ಶರಣರ ವಾಣಿ ಆಲಿಸಿ ಪಾವನರಾಗಿ
ಜ್ಞಾನ ಸಂಪಾದನೆಗೆ ಒಲವು ತೋರಿ ದೇವ ನಾಮಸ್ಮರಣೆಗೆ ಆದ್ಯತೆ ನೀಡಿ
Team Udayavani, Jan 13, 2020, 1:33 PM IST
ಭಾಲ್ಕಿ: ಆಧುನಿಕ ವ್ಯಕ್ತಿ ಹಣ ಗಳಿಸುವ ನೆಪದಲ್ಲಿ ಧಾರ್ಮಿಕ ಕಾರ್ಯಗಳಿಂದ ದೂರ ಉಳಿಯುತ್ತಿರುವುದರಿಂದ ಕೌಟುಂಬಿಕ ಮಾಯಾ, ಮಮತೆ, ವಾತ್ಸಾಲ್ಯ, ಪ್ರೀತಿ, ವಿಶ್ವಾಸ ಪರಸ್ಪರರಲ್ಲಿ ಕ್ಷೀಣಿಸುತ್ತಿದೆ. ಮನುಷ್ಯ ತನ್ನ ಜೀವನ ಪಾವನ ಮಾಡಿಕೊಳ್ಳಲು ಸಂತರ, ಸತ್ಪರುಷರ, ಮಾಹಾತ್ಮರ, ಶರಣರ ವಾಣಿ ಆಲಿಸುವುದು ಅಗತ್ಯವಾಗಿದೆ ಎಂದು ಗುಂಜರಗಾದ ಕೀರ್ತನಕಾರ ರಾಜೇಶ ಪಾಟೀಲ ಮಹಾರಾಜ ಹೇಳಿದರು.
ಪಟ್ಟಣದ ಅಡತ ಬಜಾರನಲ್ಲಿರುವ ವಿಠ್ಠಲ ರುಕ್ಮೀಣಿ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ ಅಖಂಡ ಹರಿನಾಮ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಗಾಳಿ, ವಿದ್ಯುತ್ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಅದರ ಮಹಿಮೆ ಅಪಾರ, ಹಾಗೆ ಪ್ರಪಂಚದಲ್ಲಿ ದೇವರು ಗೋಚರವಾಗುವುದಿಲ್ಲ. ಆದರೆ ದೇವರ ಶಕ್ತಿ ಅಪಾರವಾಗಿದೆ. ಸಂತ ಜ್ಞಾನೇಶ್ವರ ಮಹಾರಾಜರು, ಸಂತ ತುಕಾರಾಮ ಮಹಾರಾಜರು ತಮ್ಮ ದೈವತ್ವದ ವಾಣಿಯಿಂದ ಭಕ್ತರು ಜೀವನ ಪರಿವರ್ತನೆ ಮಾಡುವಲ್ಲಿ ದೇವ ನಾಮಸ್ಮರಣೆಗೆ ಪ್ರಥಮಾದ್ಯತೆ ನೀಡಿದರು. ಭಕ್ತರು ತಾತ್ಕಾಲಿಕ ಭೌತಿಕ ಸುಖಕ್ಕೆ ಮರುಳಾಗದೆ ಆಧ್ಯಾತ್ಮಿಕ ಜ್ಞಾನ ಸಂಪಾದನೆಗೆ ಹೆಚ್ಚಿನ ಒಲವು ತೋರಬೇಕು ಎಂದು ಹೇಳಿದರು.
ಅಖಂಡ ಹರಿನಾಮ ಸಪ್ತಾಹ ಮತ್ತು ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಸಮಾರಂಭದಲ್ಲಿ ಕೀರ್ತನಕಾರ ಬಿಜಲಗಾಂವದ ಶಿವಾಜಿರಾವ ಮಹಾರಾಜ, ಭಾಲ್ಕಿಯ ನರಸಿಂಗರಾವ ತೋರಣೆಕರ್ ಗುರುಜಿ, ಮುಖೇಡದ ಜ್ಞಾನೇಶ್ವರ
ಮಹಾರಾಜ, ಪಂಢರಪುರದ ಏಕನಾಥ ಮಹಾರಾಜ ಹಂಡೆ, ಎಕಂಬಾದ ಅವಧೂತ ಮಹಾರಾಜ, ಲಖಣಗಾಂವದ ಚೈತನ್ಯ ಮಹಾರಾಜ ಮತ್ತು ಕಳಸದಾಳ, ಹುಪಳಾ, ವಳಸಂಗ, ಧಾರಜವಾಡಿ, ಕೊಟಗ್ಯಾಳವಾಡಿ ಗ್ರಾಮದ ಭಜನಾ ಮಂಡಳಿಗಳು ಕೀರ್ತನೆ, ಭಜನೆ ನಡೆಸಿಕೊಟ್ಟರು.
ಪ್ರೊ| ಡಿ.ಜಿ. ಬಿರಾದಾರ, ಬಾಲಾಜಿರಾವ ತುಕದೆ ಮತ್ತು ಡಿಗಂಬರರಾವ ಕೊಟಗ್ಯಾಳೆ ಪ್ರಸಾದ ದಾಸೋಹಿಗಳಾಗಿದ್ದರು. ಪ್ರಮುಖರಾದ ಯಾದವರಾವ ಕನಸೆ, ಪ್ರೊ| ರಾಜಕುಮಾರ ಪಾಟೀಲ, ಆತ್ಮಾರಾಮ ಬಿರಾದಾರ, ಮಾಧವರಾವ
ತಳವಾಡೆ, ಬಾಲಾಜಿರಾವ ತುಕದೆ, ನಾಮದೇವರಾವ ತಗರಖೆಡೆ, ಅನೀಲ ಸಾವಕಾರ, ದೇವಿದಾಸರಾವ ಶಿಂದೆ, ಸತೀಶ ಬಾಮನೆ, ಹರಿಬಾವು ಶಿವುದೆ, ಸುರೇಶ ಕಾಳೆ, ರಾಜೇಂದ್ರ ಶಿಂಧೆ, ಕಿಶನರಾವ ಸಾವರೆ, ಮನೋಹರ ಬಿರಾದಾರ, ಗೋವಿಂದರಾವ ಹಾಲಿಪುರ್ಗಿ, ಕಾಶಿನಾಥರಾವ ಜೋಳದಾಪ್ಕೆ
ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್