ಬೀದರ: ಜನತಾ ಕರ್ಫ್ಯೂ ಭಾಗಶಃ ಯಶಸ್ವಿ
Team Udayavani, May 25, 2020, 12:03 PM IST
ಬೀದರ: ರವಿವಾರ ಕರ್ಫ್ಯೂ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ ವೃತ್ತ ಬಿಕೋ ಎನ್ನುತ್ತಿರುವುದು.
ಬೀದರ: ಕೋವಿಡ್ ಸೋಂಕು ನಿಯಂತ್ರಣ ಕ್ರಮದ ಭಾಗವಾಗಿ ರಾಜ್ಯ ಸರ್ಕಾರ ಕರೆ ನೀಡಿದ್ದ ‘ರವಿವಾರ ಕರ್ಫ್ಯೂ’ಗೆ ಬೀದರ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಲಾಕ್ಡೌನ್ ಸಡಿಲಕೆ ಬಳಿಕ ಜನ-ವಾಹನ ಸಂಚಾರ ಎಂದಿನಂತೆ ಸಹಜ ಸ್ಥಿತಿಗೆ ಬಂದಿತ್ತು. ಆದರೆ, ರವಿವಾರ ಸರ್ಕಾರದ ಬಂದ್ ಕರೆಗೆ ಜಿಲ್ಲೆಯ ಜನರು ಸಹಕರಿಸುವ ಮೂಲಕ ಭಾಗಶಃ ಯಶಸ್ವಿಗೊಳಿಸಿದ್ದಾರೆ. ನಗರ ಸೇರಿ ಕೆಲವೆಡೆ ಬೆರಳಣಿಕೆಯಷ್ಟು ಜನರ ಓಡಾಟ ಮಾತ್ರ ಕಾಣಿಸಿಕ್ಕಿದ್ದು ಹೊರತುಪಡಿಸಿದರೆ ಎಲ್ಲೆಡೆ ಸ್ತಬ್ಧವಾಗಿತ್ತು.
ಬೆಳಗ್ಗೆಯಿಂದಲೂ ಸರ್ಕಾರಿ ಸಾರಿಗೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳೂ ರಸ್ತೆಗೆ ಇಳಿಯಲಿಲ್ಲ. ಬೈಕ್ ಮೇಲೆ ವಿನಾಕಾರಣ ಸುತ್ತುತ್ತಿದ್ದವರನ್ನು ಪೊಲೀಸರು ಎಚ್ಚರಿಕೆ ನೀಡುವ ಮೂಲಕ ವಾಪಸ್ ಕಳುಹಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ಜೀವನಾವಶ್ಯಕ ವಸ್ತುಗಳಿಗಾಗಿ ಕಿರಾಣಿ, ಔಷಧ ಮಳಿಗೆಗಳು, ಹಣ್ಣು- ತರಕಾರಿ ಮಾರಾಟ ಹೊರತುಪಡಿಸಿದರೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ
Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು