ಅಣ್ಣಾಭಾವು ಸಾಠೆ ಜಯಂತಿ ಸರ್ಕಾರ ಆಚರಿಸಲಿ: ಖೂಬಾ
Team Udayavani, Sep 2, 2017, 11:51 AM IST
ಬಸವಕಲ್ಯಾಣ: ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಅಣ್ಣಾಭಾವು ಸಾಠೆ ಅವರ ಜಯಂತಿಯನ್ನು
ಪ್ರತಿವರ್ಷ ಸರ್ಕಾರದಿಂದಲೇ ಆಚರಿಸಬೇಕು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿಸಿದರು.
ನಗರದ ಧರ್ಮ ಪ್ರಕಾಶ ಗಲ್ಲಿಯ ಶರಣ ನೂಲಿಯ ಚಂದಯ್ಯ ಭವನದಲ್ಲಿ ಆದಿ ಜಾಂಬವ ಮಾದಿಗ ಸಮಾಜ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಶರಣ ಮಾದರ ಚನ್ನಯ್ಯ ಪಂಚ ಕಮಿಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಅವರ 97ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ಜಯಂತಿ ಆಚರಿಸುವ ಕುರಿತು ಎಲ್ಲರೂ ಸೇರಿ ಸರ್ಕಾರಕ್ಕೆ ಒತ್ತಾಯಿಸೋಣ ಎಂದರು.
ಮುಂಬೈನ ಆರ್ಟಿಒ ಸಂಜಯ ವಾಡೇಕರ್ ಉಪನ್ಯಾಸ ನೀಡಿ, ಒಂದೂವರೆ ದಿನ ಶಾಲೆಗೆ ಹೋದ ಅಣ್ಣಾಭಾವು
ಸಾಠೆಯವರು 35 ಕಾದಂಬರಿಗಳನ್ನು, 300ಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಜಾಗತಿಕ ಮಟ್ಟದ
ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಬಣ್ಣಿಸಿದರು.
ಉಪನ್ಯಾಸಕ ಪ್ರಹ್ಲಾದ ಚಂಗಟೆ ವಿಶೇಷ ಉಪನ್ಯಾಸ ನೀಡಿದರು. ಪಂಚ ಕಮಿಟಿ ಅಧ್ಯಕ್ಷ ಘಾಳೆಪ್ಪ ಮುಜನಾಯಕ
ಅಧ್ಯಕ್ಷತೆ ವಹಿಸಿದ್ದರು. ಆದಿ ಜಾಂಬವ ಮಾದಿಗ ಸಮಾಜ ಸಂಘದ ಅಧ್ಯಕ್ಷ ಯುವರಾಜ ಭೆಂಡೆ ಸ್ವಾಗತಿಸಿ ಪ್ರಾಸ್ತಾವಿಕ
ಮಾತನಾಡಿದರು. ಶರಣೆ ಚಿತ್ರಮ್ಮ ತಾಯಿ, ನಗರ ಸಭೆ ಸದಸ್ಯೆ ಕಾವೇರಿ ಭೆಂಡೆ, ಮುಖಂಡರಾದ ದಿಲೀಪ ಸಿಂಧೆ,
ಮನೋಹರ ಮೈಸೆ, ಕೇಶಪ್ಪ ಬಿರಾದಾರ, ಸಂದೀಪ ಬುಯೆ, ಶಬ್ಬೀರ ಪಾಶಾ ಮುಜಾವರ, ವಾಲ್ಮೀಕ ಖನಕೂರೆ,
ಕಾಳಿದಾಸ ಜಾಧವ, ದಿಲೀಪಗೀರ ಗೋಸ್ವಾಮಿ, ಸಮಾಜದ ಪ್ರಮುಖರಾದ ಅಶೋಕ ಸಂಗನೂರೆ, ತುಕಾರಾಮ
ಲಾಡೆ, ದತ್ತು ಗೋರಾ, ಸಂಜುಕುಮಾರ ಸಂಗನೂರೆ ದಿಗಂಬರ ಜಲೆª, ಪ್ರದೀಪ ಢಗಳೆ, ಶ್ರೀನಿವಾಸ ಜಲೆª, ದತ್ತು
ಭೆಂಡೆ, ಅಜಯ ಕೊಟನೂರೆ, ಆನಂದ ಮುಜನಾಯಕ, ಪ್ರವೀಣ ಆಲಗೂಡೆ, ವಿಜಯಕುಮಾರ ಭೆಂಡೆ,
ದತ್ತು ಗೌರ, ಲಕ್ಷ್ಮಣ ತಂಬುರ್ಜಿ ಭಾಗವಹಿಸಿದ್ದರು. ರಮೇಶ ಉಮ್ಮಾಪೂರೆ ನಿರೂಪಿಸಿದರು. ಇದಕ್ಕೂ ಮುನ್ನ
ಅಣ್ಣಾಭಾವು ಸಾಠೆ ಅವರ ಭಾವಚಿತ್ರ ಮೆರವಣಿಗೆ ಜರುಗಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ ಎಗರಿಸಿದ ಖದೀಮ
Bidar; ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್
Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು
Bidar; ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ
ಏ… ಇದು ನನ್ ಸೀಟು… ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು
MUST WATCH
ಹೊಸ ಸೇರ್ಪಡೆ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್ ಲಾರಿ; ಟ್ರಾಫಿಕ್ ಜಾಮ್
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ