ಗೋವನ್ನು ಮಾತೆಯಂತೆ ಗೌರವಿಸಲು ಪೇಜಾವರ ಶ್ರೀ ಸಲಹೆ


Team Udayavani, Oct 27, 2021, 1:03 PM IST

13pejavara

ಮುದ್ದೇಬಿಹಾಳ: ಇಲ್ಲಿನ ಜನರ ಭಕ್ತಿಯನ್ನು ಕಂಡು ನಾವು ತುಂಬ ಸಂತಸಪಟ್ಟಿದ್ದೇವೆ. ನೀವೆಲ್ಲರೂ ಮಾಡಿರತಕ್ಕಂತಹ ಈ ಸತ್ಕಾರ ಉಡುಪಿಯ ಕೃಷ್ಣನ ಸ್ಥಾನದಿಂದ ಜಗದ್ಗುರುಗಳಾದ ಮಧ್ವಾಚಾರ್ಯರ ಪರಂಪರೆಗೆ ಸಲ್ಲಿಸಿದ ಗೌರವ. ನಿಮ್ಮ ಈ ಸತ್ಕಾರವನ್ನು ನಾವು ಯಾವತ್ತೂ ಮರೆಯುವುದು ಸಾಧ್ಯವಿಲ್ಲ. ನೀವು ಯಾವಾಗ ಕರೆದರೂ ಬರುತ್ತೇವೆ. ಪ್ರಾಯಶಃ ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಐದು ದಿವಸಗಳ ಕಾಲ ನಾವು ಇಲ್ಲಿರುತ್ತೇವೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ನುಡಿದರು.

ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪುರ ಪ್ರವೇಶದ ಸಕಲ ಕಾರ್ಯಗಳ ನಂತರ ಬಾಗಲಕೋಟೆ ಪುರ ಪ್ರವೇಶಕ್ಕೆ ಬೀಳ್ಕೊಡುವುದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ವೈಭವದ ತುಲಾಭಾರ ನಡೆಸಿಕೊಟ್ಟಿದ್ದೀರಿ. ನಿಮ್ಮ ಈ ಪ್ರೀತೀಯ ಭಾರದ ಮುಂದೆ ನಮ್ಮ ಹೃದಯ ತುಂಬಿ ಭಾರವಾಗಿದೆ. ಉಡುಪಿಯ ಗೋಶಾಲೆ ಬಗ್ಗೆ ಪ್ರಸ್ತಾಪಿಸಿದ ಕೂಡಲೇ ಶಾಸಕ ನಡಹಳ್ಳಿಯವರು 5 ಲಕ್ಷ ರೂ. ದೇಣಿಗೆ ನೀಡಿ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದರು.

ನಿತ್ಯ ನಾವು ಉಣಬೇಕಾದರೆ ಮೊದಲು ಗೂವುಗಳಿಗೆ ಗ್ರಾಸ ಕೊಟ್ಟು ಉಣ್ಣಬೇಕು. ನಮಗೆ ಉಣ್ಣುವ ಹಕ್ಕು ಸಿಗಬೇಕೆಂದರೆ ಮೊದಲು ಗೋವುಗಳಿಗೆ ಆಹಾರ ಕೊಡಬೇಕು. ಗೋವನ್ನು ಮಾತೆಯಂತೆ ಗೌರವಿಸಬೇಕು. ಗೋ ವೃಷಭಗಳು° ತಂದೆಯಂತೆ ಗೌರವಿಸಬೇಕು. ನಮ್ಮ ತಾಯಿ ಎದೆ ಹಾಲನ್ನು ಹುಟ್ಟಿದ ನಂತರ, ಆಕಳ ಹಾಲನ್ನು ಸಾಯುವವರೆಗೂ ಉಪಯೋಗಿಸುತ್ತೇವೆ. ಇದೊಂದರಿಂದಲೇ ಗೋ ಮಾತೆಯ ಮಹತ್ವ ಅರ್ಥವಾಗುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಹಸು ನಮಗೆ ತಾಯಿಯ ಸಮಾನ. ನಾವು ಉಣ್ಣುವ ಅನ್ನ, ತರಕಾರಿ, ಧಾನ್ಯ ಇವೆಲ್ಲವೂ ಹೊಲದಲ್ಲಿ ಹುಟ್ಟುತ್ತವೆ. ಅಂಥ ಹೊಲವನ್ನು ಹದಗೊಳಿಸುವ ಕಾರ್ಯ ಗೋ ವೃಷಭಗಳದ್ದಾಗಿದೆ. ಅದಕ್ಕಾಗಿ ಗೋ ವೃಷಭಗಳು ನಮಗೆ ತಂದೆ ಸಮಾನ. ಹೀಗೆ ನಮಗೆ ಬದುಕನ್ನೇ ಕೊಟ್ಟ ಗೋವುಗಳು ತಾಯಿ ಸಮಾನವಾದರೆ, ಗೋ ವೃಷಭಗಳು ತಂದೆ ಸಮಾನ ಎಂದು ವ್ಯಾಖ್ಯಾನಿಸಿದರು.

ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, ಜೀವನದಲ್ಲಿ ನಮ್ಮ ಆತ್ಮಕ್ಕೆ ಸಂತೋಷ, ಆನಂದ ಸಿಗುವುದು ಇಂಥ ಮಹಾತ್ಮರ ದರ್ಶನ ಪಡೆದಾಗ ಮಾತ್ರ ಸಾಧ್ಯ. ನಾನು ಸಿದ್ದಗಂಗಾಮಠದಲ್ಲಿ ಬೆಳೆದು ಬಂದಿರುವ ನನಗೆ ಸಂಸ್ಕೃತಿ ಮತ್ತು ಮಠಗಳ ಇತಿಹಾಸದ ಪರಿಚಯ ಇದೆ. ನಮ್ಮ ದೇಶದ ಸಂಸ್ಕೃತಿ, ಹಿಂದೂ ಧರ್ಮದ ಮಹತ್ವವನ್ನು ಇಂದಿನ ಯುವ ಜನತೆಗೆ ತಿಳಿಸಿಕೊಡಬೇಕಾಗಿದೆ. ಈ ದೇಶ ಕಂಡ ಎಲ್ಲ ಮಹಾತ್ಮರು ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಬೆಳೆದವರು ಎಂದರು. ಫೆಬ್ರವರಿ ತಿಂಗಳಲ್ಲಿ 5 ದಿನಗಳ ಕಾಲ ಶ್ರೀಗಳು ಇಲ್ಲಿಗೆ ಬರಲು ಒಪ್ಪಿರುವುದು ನಮ್ಮ ಸುದೈವವಾಗಿದ್ದು ಹಿಂದೂತ್ವದ ಸಾರ ಯುವ ಜನತೆಗೆ ತಿಳಿಸಿಕೊಡುವ ಕಾರ್ಯ ಮಾಡುತ್ತೇವೆ. ಶ್ರೀಗಳು 15 ದಿನ ಕಾಲಾವಕಾಶ ಕೊಟ್ಟರೂ ಅಪರೂಪದ ಆಧ್ಯಾತ್ಮದ ಕಾರ್ಯ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.

ವಿಪ್ರ ಸಮಾಜದ ಹಿರಿಯರಾದ ವಿ.ಕೆ.ದೇಶಪಾಂಡೆ, ಬಿ.ಪಿ.ಕುಲಕರ್ಣಿ, ಎಸ್‌.ಆರ್‌.ಕುಲಕರ್ಣಿ, ಜಿ.ಆರ್‌ .ದೊಡ್ಡಿಹಾಳ, ಸುರೇಶ ಕುಲಕರ್ಣಿ, ಪ್ರಕಾಶ ಸರಾಫ, ರಾಘವೇಂದ್ರ ಕುಲಕರ್ಣಿ, ವಾಸು ಸಾಲೋಡಗಿ, ರಾಜು ಪದಕಿ, ಪ್ರಕಾಶ ದೇಶಪಾಂಡೆ, ಬಾಳು ಗಿಂಡಿ, ಗುರುರಾಜ ರಾಜಪುರೋಹಿತ, ಪುಟ್ಟು ಕುಲಕರ್ಣಿ, ನಾರಾಯಣ ಕುಲಕರ್ಣಿ, ಸತೀಶ ಕುಲಕರ್ಣಿ, ಅನಿಲ ಕುಲಕರ್ಣಿ, ಸುಭಾಷ್‌ ಕುಲಕರ್ಣಿ, ತುಲಾಭಾರ ನಡೆಸಿಕೊಟ್ಟ ವಾಸುದೇವ ಶಾಸ್ತ್ರಿ ದಂಪತಿ, ಇತರೆ ಸಮಾಜಗಳ ಗಣ್ಯರಾದ ಬಿ.ಸಿ.ಮೋಟಗಿ, ಪ್ರಭು ಕಡಿ, ಡಾ| ಪರಶುರಾಮ ಪವಾರ, ಭೀಮಶೆಪ್ಪ ಮದರಿ, ಪುರಸಭೆ ಸದಸ್ಯ ಬಸವರಾಜ ಮುರಾಳ, ಭಕ್ತರು ಇದ್ದರು.

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.