ಹತ್ತಿಗೆ ಕೆಂಪು ರೋಗ: ಬೆಳೆಗಾರರಿಗೆ ನಷ್ಟ

671 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಹತ್ತಿ

Team Udayavani, Aug 5, 2020, 3:50 PM IST

ballary-tdy-1

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಹತ್ತಿ ಬೆಳೆದ ರೈತರು ಬೆಲೆ ಕುಸಿತ, ಇಳುವರಿ ಕುಂಠಿತ, ಕೆಂಪು ರೋಗಕ್ಕೆ ತುತ್ತಾಗಿರುವ ಹತ್ತಿ ಬೆಳೆಗಾರರಿಗೆ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಿದೆ.

ಆರಂಭದಲ್ಲಿ ಹತ್ತಿ ಬೆಳೆ ನಳನಳಿಸುತ್ತ ಈ ಬಾರಿ ಬಂಪರ್‌ ಬೆಳೆ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ, ಬಿಸಿಲಿನ ಪ್ರಮಾಣ ಕಡಿಮೆಯಾದಂತೆ ಹತ್ತಿ ಬೆಳೆಗಾರರ ಮುಖಗಳು ಬಾಡಿದಂತಾಗಿವೆ. ತಾಲೂಕಿನ ಬನ್ನಿಗೋಳ, ಕೃಷ್ಣಪುರ, ತಂಬ್ರಹಳ್ಳಿ, ಹಂಪಸಾಗರ, ಕೋಗಳಿ, ಬಸರಕೋಡು, ಚಿಲುಗೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಅಧಿಕ ಹತ್ತಿಯನ್ನು ಬೆಳೆದಿದ್ದು ನಷ್ಟದ ಭೀತಿಯಲ್ಲಿದ್ದಾರೆ. ಕಳೆದ ಸಾಲಿನಲ್ಲಿ ಹತ್ತಿಗೆ 5 ಸಾವಿರಕ್ಕೂ ಹೆಚ್ಚು ಬೆಲೆ ನಿಗದಿಯಾಗಿದ್ದರಿಂದ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದರು. ಈ ಬಾರಿ 4 ಸಾವಿರಕ್ಕೆ ಹತ್ತಿ ದರ ಇಳಿದಿದ್ದರಿಂದ ಹತ್ತಿ ಬೆಳೆಗಾರರು ಹತ್ತಿ ಬೆಳೆ ಸಹವಾಸ ಬೇಡ ಎಂಬಂತಾಗಿದ್ದಾರೆ.  ಹತ್ತಿ ದರದ ಕುಸಿತದ ಜೊತೆಗೆ ಹತ್ತಿ ಬಿಡಿಸುವ ಕೂಲಿಕಾರರು ಕೂಲಿ ಮೊತ್ತವನ್ನು ದಿಢೀರ್‌ ಹೆಚ್ಚಿಸಿರುವುದರಿಂದ ಜಿಟಿಜಿಟಿ ಮಳೆಗೆ ಹತ್ತಿ ಗಿಡದಲ್ಲಿಯೇ ಕೊಳೆತು ಹೋಗಲಾರಂಭಿಸಿದೆ.

ಮಾರುಕಟ್ಟೆ ಕೊರತೆ: ಹತ್ತಿ ಬೆಳೆಯನ್ನು ತಾಲೂಕಿನಲ್ಲಿ ಹೆಚ್ಚು ಬೆಳೆಯುತ್ತಿದ್ದರೂ ಈವರೆಗೂ ಹತ್ತಿ ಮಾರುಕಟ್ಟೆ ಮಾಡುವ ಗೊಡವೆಗೆ ಜನಪ್ರತಿನಿಧಿಗಳು ಹೋಗಿಲ್ಲ. ಬಳ್ಳಾರಿ, ಕೊಟ್ಟೂರು ವರ್ತಕರು ಹತ್ತಿ ಖರೀದಿ ಮಾಡುತ್ತಿದ್ದು ಅಗ್ಗಕ್ಕೆ ಮುಗ್ಗಿನ ಜೋಳ ಎಂಬಂತೆ ಖರೀದಿ ಮಾಡುತ್ತಾರೆ. ರೈತರ ಹತ್ತಿ ಖಾಲಿಯಾದಂತೆಲ್ಲಾ ಹತ್ತಿ ದರ ಗಗನಕ್ಕೆ ಏರುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಇಂಥ ಕೊರೊನಾದಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಳೆಗಾರರ ಸಂಕಷ್ಟವನ್ನು ಯಾರು ಕೇಳದಾಗಿದ್ದಾರೆ.

ರೋಗಬಾಧೆ: ಮುಂಗಾರು ಆರಂಭದಲ್ಲಿ ಮಳೆಯಾದ್ದರಿಂದ ಜೊತೆಗೆ ಬಿಸಿಲು ಉತ್ತಮವಾಗಿ ಬಿದ್ದಿದ್ದರಿಂದ ಹತ್ತಿ ಬೆಳೆ ಸೊಂಪಾಗಿ ಬೆಳೆದಿದ್ದವು. ನಂತರ ಬಿಸಿಲು ವಾತಾವರಣ ಕಡಿಮೆಯಾಗಿ, ಜಿಟಿಜಿಟಿ ಮಳೆ ಸುರಿದಿದ್ದರಿಂದ ಹತ್ತಿ ಬೆಳೆಗಳು ಸಂಪೂರ್ಣ ಕೆಂಪು ರೋಗಕ್ಕೆ ತಿರುಗಿದವು. ಬೆಳೆಗಾರರು ಸಾಕಷ್ಟು ಔಷಧ ಸಿಂಪಡಣೆ ಮಾಡಿದರೂ ಸಾರ್ಥಕವಿಲ್ಲದಂತಾಗಿದೆ. ಮೂರು ನಾಲ್ಕು ಬಾರಿ ಬಿಡಿಕೆಗೆ ಬರುತ್ತಿದ್ದ ಹತ್ತಿ ಕೆಂಪು ರೋಗಕ್ಕೆ ತಿರುಗಿ ಕೇವಲ ಒಂದು ಬಾರಿ ಹತ್ತಿ ಬಿಡಿಸಿ ಅರಗುವಂತಾಗಿದೆ.

ತಾಲೂಕಿನಲ್ಲಿ 671ಹೆಕ್ಟೇರ್‌ ಹತ್ತಿ ಬೆಳೆಯಲಾಗಿದೆ. ತಂಬ್ರಹಳ್ಳಿ ಹಂಪಸಾಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯಲಾಗಿದೆ. ಕಾಯಿಕೊರಕ ಹುಳು, ರಸಹೀರುವ ಕೀಟ, ಕೆಂಪು ರೋಗ ಹೆಚ್ಚಾಗಿ ಬಿದ್ದಿದ್ದರಿಂದ ಹತ್ತಿ ಇಳುವರಿ ಪ್ರಮಾಣ ಕುಂಠಿತವಾಗಿದೆ. – ಜೀವನ್‌ಸಾಬ್‌,ಕೃಷಿ ಸಹಾಯಕ ನಿರ್ದೇಶಕರು ಹಗರಿಬೊಮ್ಮನಹಳ್ಳಿ

ಹತ್ತಿ ಬೆಳೆ ಪ್ರತಿ ಎಕರೆಗೆ 20 ಸಾವಿರ ರೂ. ಖರ್ಚು ಬರುತ್ತದೆ. ಈ ಬಾರಿ ಹತ್ತಿಗೆ ಕಡಿಮೆ ಬೆಲೆ ಇರುವುದರಿಂದ ಲಾಭ ತೆಗೆಯೋದು ಬಹಳ ಕಷ್ಟ. ಹತ್ತಿ ಬಿಡಿಸುವ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚು ಇರುವುದರಿಂದ ಹತ್ತಿ ಗಿಡದಲ್ಲಿ ಕೊಳೆತು ಹೋಗುತ್ತಿದೆ. ಸರಕಾರ ಹತ್ತಿ ಬೆಳೆಗಾರರಿಗೆ ಬೆಳೆನಷ್ಟ ಪರಿಹಾರ ಕೊಟ್ಟರೆ ಕೋವಿಡ್ ಸಂಕಷ್ಟದಲ್ಲಿ ನೆನೆಸಿಕೊಳ್ಳುತ್ತೇವೆ. -ಮೈಲಾರ ಚನ್ನಬಸವ, ಹತ್ತಿ ಬೆಳೆಗಾರ

 

-ಸುರೇಶ ಯಳಕಪ್ಪನವರ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.