಪಳಿಯನ್ನು ಗೊರವಯ್ಯನವರು ಹರಿಯುವುದು ಹೀಗೆ ಹತ್ತು ಹಲವಾರು ಮೈನವೀರೇಳುವ ಪವಾಡಗಳು ನಡೆದವು.
ವಂಶ ಪಾರಂಪರ್ಯ ಧರ್ಮಾಧಿಕಾರಿ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಮುಖಂಡರುಗಳು ಇದ್ದರು.