ಮೆರುಗು ತಂದ ನಾರಿಯರ ಸೀರೆ ಸೌಂದರ್ಯ


Team Udayavani, Nov 6, 2017, 11:04 AM IST

171105kpn97.jpg

ಹಂಪಿ: ವಿಶ್ವ ವಿಖ್ಯಾತ ಹಂಪಿ ಉತ್ಸವದ 2017ನೇ ಸಾಲಿನ ಅವತರಣಿಕೆ ಸಾಕಷ್ಟು ವಿಶೇಷಗಳಿಂದ ಕೂಡಿದ್ದು, ಶನಿವಾರ ತಡ ರಾತ್ರಿ ಗಾಯತ್ರಿ ಪೀಠದ ವೈಭವಯುತ ವೇದಿಕೆಯಲ್ಲಿ ಬೆಂಗಳೂರಿನ ಖ್ಯಾತ ವಸ್ತ್ರ ವಿನ್ಯಾಸಗಾರ ಅಶೋಕ್‌ ಮನ್ನೇ ಸೃಷ್ಟಿಸಿದ ಹಾಗೂ ವಿನ್ಯಾಸ ಮಾಡಿದ ಉಡುಪು, ಸೀರೆಗಳನ್ನು ಧರಿಸಿದ 120ಕ್ಕೂ ಅಧಿಕ ರೂಪದರ್ಶಿಯರು ಮಾರ್ಜಾಲ ನಡಿಗೆಯ ಮೂಲಕ ತಮ್ಮ ಬೆಡಗು-ಬಿನ್ನಾಣಗಳನ್ನು ಪ್ರದರ್ಶಿಸಿದರು.

ಕಾರ್ತಿಕ ಹುಣ್ಣಿಮೆಯ ಬೆಳದಿಂಗಳಿನಲ್ಲಿ ನೂರಾರು ಸುರಸುಂದರಿಯರು ಅಶೋಕ್‌ಮನ್ನೇ ಅವರು ವಿನ್ಯಾಸಗೊಳಿಸಿದ ಸೀರೆಗಳನ್ನು ಧರಿಸಿ ತಮ್ಮ ಬಳುಕಿನ ನಡೆಯ ಮೂಲಕ ನಡೆದರು. ನೆರೆದಿದ್ದ ಸಹಸ್ರಾರು ಮಹಿಳೆಯರು, ಗಣ್ಯ ಕುಟುಂಬದ ಮಹಿಳೆಯರು ಸೀರೆಗಳ ವಿನ್ಯಾಸಕ್ಕೆ ಮನಸೋತರು. ಬೆಂಗಳೂರಿನ ವೈಬ್‌ ಫ್ಯಾಶನ್‌ ಸಂಸ್ಥೆ ಈ ಫ್ಯಾಶನ್‌ ಶೋ ನಿರ್ವಹಿಸಿದ್ದು, ರ್‍ಯಾಂಪ್‌ ಮೇಲೆ ಇರಿಸಿದ್ದ ಕಾರ್ತಿಕ ಮಾಸದ ಸಾಂಪ್ರದಾಯಿಕ ದೀಪಗಳು ಮೆರುಗನ್ನು ಹೆಚ್ಚಿಸಿದವು. ಪಾಶ್ಚಾತ್ಯ ಶೈಲಿಯ ಫ್ಯಾಶನ್‌ ಶೋಗೆ ಭಾರತೀಯ ವಸ್ತ್ರ ವೈವಿಧ್ಯತೆಯ ಮೇರು ಸ್ಥಾನದಲ್ಲಿರುವ ಸೀರೆಗಳು ಹೊಸ ಆಯಾಮ ನೀಡುವುದರ ಜೊತೆಗೆ ಆಧುನಿಕತೆಗೆ ಸಂಪ್ರದಾಯಿಕ ಸ್ಪರ್ಶ ನೀಡಿದವು.

ದಿಗಂತ್‌-ಐಂದ್ರತಾ ರೈ: ಅಶೋಕ್‌ ಮನ್ನೇ ಅವರ ವಸ್ತ್ರ ವಿನ್ಯಾಸದ ಬೆಡಗಿಗೆ ನಟ ದಿಗಂತ್‌ ಹಾಗೂ ಕರಾವಳಿ ಬೆಡಗಿ ಐಂದ್ರಿತಾ ರೈ ಕಳೆ ತಂದರು. ಮೊದಲಿಗೆ ಕರಾವಳಿಯ ಯಕ್ಷಗಾನ ವೇಷಧಾರಿಗಳೊಂದಿಗೆ ರ್‍ಯಾಂಪ್‌ ವಾಕ್‌ ಮಾಡಿದ ದಿಗಂತ್‌ ಮಿರುಗುವ ಜರಿಯ ಕುಸುರಿಯಿದ್ದ ಕೆಂಪು ಬಣ್ಣದ ರೇಷ್ಮೆ ವಸ್ತ್ರದಲ್ಲಿ ರೂಪಿಸಿದ ಮಹಾರಾಜ ಪೋಷಾಕು ಹಾಗೂ ವಿಜಯನಗರ ಮಹಾರಾಜರ ಪೇಟಾ ಧರಿಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ನಟಿ ಐಂದ್ರಿತಾ ರೈ ಕನಕಾಂಬರ ಬಣ್ಣದ ರೇಶ್ಮೆ ಸೀರೆಯಲ್ಲಿ ತಳುಕು-ಬಳುಕಿನ ನಡೆಯೊಂದಿಗೆ ಆಗಮಿಸಿ ನೆರೆದಿದ್ದ ಪ್ರೇಕ್ಷಕರ ಶಿಳ್ಳೆ, ಕರತಾಡನಗಳಿಸಿದರು.
ಎಂ. ಮುರಳಿಕೃಷ

ಉತ್ತರ ಕರ್ನಾಟಕದ ಪ್ರಖ್ಯಾತ ಇಳಕಲ್‌ ಸೀರೆ ಹಾಗೂ ಮುದುಗಲ್‌ ಸೀರೆ ನೇಯುವ ನೇಕಾರರ ಸಹಸ್ರಾರು ಕುಟುಂಬಗಳು ಇಂದು ಸಂಕಷ್ಟದಲ್ಲಿವೆ. ವಿಶ್ವ ಮಟ್ಟದಲ್ಲಿ ಅವರ ಕುಶಲ ಕಲೆಗಳಿಗೆ ವೇದಿಕೆ ನೀಡಬೇಕು ಎನ್ನುವ
ಚಿಂತನೆಯೊಡನೆ ಈ ವಸ್ತ್ರ ವಿನ್ಯಾಸ ಪ್ರದರ್ಶನ ಏರ್ಪಡಿಸಿದ್ದೆವು. 
ಸಂತೋಷ್‌ ಲಾಡ್‌, ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ. 

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.