ರೈತನಿರ ಬದುಕಿಗೆ ಹುಳಿ ಹಿಂಡಿದ ದರ!
Team Udayavani, Jan 24, 2019, 7:34 AM IST
ಕೊಟ್ಟೂರು: ಈ ಬಾರಿಯೂ ಕೊಟ್ಟೂರು ತಾಲೂಕಿನಲ್ಲಿ ಮಳೆ, ಬೆಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಈ ಬರದ ನಡುವೆಯೂ ಹುಣಸೆ ಹಣ್ಣು ಉತ್ತಮ ಇಳುವರಿ ಬಂದಿದೆ.ಆದರೆ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ರೈತರ ಜಮೀನಿನ ಬದುಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಹುಣಸೆ ಮರಗಳು ಇವೆ. ಈ ಬಾರಿ ಮಳೆ ಇಲ್ಲದಿದ್ದರೂ ಅಂದಾಜು 6 ಸಾವಿರ ಮರಗಳಲ್ಲಿ ಉತ್ತಮ ಹುಣಸೆ ಹಣ್ಣಿನ ಫಲ ಬಂದಿದೆ. ಕಳೆದ ವರ್ಷ ಶೇ.50ರಷ್ಟು ಇಳುವರಿ ಬಂದರೆ, ಪ್ರಸಕ್ತ ವರ್ಷ ಶೇ.75ರಷ್ಟು ಇಳುವರಿ ಬಂದಿದೆ.
ಹೆಚ್ಚು ಮರಗಳನ್ನು ಹೊಂದಿರುವ ತಾಲೂಕಿನ ರಾಂಪುರ, ಬೋರನಹಳ್ಳಿ, ಚಿರಿಬಿ, ಕಾಳಾಪುರ, ಹುಣಸಿಕಟ್ಟೆ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಹುಣಸೆ ಮರಗಳು ಬೋಳಾಗಿದ್ದರೂ ಈ ವರ್ಷ ಉತ್ತಮ ಬೆಳೆ ಬಂದಿದೆ.
ದರ ಕುಸಿತ: ಕಳದೆ ವರ್ಷ 1 ಕೆ.ಜಿ. ಹುಣಸೆ ಹಣ್ಣಿನ ಬೆಲೆ 180 ರಿಂದ 200 ರೂ.ವರೆಗೆ ಇತ್ತು. ಈ ವರ್ಷ ಸ್ವಲ್ಪ ಉತ್ತಮ ಇಳುವರಿ ಬಂದ ಪರಿಣಾಮ ಮಾರುಕಟ್ಟೆಯಲ್ಲಿ 1 ಕೆ.ಜಿ. ಹುಣಸೆ ಹಣ್ಣಿಗೆ 80 ರಿಂದ 100 ರೂ.ಗೆ ಕುಸಿದಿದೆ. ಈ ಬಾರಿ ಮಳೆ, ಬೆಳೆ ಇಲ್ಲದೆ ಕೈಸುಟ್ಟುಕೊಂಡಿದ್ದ ರೈತರಿಗೆ ಯಾವುದೇ ಖರ್ಚಿಲ್ಲದ ಹುಣಸೆ ಹಣ್ಣಿನ ಫಲ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಹುಣಸೆ ಹಣ್ಣಿನ ದರ ಕುಸಿತದಿಂದ ಅನ್ನದಾತರು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ಅಲ್ಲದೇ ಮರ ಏರಿ ಹುಣಸೆ ಹಣ್ಣು ಬಡಿಯಲು ಕೂಲಿ ಕಾರ್ಮಿಕರಿಗೆ ದಿನಕ್ಕೆ 350 ರೂ. ಕೂಲಿ ಕೊಡಬೇಕು. ಆದರೆ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತರು ಇತ್ತ ಲಾಭವಿಲ್ಲದೆ, ಅತ್ತ ಕೂಲಿ ಕೊಡುವುದಕ್ಕೂ ಹಣ ಇಲ್ಲದಂತಾಗಿದೆ.
ದುರುಗಪ್ಪ, ಹುಣಸೆ ಹಣ್ಣು ಬೆಳೆದ ರೈತ.
ಕಳೆದ ವರ್ಷಕ್ಕಿಂತ ಈ ವರ್ಷ ಹುಣಸೆ ಹಣ್ಣು ಉತ್ತಮ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ನಿಗದಿತ ಬೆಲೆ ಇಲ್ಲದಂತಾಗಿದೆ. ಒಬ್ಬ ಕೂಲಿ ಕಾರ್ಮಿಕರಿಗೆ ದಿನಕ್ಕೆ 350 ರೂ. ಕೊಡಬೇಕು. ಮಹಿಳೆಯರಿಗೆ ದಿನಕ್ಕೆ 150 ರೂ. ಕೊಡಬೇಕು. ಆದರೆ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ದರ 80ರಿಂದ 100 ರೂ.ಕ್ಕಿಂತ ಕೂಲಿನೆ ಹೆಚ್ಚಾಗಿ, ಲಾಭ ಇಲ್ಲದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು