ಗುಡಿಸಲು ವಾಸದಿಂದ ದೊರೆಯದ ಸ್ವಾತಂತ್ರ್ಯ; ಸ್ವಂತ ಸೂರಿನ ಕನಸು ಮರೀಚಿಕೆ

ಇದುವರೆಗೂ ಇವರೆಲ್ಲ ಹುಲ್ಲಿನ ಹೊದಿಕೆಯ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾರೆ.

Team Udayavani, Jan 15, 2021, 5:36 PM IST

ಗುಡಿಸಲು ವಾಸದಿಂದ ದೊರೆಯದ ಸ್ವಾತಂತ್ರ್ಯ; ಸ್ವಂತ ಸೂರಿನ ಕನಸು ಮರೀಚಿಕೆ

ಇಂಡಿ: ಸ್ವಾತಂತ್ರ್ಯ ದೊರೆತು 75 ವರ್ಷವಾಗುತ್ತ ಬಂದಿದ್ದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಡವರು ಮೂಲಸೌಕರ್ಯಗಳಿಂದ
ವಂಚಿತರಾಗಿಯೇ ಉಳಿದಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಬಡವರು ಇನ್ನೂ ಗುಡಿಸಲಿನಲ್ಲೇ ವಾಸವಿದ್ದಾರೆ. ಅಲ್ಲದೆ ಗ್ರಾಪಂನವರು ಶೇ. 100 ಶೌಚಾಲಯ ಗುರಿ ಸಾಧಿಸಿದ್ದಾಗಿ ಹೇಳುತ್ತಾರೆ. ನೈಜವಾಗಿ ಶೇ.45 ಶೌಚಾಲಯಗಳು ಮಾತ್ರ ನಿರ್ಮಾಣವಾಗಿವೆ. ಇನ್ನೂ ಶೇ. 55 ಜನರಿಗೆ ಶೌಚಾಲಯ ಇಲ್ಲ.

ಗ್ರಾಮದಲ್ಲಿ ತಲೆತಲಾಂತರದಿಂದ ವಾಸವಿರುವ ಸಾವಿತ್ರಿ ನಾಗೇಶ ಹತ್ತರಕಿ, ರಾಣಿ ಅಂಬಣ್ಣಾ ಪೂಜಾರಿ, ಅನಸೂಯಾ ಹಣಮಂತ ಗಳೇದ, ಯಲ್ಲವ್ವ ಬೀರಪ್ಪ
ಮುಚ್ಚಂಡಿ, ಬಂಗಾರೆವ್ವ ಚಂದ್ರಾಮ ಕುಂಬಾರ, ಕಮಲಾಬಾಯಿ ರೇವಣಸಿದ್ದ ಕುಂಬಾರ, ಭಾಗೀರಥಿ ಕಲ್ಯಾಣಿ ಹತ್ತರಕಿ, ನಾಗಮ್ಮ ಧರ್ಮಣ್ಣ ಪೂಜಾರಿ,
ಕಾಸವ್ವ ಶಿವಪ್ಪ ಮುಚ್ಚಂಡಿ, ರತ್ನಾಬಾಯಿ ಪ್ರಭು ಹತ್ತರಕಿ, ಸಾವಿತ್ರಿ ಹಣಮಂತ ಸೋಲಂಕಾರ, ಕಸ್ತೂರಿಬಾಯಿ ಲಿಗಾಡೆ ಸೇರಿದಂತೆ ಇನ್ನೂ ನೂರಾರು ಜನರಿಗೆ ಸ್ವಂತ ಸೂರಿಲ್ಲ. ಇದುವರೆಗೂ ಇವರೆಲ್ಲ ಹುಲ್ಲಿನ ಹೊದಿಕೆಯ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾರೆ.

ಪ್ರತಿ ಬಾರಿ ಚುನಾವಣೆ ಬಂದಾಗ ಮನೆ ಕಟ್ಟಿಸಿ ಕೊಡ್ತೀವಿ, ಶೌಚಾಲಯ ಕಟ್ಟಿಸ್ತೀವಿ, ಕೃಷಿ ಹೊಂಡ ಹೊಡಿಸಿ ಕೊಡ್ತೀವಿ, ದನಗಳ ಶೆಡ್‌ ಹಾಕಿಸಿ ಕೊಡ್ತೀವಿ ಎಂದು ಪೊಳ್ಳು ಭರವಸೆ ನೀಡುವುದು ಸಾಮಾನ್ಯವಾಗಿದೆ. ಗೆದ್ದ ಮೇಲೆ ಇತ್ತ ಗಮನವನ್ನೇ ಹರಿಸುತ್ತಿಲ್ಲ. ಇದು ಇಂಗಳಗಿ ಗ್ರಾಪಂ ವ್ಯಾಪ್ತಿಯ ಪ್ರಕರಣವಷ್ಟೇ ಅಲ್ಲ, ತಾಲೂಕಿನಾದ್ಯಂತ ಎಲ್ಲ ಗ್ರಾಪಂಗಳಲ್ಲಿ ಇದೇ ವಾತಾವರಣವಿದೆ. ಅದೆಷ್ಟೋ ಬಡವರ ಸ್ವಂತ ಸೂರಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ.

ಚುನಾವಣೆ ಬಂದಾಗ ಮಾತ್ರ ನಾವು ಎಲ್ಲಿದ್ದೀವಿ ಅಂತ ಹುಡಕತಾರ, ಕೈ ಕಾಲು ಹಿಡಿದು ಮತ ಕೊಡ್ರೀ ಅಂತ ಕೇಳ್ತಾರ, ಆರಿಸಿ ಬಂದ್‌ ಮ್ಯಾಲ ನಾವ್ಯಾರೋ
ಅವರ್ಯಾರೋ ಅನ್ನೂವಂಗ ಆಗ್ಯಾದ.ನಾವು ಹುಟ್ಟಿದಾಗಿನಿಂದ ಇಲ್ಲೀತನ ಒಂದೂ ಪಂಚಾಯ್ತಿ ಕೆಲಸ ನಮಗ ಕೊಟ್ಟಿಲ್ಲ. ನಮಗ ಇರ್ಲಿಕ್ಕ ಒಂದು ಮನಿನೂ ಇಲ್ಲ. ದುಡಿದ್ರೆ ಹೊಟ್ಟಿ ತುಂಬ್ತದ. ಎಂಎಲ್‌ಎ ಅವರು ಬಾಳ ಛಲೋ ಅದಾರ ಅಂತ ಕೇಳೀವಿ. ಆದರ ಭೆಟ್ಟಿ ಆಗೂದು ಆಗಿಲ್ಲ. ಈ ಪಂಚಾಯ್ತಿ ಮೇಂಬರ್‌ಗೊಳು ಕೆಲಸಾ ಮಾಡಾಂಗಿಲ್ಲ. ಬರೇ ರೊಕ್ಕಾಎತ್ತಾದೇ ಇವರ ಕೆಲಸ ಆಗ್ಯಾದ.
ಸಾವಿತ್ರಿ ನಾಗೇಶ ಹತ್ತರಕಿ,
ಇಂಗಳಗಿ ಗ್ರಾಮದ ಮಹಿಳೆ

ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಹಂಚಿಕೆಯಲ್ಲಿ ಸಾಕಷ್ಟು ಗೋಲ್‌ಮಾಲ್‌ ನಡೆದಿದೆ. ಒಂದೇ ಮನೆಗೆ ಎರಡು ಬಿಲ್‌ ತೆಗೆದಿದ್ದಾರೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ತಾಪಂ ಇಒ ಹಾಗೂ ಜಿಪಂ ಸಿಇಒ ಅವರನ್ನು ಭೇಟಿಯಾಗಿ ತನಿಖೆಗೆ ಒತ್ತಾಯಿಸುತ್ತೇವೆ.
ಜಗುಗೌಡ ಪಾಟೀಲ ಮಾವಿನಹಳ್ಳಿ

*ಉಮೇಶ ಬಳಬಟ್ಟಿ

ಟಾಪ್ ನ್ಯೂಸ್

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.