ಪ್ರತಿಯೊಬ್ಬರು ಪ್ರಕೃತಿಯತ್ತ ಕಾಳಜಿ ವಹಿಸಿ
Team Udayavani, Jun 8, 2020, 6:16 PM IST
ಕುರುಗೋಡು: ಕುಡಿತಿನಿ ಪಟ್ಟಣದ ಹರಗಿನಡೋಣಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಚಾಲನೆ ನೀಡಿದರು
ಕುರುಗೋಡು: ಕುಡಿತಿನಿ ಪಟ್ಟಣದ ಸುತ್ತಲು ಅತಿ ಹೆಚ್ಚು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳು ಇದ್ದು, ಸ್ಥಳೀಯ ಜನರಿಗೆ ಶುದ್ಧವಾದ ಗಾಳಿಯ ಸೇವನೆ ಕಷ್ಟವಾಗಿದೆ. ಆದ್ದರಿಂದ ಪಟ್ಟಣದ ಯುವಕರು ಗ್ರೀನ್ ಫೌಂಡೇಶನ್ ಸಂಸ್ಥೆಯ ರಚನೆ ಮೂಲಕ ಸಸಿಗಳನ್ನು ನೆಟ್ಟು ಪರಿಸರ ಬೆಳೆಸಲು ಮುಂದಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹೇಳಿದರು.
ಸಮೀಪದ ಕುಡಿತಿನಿ ಪಟ್ಟಣದ ಹರಗೀನಡೋಣಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಗ್ರೀನ್ ಫೌಂಡೇಶನ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ಎಲ್ಲಾ ಜನರು ತಮ್ಮ ಮನೆ ಹಾಗೂ ಕೇರಿಗಳಲ್ಲಿ ಸಸಿ ನೆಟ್ಟರೆ ಉತ್ತಮ ಪರಿಸರ ನಿರ್ಮಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣದ ಗ್ರೀನ್ ಫೌಂಡೇಶನ್ ಸಂಸ್ಥೆ ಸದಸ್ಯರಿಗೆ ಸುಮಾರು 100 ಟೀ ಶರ್ಟ್ಗಳನ್ನು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ವಿತರಿಸಿದರು. ಈ ವೇಳೆ ಸದಸ್ಯರಾದ ಸುಧಾ, ಪದ್ಮಾವತಿ, ಆರ್.ಸಾಲಮ್ಮ, ಭಾಗ್ಯಶ್ರೀ, ಕೆ.ಎಂ. ಹಾಲಪ್ಪ, ಗ್ರೀನ್ ಫೌಂಡೇಶನ್ ಸಂಸ್ಥೆ ಸಂಸ್ಥಾಪಕ ವಿನೋಧ್, ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್, ಮುಖಂಡರಾದ ಟಿ.ಕೆ. ಕಾಮೇಶ್, ಜಂಗ್ಲಿಸಾಬ್, ಬಾವಿಶಿವಕುಮಾರ್, ದೊಡ್ಡಬಸಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?