ಬಸ್‌ ನಿಲ್ದಾಣದಲ್ಲಿ ಸುಲಿಗೆ!


Team Udayavani, Aug 9, 2017, 4:47 PM IST

bus copy.jpg

ಬೀದರ: ರಸ್ತೆ ಸಾರಿಗೆ ಸಂಸ್ಥೆ ಜನರ ಬದುಕಿನ ಬಹುಮುಖ್ಯ ಭಾಗವಾಗಿದ್ದು ಪ್ರಯಾಣಿಕರ ಸೇವೆಯೇ ಅದರ ಮೂಲ ಉದ್ದೇಶ.
ಆದರೆ, ಸಂಸ್ಥೆಯ ಬಸ್‌ ನಿಲ್ದಾಣಗಳ ಅಂಗಡಿಯಲ್ಲಿ ಪ್ರಯಾಣಿಕರ ಹಗಲು ದರೋಡೆ ನಡೆಯುತ್ತಿದೆ. ಬಸ್ತುಗಳ ಮೇಲೆ ಎಂಆರ್‌ಪಿಗಿಂತ ಹೆಚ್ಚುವರಿ ಹಣ ಪಡೆದು ನಿರ್ಭೀತಿಯಿಂದ ಸುಲಿಗೆ ಮಾಡಲಾಗುತ್ತಿದ್ದು, ಗ್ರಾಹಕರು ಅನಿವಾರ್ಯವಾಗಿ ಹೆಚ್ಚು ಬೆಲೆಗೆ ವಸ್ತುಗಳನ್ನು ಖರೀದಿಸುವಂತಾಗಿದೆ. ಅಂಗಡಿಗಳಲ್ಲಿ ಗ್ರಾಹಕರಿಂದ ಯಾವುದೇ ವಸ್ತುಗಳಿಗೆ ಕನಿಷ್ಠ ಮಾರಾಟ ದರ (ಎಂಆರ್‌ಪಿ)ಕ್ಕಿಂತ ಹೆಚ್ಚು ಹಣ
ಪಡೆಯುವುದು ನಿಯಮದ ಪ್ರಕಾರ ಅಪರಾಧ. ಆದರೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ಬೀದರ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಅಧಿಕ ಹಣ ಪಡೆಯುವುದು ಮಾಮೂಲು ಎಂಬಂತಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಅಂಗಡಿ ಮಾಲೀಕರದ್ದೇ ಆಟ, ಅವರು ಹೇಳಿದಷ್ಟೇ ದರ. ಇದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬಸ್‌ ಪ್ರಯಾಣದ ವೇಳೆ ಪ್ರಯಾಣಿಕರು ತಿಂಡಿ ತಿನಿಸು, ನೀರು, ತಂಪು ಪಾನೀಯ ಸೇವನೆ ಸಾಮಾನ್ಯ. ನಿಲ್ದಾಣಗಳಲ್ಲಿ ಬಹುತೇಕ ಬಸ್‌ಗಳು ಕೆಲವೇ ನಿಮಿಷಗಳ ವರೆಗೆ ನಿಲುಗಡೆಯಾಗುತ್ತವೆ. ಇದನ್ನೇ ನೆಪ ಮಾಡಿಕೊಂಡ ಮಳಿಗೆ ಮಾಲೀಕರು ಮೋಸದಾಟಕ್ಕೆ ಇಳಿದಿದ್ದಾರೆ. ಕಡಿಮೆ ಸಮಯದಲ್ಲಿ ನಿಲ್ದಾಣದ ಹೊರಗಡೆ ಹೋಗಿ ಖರೀದಿಸುವು ಅಸಾಧ್ಯ. ಒಳಗಿನ ಅಂಗಡಿಗಲ್ಲೇ ಸಾಮಗ್ರಿಗಳನ್ನು ಖರೀದಿಸಬೇಕು. ಇಲ್ಲವಾದರೆ ಬಸ್‌ ಕಳೆದುಬೇಕಾದ ಅನಿವಾರ್ಯ ಇರುತ್ತದೆ.
ಆಗ ಎಂಆರ್‌ಪಿ ದರವನ್ನು ಗಮನಿಸಲೂ ಆಗದು. ಹಾಗಾಗಿ ಕೇಳಿದಷ್ಟು ಹಣ ಕೊಟ್ಟು ಬಸ್‌ ಹತ್ತುತ್ತಾರೆ. ಬಹುತೇಕ ವಸ್ತುಗಳ
ಮೇಲೆ ಕನಿಷ್ಠ ಒಂದೆರೆಡು ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಕೆಲವೊಮ್ಮೆ ಎಂಆರ್‌ಪಿ ದರಕ್ಕಿಂತ ಅಧಿಕ ಹಣ ಕೇಳಿದರೆ ಗ್ರಾಹಕರು ಅಂಗಡಿಯವರನ್ನು ಪ್ರಶ್ನಿಸಿ ಮಾತಿನ ಸಂಘರ್ಷವನ್ನೂ ನಡೆಸಿದ ಉದಾಹರಣೆಗಳಿವೆ. ಆದರೆ, ಮಾಲೀಕ ಬೇಕಾದರೆ ತೆಗೆದುಕೊಳ್ಳಬಹುದು ಇಲ್ಲವಾದರೆ ಬೇಡ ಎಂಬ ಒರಟು ಉತ್ತರ ನೀಡುತ್ತಾನೆ. ಕೊನೆಗೂ ಪುಡಿಗಾಸಿಗಾಗಿ ಇಲ್ಲದ ಉಸಾಬರಿ ನಮಗೇಕೆ ಎಂದು ಹೆಚ್ಚುವರಿ ಹಣ ತೆತ್ತು ಸಾಮಗ್ರಿಗಳನ್ನು ಖರೀದಿಸುತ್ತಾರೆ. ಇದರಿಂದ ಅಂಗಡಿಯವರಿಗೆ ಮತ್ತಷ್ಟು ಉತ್ತೇಜನ
ಸಿಕ್ಕಂತಾಗುತ್ತಿದೆ. ಸಾಮಾನ್ಯವಾಗಿ ತಿಂಡಿ- ತಿನಿಸುಗಳಿಗೆ ಒಂದೆರೆಡು ರೂಪಾಯಿ ಅ ಧಿಕ ದರ ಪಡೆದರೆ ಕುಡಿಯುವ ನೀರು, ತಂಪು ಪಾನೀಯಕ್ಕೆ ಅದಕ್ಕಿಂತ ಅಧಿ ಕ ಹಣ ಕೀಳಲಾಗುತ್ತಿದೆ. ನೀರು, ಕೂಲ್ಡ್ರಿಕ್ಸ್‌ನ್ನು ಪ್ರಿಜ್‌ನಲ್ಲಿಟ್ಟಿರುತ್ತೇವೆ. ಇದಕ್ಕೆ ವಿದ್ಯುತ್‌ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಹೇಳಿ ಎರಡೂಮೂರು ರೂಪಾಯಿ ಹೆಚ್ಚುವರಿ ದರ ಪಡೆಯಲಾಗುತ್ತಿದೆ. ಪ್ರಯಾಣಿಕರ ಸುಲಿಗೆ
ಅವ್ಯಾಹತವಾಗಿ ನಡೆಯುತ್ತಿದ್ದರೂ ಸಾರಿಗೆ ಸಂಸ್ಥೆ ಅಧಿ ಕಾರಿಗಳು ಮೌನ ವಹಿಸುತ್ತಾರೆ. ಈ ವಿಷಯವನ್ನು ಗಂಭೀರವಾಗಿ
ಪರಿಗಣಿಸಿದಲ್ಲಿ ಮಾತ್ರ ಅಂಗಡಿಯವರ ಉಪಟಳ ನಿಯಂತ್ರಿಸಲು ಸಾಧ್ಯ. ಎಂಆರ್‌ಪಿಗಿಂತ ಹೆಚ್ಚುವರಿ ಹಣ ಕೊಡುವ ಮುನ್ನ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ. ಅಂಗಡಿಯವರನ್ನು ಪ್ರಶ್ನಿಸುವುದು ಹಕ್ಕು. ಸುಲಿಗೆ ಮಾಡುವುದು ಕಾನೂನು ರಿತ್ಯ ಅಪರಾಧ. ಇದರ ವಿರುದ್ಧ ಸಾರಿಗೆ ಸಂಸ್ಥೆ ಡಿಟಿಒ ಮತ್ತು ಗ್ರಾಹಕರ ವೇದಿಕೆಗೆ ದೂರು ನೀಡಲು ಅವಕಾಶ ಇದೆ. ಗ್ರಾಹಕ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕಿದೆ.

ಶಶಿಕಾಂತ ಬಂಬುಳಗೆ

ಗಮನ ಹರಿಸಲಿ ಬೀದರ ಬಸ್‌ ನಿಲ್ದಾಣದಲ್ಲಿ ವಸ್ತುಗಳಿಗೆ ಕನಿಷ್ಠ ಮಾರಾಟ ದರಕ್ಕಿಂತ ಅಧಿಕ ಹಣ ಪಡೆಯಲಾಗುತ್ತಿದೆ. ನಿಲ್ದಾಣದಲ್ಲಿ ಬಸ್‌ ಕೆಲವು ನಿಮಿಷ ಮಾತ್ರ ನಿಲ್ಲುವುದರಿಂದ ಅಂಗಡಿಯವರು ಕೇಳಿದಷ್ಟು ಹಣ ಕೊಡುವ ಅನಿವಾರ್ಯತೆ ಇದೆ. ಕೆಲವೊಮ್ಮೆ ಪ್ರಶ್ನಿಸಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವಾದರೆ ಹೋಗಿ ಎಂದು ಮೊಂಡುತನ ಪ್ರದರ್ಶಿಸುತ್ತಾರೆ. ಎನ್‌ ಈಕೆಆರ್‌ಟಿಸಿ ಅಧಿಕಾರಿಗಳು ಗಮನಹರಿಸಬೇಕು.  ಎನ್‌. ವಿಜಯಕುಮಾರ, ಪ್ರಯಾಣಿಕ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.