ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಪ್ರತಿಭಟನೆ
Team Udayavani, Jan 5, 2021, 2:25 PM IST
ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸೋಮವಾರ 22ನೇ ದಿನ ಪೂರ್ಣಗಳಿಸಿದ್ದು, ಬಳ್ಳಾರಿ ರಾಘವ ಮೆಮೋರಿಯಲ್ ಅಸೋಸಿಯೇಷನ್ಧರಣಿ ನಡೆಸಿತು.
ನಗರದ ರಾಘವ ಕಲಾ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಸೋಸಿಯೇಷನ್ಪದಾಧಿಕಾರಿಗಳು, ಸದಸ್ಯರು ಪ್ರತಿಭಟನಾ ಮೆರವಣಿಗೆ ಮೂಲಕಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.
ಅಸೋಸಿಯೇಷನ್ ಅಧ್ಯಕ್ಷ ಕೆ. ಕೊಟೆಶ್ವರ ರಾವ್, ಗೌರವಾಧ್ಯಕ್ಷ ಕೆ.ಚನ್ನಪ್ಪ, ಉಪಾಧ್ಯಕ್ಷರುಗಳಾದ ಕೆ.ರಾಮಾಂಜನೇಯಲು, ಎನ್.ಬಸವರಾಜ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ಜಂಟಿಕಾರ್ಯದರ್ಶಿ ಕೆ ಪೊಂಪನಗೌಡ, ಸದಸ್ಯರು,ಕಲಾವಿದರುಗಳಾದ ಜೆ. ಪ್ರಭಾಕರ, ಕೆ. ಕೃಷ್ಣ,ಎನ್ ಪ್ರಕಾಶ್ ,ಚೆಲ್ಲಾ ಅಮರೇಂದ್ರನಾಥಚೌಧರಿ, ಜಿ. ಗೋಪಾಲ ಕೃಷ್ಣ, ಎಂ. ಶೇಷರೆಡ್ಡಿ, ಪಲ್ಲೇದ ನಾಗರಾಜ್, ಸುಬ್ಬಣ್ಣ,ಲಾಲ್ರೆಡ್ಡಿ, ಜಿ.ಆರ್. ವೆಂಕಟೇಶಲು, ದೇವಣ್ಣ, ಕೆ.ಶ್ಯಾಮಸುಂದರ್, ಟಿ.ಜಿ.ವಿಠಲ್, ಕಪ್ಪಗಲ್ಲು ಚಂದ್ರಶೇಖರ, ನೇತಿ ರಘುರಾಮ, ವರಲಕ್ಷ್ಮೀ, ಆದೋನಿ ವೀಣಾ, ಕೃಷ್ಣ, ಜಿಲಾನಿ ಬಾಷ, ಶ್ರೀರಾಮುಲು, ರಮಣಪ್ಪ ಭಜಂತ್ರಿ, ಸತ್ಯ ನಾರಾಯಣ, ಸುರೇಂದ್ರ ಬಾಬು, ಲತಾ, ಮಹಾಂತೇಶ ಇದ್ದರು.
ಸಾಂಸ್ಕೃತಿಕವಾಗಿ ಹಿರಿಮೆ ಗರಿಮೆಯಿಂದ ಕೂಡಿದ್ದ ಅಖಂಡ ಬಳ್ಳಾರಿ ಜಿಲ್ಲೆಯನ್ನುವಿಭಜನೆ ಮಾಡಿದ ಸರ್ಕಾರದ ನಿರ್ಧಾರ ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಯ ಎಲ್ಲಸಂಘಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಿನಿರ್ಧರಿಸಲಿ ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ