ವಚನ ಸವೆಯದ ಸಂಪತ್ತು: ಅನ್ನಪೂರ್ಣ

"ಗುರುವಚನ' ಸಾಮೂಹಿಕ ಪಾರಾಯಣ ಕಾರ್ಯಕ್ರಮ ಮಹಿಳಾ ಜಾಗೃತಿ ಸಮಾವೇಶ

Team Udayavani, Feb 9, 2020, 1:14 PM IST

09-February-13

ಬೀದರ: ವಚನಗಳು ಶರಣರು ವಿಶ್ವಕ್ಕೆ ನೀಡಿದ ಸವೆಯದ ಸಂಪತ್ತು. ವಚನ ಪಾರಾಯಣವು ಕೋಟಿ ಜಪದ ಪ್ರತಿಫಲವನೀಯುತ್ತವೆ. ವಚನಗಳು ಸುಖ-ಶಾಂತಿ-ನೆಮ್ಮದಿಯ ಬದುಕಿನ ಸೂತ್ರಗಳು. ವಚನಗಳು ಶ್ರೇಷ್ಠ ಮಂತ್ರಗಳು ಎಂದು ಶ್ರೀ ಅಕ್ಕ ಅನ್ನಪೂರ್ಣತಾಯಿ ಹೇಳಿದರು.

ನಗರದ ಬಸವಗಿರಿಯಲ್ಲಿ ನಡೆಯುತ್ತಿರುವ 17ನೇ ವಚನ ವಿಜಯೋತ್ಸವದ ಎಡರನೇ ದಿನ ಶನಿವಾರ ಬೆಳಗ್ಗೆ ಲಿಂಗಾಯತ ಧರ್ಮಗ್ರಂಥ “ಗುರುವಚನ’ ಸಾಮೂಹಿಕ ಪಾರಾಯಣದ ಸಾನಿಧ್ಯವಹಿಸಿ ಅನುಭಾವ ನೀಡಿದರು.

ವಚನಗಳಲ್ಲಿ ಶರಣ ದರ್ಶನವಿದೆ. ದೇವದಾರಿಯಿದೆ, ಜೀವನ ದರ್ಶನವಿದೆ. ವಚನ ಸಾಹಿತ್ಯದಲ್ಲಿ ಮನೆ ಮಹಾಮನೆ. ಆದ್ದರಿಂದ ಮನೆ ಮನೆಗಳಲ್ಲಿ ವಚನ ಸಾಹಿತ್ಯದ ಸೌರಭ ಹರಡಲಿ. ವಚನಗಳನ್ನು ಓದುವ ಸಂಸ್ಕೃತಿ ಬೆಳೆಸುವ ಗುರಿಯಿಂದ ವಚನ ಪಾರಾಯಣ ಕಾರ್ಯಕ್ರಮ ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಇಂಥ ಕಾರ್ಯಕ್ರಮ ಲಿಂಗಾಯತ ಮಹಾಮಠದಲ್ಲಿ ಮಾತ್ರ ಜರುಗುತ್ತಿರುವುದು ವಿಶೇಷ. ಬಸವಾದಿ ಶರಣರ ಅಧ್ಯಾತ್ಮ ಮಂಥನದಿಂದ ಉದಿಸಿ ನವನೀತವಾಗಿರುವ ವಚನಗಳು ಉತ್ತಮ ಸಂಸ್ಕೃತಿಯ ಗುಣಗಳಾದ ಶ್ರದ್ಧೆ, ಭಕ್ತಿ, ಜ್ಞಾನ, ವಿನಯ, ಧೈರ್ಯ, ಸಮತೆ, ಸ್ವಾತಂತ್ರ್ಯ, ಸಹಜತೆಗಳನ್ನು ಹೊಂದಿದ್ದು, ಪರಿಪೂರ್ಣ ಜೀವನ ಕಟ್ಟಿಕೊಡುವವು. ವಚನಗಳು ಹಬ್ಬಕ್ಕೆ ತೊಡುವ ಆಭರಣಗಳಾಗದೆ ದಿನನಿತ್ಯದ ಧರಿಸುವ ಬಟ್ಟೆಗಳಾಗಬೇಕೆಂದು ಅಕ್ಕನವರು ಕರೆಯಿತ್ತರು.

ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ಬಸವರಾಜ ಸಾದರ ಮಾತನಾಡಿ, ಶರಣರು ಕಷ್ಟಪಟ್ಟು ಉಳಿಸಿದ ವಚನ ಸಾಹಿತ್ಯದ ಸಂದರ್ಭ ನೆನೆಯುವುದೇ ವಚನ ವಿಜಯೋತ್ಸವ. ಶರಣರು ಕೋಟಿ ಕೋಟಿ ವಚನಗಳನ್ನು ಬರೆದಿದ್ದಾರೆ. ನಮಗೆ ಸಿಕ್ಕಿದ್ದು ಕೇವಲ 16 ಸಾವಿರ ವಚನಗಳು. ಸಿಕ್ಕಿದ್ದರಲ್ಲೆ ಸಂಭ್ರಮ ಪಡುವ ಸ್ಥಿತಿ ಇದೆ ಎಂದು ಹೇಳಿದರು.

ಮುಂದಿನ ಜಗತ್ತಿಗೆ ಗತಿ ಎಂದರೆ ಬಸವಣ್ಣ ಮತ್ತು ವಚನ ಸಾಹಿತ್ಯ. ಕರ್ನಾಟಕದ ತಲೆ ಬೀದರ ಅಲ್ಲ ಬಸವಣ್ಣ. ಈ ತಲೆ ಬಳಸಿಕೊಂಡು ರಾಜಕಾರಣ ಮಾಡಿದರೆ ಕಲ್ಯಾಣ ರಾಜ್ಯ ನಿರ್ಮಾಣ ಆಗುವುದರಲ್ಲಿ ಸಂದೇಹವಿಲ್ಲ. ಬಸವಣ್ಣನವರ ವ್ಯಕ್ತಿತ್ವ ಬಣ್ಣಿಸಲು ವರ್ಷ ಸಾಲದು. ಎಲ್ಲ ಜ್ಞಾನಗಳ ಒಟ್ಟು ಮೊತ್ತವೆ ಬಸವಣ್ಣ. ನಿಜವಾಗಿಯೂ ನೋಬೆಲ್‌ ಸಲ್ಲಬೇಕಾದದ್ದು ಬಸವಣ್ಣನವರಿಗೆ ಮತ್ತು ವಚನ ಸಾಹಿತ್ಯಕ್ಕೆ ಎಂದು ಹೇಳಿದರು.

ಡಾ| ಗಂಗಾಂಬಿಕೆ ಅಕ್ಕ ಸಾನ್ನಿಧ್ಯ, ಮಾತೆ ಅಕ್ಕನಾಗಲಾಂಬಿಕೆ, ಮಾತೆ ಶಾಂತಾದೇವಿ ನೇತೃತ್ವ ವಹಿಸಿದ್ದರು. ಶಿವಶಂಕರ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ಜಗದೀಶ ಖೂಬಾ, ಇಂಜಿನಿಯರ್‌ ಅಶೋಕ ಖಂಡ್ರೆ, ಬಸವನಬಾಗೇವಾಡಿಯ ವೀರಣ್ಣ ಮರ್ತೂರ್‌, ಅಭಿಯಂತರ ಮಹೇಶ ಘಾಳೆ, ಸಾಹಿತಿ ಶ್ರೀಧರ ಅಸಂಗಿಹಾಳ, ಕಸಾಪ ಅಧ್ಯಕ್ಷ ಜಗನ್ನಥ ಮೂಲಗೆ, ಬಸವನಗೌಡ ಪಾಟೀಲ, ಸಂತೋಷ ಮಲಶೆಟ್ಟಿ, ಸಂಜಯ ಇಂಡೆ, ನೀಲಾಂಬಿಕಾ ಕಳಕಪ್ಪ, ಇನಾಮತಿ ಹುಬ್ಬಳ್ಳಿ, ಸುಮಂಗಲಾ ಪ್ರಭು ಅಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಲಿಂಗಾಕ್ಷಿ ಖೇಣಿ, ಬಸವಪ್ರಿಯ, ಬಸವಗೌರಿ ಕಲಬುರ್ಗಿ ವಚನ ನೃತ್ಯ ನಡೆಸಿಕೊಟ್ಟರು. ಶಾಂತಾ ಖಂಡ್ರೆ ಸ್ವಾಗತಿಸಿದರು. ಜ್ಞಾನದೇವಿ ಬಬಚಡೆ ನಿರೂಪಿಸಿದರು. ಮಹಾನಂದಾ ಪಾಟೀಲ ಶರಣು ಸಮರ್ಪಿಸಿದರು.

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.