ಮಿಡತೆ ಪ್ರತ್ಯಕ್ಷ: ಅಧಿಕಾರಿಗಳಿಂದ ಪರಿಶೀಲನೆ
Team Udayavani, Jun 5, 2020, 7:41 AM IST
ಸಿರುಗುಪ್ಪ: ತಾಲೂಕಿನ ಟಿ. ರಾಂಪುರ ಗ್ರಾಮದ ಜಮೀನುಗಳಲ್ಲಿ ಮಿಡತೆಗಳು ಕಂಡುಬಂದಿದ್ದು, ಸ್ಥಳಕ್ಕೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ| ಕೆ. ಮಲ್ಲಿಕಾರ್ಜುನ ಹಾಗೂ ಹಗರಿ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿ ಡಾ| ಆನಂದ್ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಗರಿ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿ ಡಾ| ಆನಂದ್ಕುಮಾರ್ ಮಾತನಾಡಿ, ತಾಲೂಕಿನ ಟಿ.ರಾಂಪುರ ಗ್ರಾಮದ ಹಗರಿ ದಡದಲ್ಲಿರುವ ಬಳ್ಳಾರಿ ಜಾಲಿ ಬೆಳೆದಿರುವ ಪ್ರದೇಶದಲ್ಲಿ ಮಿಡತೆಗಳು ಕಂಡುಬಂದಿದ್ದು, ಇವುಗಳನ್ನು ಪರಿಶೀಲಿಸಲಾಗಿ ಈ ಮಿಡತೆಗಳು ಆಫ್ರಿಕಾದ ಮರುಭೂಮಿಯಿಂದ ಬಂದಿರುವ ಮಿಡತೆಗಳಲ್ಲ, ಸ್ಥಳಿಯ ಮಿಡತೆಗಳಾಗಿದ್ದು, ಇವುಗಳು ವಾತಾವರಣ ತಂಪಾಗಿರುವುದರಿಂದ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಿಡತೆಗಳು ಹೊರಬಂದಿರುವುದರಿಂದ ಗುಂಪು ಗುಂಪಾಗಿ ಕಾಣುತ್ತಿವೆ. ಆದರೆ ಈ ಮಿಡತೆಗಳು ರೈತರು ಬೆಳೆದ ಯಾವುದೇ ಬೆಳೆಗಳನ್ನು ತಿನ್ನುವುದಿಲ್ಲ. ಕೇವಲ ಬಳ್ಳಾರಿ ಜಾಲಿ ಗಿಡದ ಎಲೆಗಳನ್ನು ತಿನ್ನುತ್ತವೆ. ರೈತರ ಬೆಳೆಗೆ ಯಾವುದೇ ರೀತಿಯಲ್ಲಿ ಹಾನಿ ಉಂಟು ಮಾಡುವುದಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ| ಕೆ. ಮಲ್ಲಿಕಾರ್ಜುನ, ಜಿಲ್ಲಾ ಉಪಕೃಷಿ ನಿರ್ದೇಶಕ ಸಿ.ಆರ್. ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್, ಕೃಷಿ ಅಧಿ ಕಾರಿ ಹೇಮ್ಲಾನಾಯ್ಕ, ರೈತ ಮುಖಂಡರಾದ ವಾ. ಹುಲಿಗೆಯ್ಯ, ಮಂಜುನಾಥ, ಆದಿಬಸವ, ನಾಗರಾಜ, ಬಸವರಾಜ, ರಾಮಣ್ಣ, ಯಲ್ಲಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?