ಗೌರವಧನ ಮುಂದುವರಿಸುವಂತೆ ಮನವಿ
Team Udayavani, Apr 24, 2020, 6:06 PM IST
ಕುರಗೋಡು: ಗೌರವಧನ ಮುಂದುವರಿಸುವಂತೆ ಅತಿಥಿ ಶಿಕ್ಷಕರು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ಪೋಸ್ಟ್ ಮಾಡಿದರು.
ಕುರುಗೋಡು: 2020 ಏಪ್ರಿಲ್-ಮೇ ಗೌರವಧನ ಮುಂದುವರಿಸುವಂತೆ ಪಟ್ಟಣ ಸಮೀಪದ ಎಮ್ಮಿಗನೂರು ಗ್ರಾಮದ ಅತಿಥಿ ಶಿಕ್ಷಕರು ಬುಧವಾರ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿದರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ಎಸ್. ರಾಮು ಮಾತನಾಡಿ, ರಾಜ್ಯದ ಸರಕಾರಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 25000ಕ್ಕೂ ಹೆಚ್ಚು ಅತಿಥಿ ಶಿಕ್ಷಕರು 2019-20ನೇ ಸಾಲಿನ ಜುಲೈ ತಿಂಗಳಿಂದ ಮಾರ್ಚ್ 31 ರವರೆಗೆ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಕರ್ತವ್ಯ ಬಿಡುಗಡೆಗೊಂಡಿದ್ದು, ಇದೇ ವೃತ್ತಿಯನ್ನು ನಂಬಿ ಜೀವನ ನಿರ್ವಹಣೆ ನಡೆಯುತ್ತಿತ್ತು. ಆದರೆ ಕೋವಿಡ್ ವೈರಸ್ ಭೀತಿ ಹಿನ್ನೆಲೆ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಯಾವುದೇ ಕೆಲಸವಿಲ್ಲದೆ ಆತಂತ್ರ ಸ್ಥಿತಿಯಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದೇವೆ. ಆದ್ದರಿಂದ ನಮ್ಮನ್ನು ಕಾರ್ಯನಿರತ ಅತಿಥಿ ಶಿಕ್ಷಕರೆಂದು ಪರಿಗಣಿಸಿ ಹಾಗೂ ಮಾನವೀಯ ದೃಷ್ಟಿಯಿಂದ ಗೌರವಧನ ಮುಂದುವರಿಸಿ ನಮ್ಮ ಬದುಕಿಗೆ ಆಸರೆಯಾಗಬೇಕು ಎಂದು ಪತ್ರದಲ್ಲಿ ಬರೆದು ಕಳುಹಿಸಲಾಗಿದೆ ಎಂದರು.
ಸಿ. ಮಲ್ಲಿಕಾ, ಶ್ರೀನಿವಾಸ, ಪಂಪಾಪತಿ, ನಾರಾಯಣ, ಲಲಿತಮ್ಮ, ಎಚ್.ಮಲ್ಲೇಶ್, ವೈ.ಧನುಂಜಯ್ಯ ರೆಡ್ಡಿ, ಶೇಖಣ್ಣ, ಸ್ವಾಮಿ, ಜಡೇಮ್ಮ, ಈರಮ್ಮ, ಜೆ.ಲೋಕೇಶ್, ವೆಂಕಟೇಶ್, ವೀರೇಶ್, ವಿಕ್ರಮ್, ಲೋಕೇಶ್,ಸಿ. ಹುಸೇನ್ ಸಾಬ್, ಮಾಬೂಸಾಬ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ