ವಲಯ ಮಟ್ಟದ ಕ್ರೀಡಾಕೂಟದಲ್ಲಿ 600 ಮಕ್ಕಳು ಭಾಗಿ
Team Udayavani, Aug 4, 2018, 4:49 PM IST
ಹಗರಿಬೊಮ್ಮನಹಳ್ಳಿ: ಪಟ್ಟಣದ ಪಾಪುಸ್ವಾಮಿ ಪ್ರೌಢಶಾಲೆಯ ಮೈದಾನದಲ್ಲಿ ಮಕ್ಕಳ ಕ್ರೀಡಾಕೂಟದಲ್ಲಿ ಚಪ್ಪಾಳೆ, ಕೇಕೆಯೊಂದಿಗೆ ಆಟಗಾರರನ್ನು ಹುರಿದುಂಬಿಸುತ್ತಿರುವುದು ಕಣ್ಮನ ಸೆಳೆಯುವಂತಿತ್ತು.
ಪಟ್ಟಣದ ಪಾಪುಸ್ವಾಮಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ, ಖೋಖೋ
ಪಂದ್ಯಗಳು ರೋಚಕದಿಂದ ಕೂಡಿದ್ದವು. ಆದರ್ಶ ಶಾಲೆ ಹಾಗೂ ಕ್ರಿಸ್ತಶರಣ ವಿದ್ಯಾಪೀಠ ನಡುವೆ ನಡೆದ ಬಾಲಕರ ಕಬಡ್ಡಿ ಫೈನಲ್ ಪಂದ್ಯ ಪರಸ್ಪರ ಟೈ ಮೂಲಕ ಅಂತ್ಯಗೊಂಡಿತ್ತು. ಆಗ ತೀರ್ಪುಗಾರರು ಗೋಲ್ಡನ್ ರೈಡ್ ಮೂಲಕ ಪುನಃ ಪಂದ್ಯ ಪ್ರಾರಂಭಿಸಿದರು. ಇದರಲ್ಲಿ ಆದರ್ಶ ಶಾಲೆಯ ಮಕ್ಕಳು ಗೋಲ್ಡನ್ ರೈಡ್ ನಲ್ಲಿ 3 ಅಂಕಗಳನ್ನು ಹೆಚ್ಚು ಗಳಿಸುವ ಮೂಲಕ ವಿಜೇತರಾದರು. ಇದರೊಂದಿಗೆ ಆದರ್ಶ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು.
ಬಾಲಕಿಯರ ಕಬಡ್ಡಿಯಲ್ಲಿ ವಲ್ಲಬಾಪುರ ಮೊರಾರ್ಜಿ, ಬಾಲಕರ ಖೋಖೋ ಪಂದ್ಯದಲ್ಲಿ ಕ್ರಿಸ್ತಶರಣ ಶಾಲೆ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ವಲ್ಲಬಾಪುರ, ಉಪನಾಯಕನಹಳ್ಳಿ, ಜ್ಞಾನಗಂಗ ಪ್ರೌಢಶಾಲೆ ಸೇರಿದಂತೆ ಒಟ್ಟು 10 ಶಾಲೆಯ 600 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಪಾಪುಸ್ವಾಮಿ ಪ್ರೌಢಶಾಲೆಯ ಮುಖ್ಯ ಗುರು ಎಂ.ನಾಗಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕ. ದೈಹಿಕ ಶಿಕ್ಷಕರ ತೀರ್ಪುಗಳು ಮುಗª ಮನಸ್ಸುಗಳ ಮೇಲೆ ಪರಿಣಾಮ ಬೀರದಂತಿರಲಿ. ಮಕ್ಕಳಿಗೆ ಉತ್ತೇಜನ ನೀಡುವಂತಹ ಯುವಕರು ಎಲ್ಲೆ ಮೀರದೆ ಪ್ರೋತ್ಸಾಹಿಸಬೇಕು ಎಂದರು.
ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ, ಉಜ್ಜನಗೌಡ, ವೀರೇಶಸ್ವಾಮಿ, ಕೊಟ್ರಗೌಡ, ಸಿ.ಕೊಟ್ರೇಶ, ಈಶ್ವರಗೌಡ ಸತೀಶ, ರಾಜು ಸೋಗಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ