ತೊಗರಿ ಬೆಳೆಗೆ ಹುಳ-ಕೀಟ, ಫಂಗಸ್‌ ಕಾಟ


Team Udayavani, Oct 11, 2021, 10:41 AM IST

Untitled-4

ಮುದಗಲ್ಲ: ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಮೋಡ ಮುಸುಕಿನ ವಾತಾವರಣ ಇರುವುದರಿಂದ ತೊಗರಿ ಬೆಳೆಗೆ ಹುಳ-ಕೀಟ ಬಾಧೆ ಶುರುವಾಗಿದ್ದು, ಆತಂಕ ಸೃಷ್ಟಿಸಿದೆ.

ತೊಗರಿ ಬೆಳೆಗೆ ಅತಿ ತೇವಾಂಶ ಆಗಿ ಬರಲ್ಲ, ಈ ಭಾಗದಲ್ಲಿ ಆಗಾಗ ಜಿಟಿ ಜಿಟಿ ಮಳೆ ಸುರಿದಾಗಿನಿಂದ ವಾತಾವರಣದಲ್ಲಿ ತಂಪೇರಿದೆ. ಮಣ್ಣಿನಿಂದ ಬರುವ ಫಂಗಸ್‌ ರೋಗ ತೊಗರಿ ಗಿಡದ ಕಾಂಡಗಳಿಗೆ ನೀರು ಹೋಗದಂತೆ ತಡೆಯುತ್ತದೆ. ಇದರಿಂದ ಗಿಡಗಳು ಒಣಗುತ್ತವೆ. ಕೃಷಿ ಇಲಾಖೆಯಿಂದ ಫಂಗಸ್‌ ರೋಗಕ್ಕೆ ಹಾಳಾದ ತೊಗರಿ ಬೆಳೆ ಸರ್ವೇ ಈಗಾಗಲೇ ನಡೆಯುತ್ತಿದೆ.

­ತೊಗರಿ ನಾಶಪಡಿಸಿದ ರೈತರು

ಗುಡಿಹಾಳ ಗ್ರಾಮದಲ್ಲಿ ಸುಮಾರು 20 ಎಕರೆ ತೊಗರಿ ಸಿಡಿರೋಗಕ್ಕೆ ತುತ್ತಾದ ಪರಿಣಾಮ ಪಂಪಾಪತಿ ಎಂಬುವರು ತನ್ನ ಜಮೀನಿನಲ್ಲಿನ ತೊಗರಿಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ. ಹಿರೇಲಕ್ಕಿಹಾಳ ಗ್ರಾಮದಲ್ಲಿ 10 ಎಕರೆ ತೊಗರಿಗೆ ಸಿಡಿರೋಗ, ಆಶಿಹಾಳ ಗ್ರಾಮದಲ್ಲಿ 8 ಎಕರೆ, ಮುದಗಲ್ಲ ಪಟ್ಟಣದಲ್ಲಿ 25 ಎಕರೆ ತೊಗರಿ ಫಂಗಸ್‌ ರೋಗಕ್ಕೆ ತುತ್ತಾಗಿವೆ ಎಂದು ಕೃಷಿ ಅಧಿಕಾರಿಗಳೇ ತಿಳಿಸಿದ್ದಾರೆ.

ಇದನ್ನೂ ಓದಿ: ಕಂಚಿನಡ್ಕಪದವು ತ್ಯಾಜ್ಯ ಘಟಕ ವಿವಾದ: ಶಾಶ್ವತ ಪರಿಹಾರ ಅಗತ್ಯ

­ವಾಡಿಕೆ ಮಳೆ

2021-22ರ ಜನವರಿಯಿಂದ ಅ.7ರವರೆಗೆ ವಾಡಿಕೆ ಮಳೆ 518 ಮಿ.ಮೀ. ಇದ್ದು, 536 ಮಿ.ಮೀ. ಮಳೆಯಾಗಿದೆ. ಈ ಮಳೆ ತೊಗರಿಗೆ ಫಂಗಸ್‌ ಹರಡಲು ಕಾರಣವಾಗಿದೆ. ಆರಂಭದಲ್ಲಿ ಚೆನ್ನಾಗಿಯೇ ಬಂದಿದ್ದ ತೊಗರಿಯ ಎಲೆ, ಗಿಡಗಳು ದಷ್ಟಪುಷ್ಟವಾಗಿ ಕಾಣುತ್ತಿವೆ. ಹೂವು-ಕಾಯಿ ಇರುವಾಗಲೇ ತೇವಾಂಶ ಹೆಚ್ಚಾಗಿದ್ದರಿಂದ ಹೂವು-ಮೊಗ್ಗು ತನ್ನಿಂದ ತಾನೇ ಕತ್ತರಿಸಿ ಬೀಳುವುದು ಒಂದಡೆಯಾದರೆ, ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ಗಿಡಗಳು ಒಣಗುತ್ತಿರುವ ಚಿಂತೆ ತೊಗರಿ ಬೆಳೆಗಾರರನ್ನು ಕಾಡುತ್ತಿದೆ.

ವಿಶೇಷವಾಗಿ ನಾಗರಹಾಳ, ಭೋಗಾಪೂರ, ಬಯ್ನಾಪೂರ, ಖೈರವಾಡಗಿ, ನಾಗಲಾಪೂರ, ಹಡಗಲಿ, ಛತ್ತರ, ಮರಳಿ, ಉಳಿಮೇಶ್ವರ, ಕನ್ನಾಳ, ಪಿಕಳಿಹಾಳ, ಆಮದಿಹಾಳ, ಮಟ್ಟೂರ, ಕಿಲಾರಹಟ್ಟಿ, ಜಂತಾಪೂರ, ನಾಗರಹಾಳ, ಆಶಿಹಾಳ ಸೇರಿದಂತೆ ಹಲವೆಡೆ ಬೆಳೆದ ತೊಗರಿ ಕಾಂಡದಲ್ಲಿ ಸಣ್ಣ ಸಣ್ಣ ಕೀಟಗಳಿವೆ. ಹುಳು ಬಾಧೆ ಮತ್ತು ರೋಗ ಹತೋಟಿಗೆ ಯಾವುದೇ ಔಷಧ ಅಂಗಡಿಯಿಂದ ಖರೀದಿಸಿದ ಕ್ರಿಮಿ ಮತ್ತು ಕೀಟನಾಶಕ ಕೆಲಸ ಮಾಡುತ್ತಿಲ್ಲ ಎಂದು ತೊಗರಿ ಬೆಳೆಗಾರ ಪಂಪಾಪತಿ ಪತ್ರಿಕೆಗೆ ತಿಳಿಸಿದ್ದಾರೆ. ತೊಗರಿ ಬೆಳೆ ಕೀಟಬಾಧೆ ಹತೋಟಿಗೆ ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಬೇಕೆಂದು ಮಸ್ಕಿ ಭಾಗದ ದೇಸಾಯಿ ಭೋಗಾಪೂರ ಮತ್ತು ಯರದೊಡ್ಡಿ ಗ್ರಾಮದ ರೈತರಾದ ನಾಗಪ್ಪ, ಬಸವರಾಜ, ದುರುಗಪ್ಪ ಆಗ್ರಹಿಸಿದ್ದಾರೆ.

ಹತೋಟಿಗೆ ಕ್ರಮಗಳು

ಬಿತ್ತುವುದಕ್ಕಿಂತ ಮುಂಚೆ 4 ಗ್ರಾಂ. ಟ್ರೈಕೋಡರ್ಮ್ ಟ್ರೈಕೋಡರ್ಮ್ದಿಂದ ಬೀಜೋಪಚಾರ ಮಾಡುವುದರ ಮುಖಾಂತರ ಫಂಗಸ್‌ ಮುಖಾಂತರ ಹರಡುವುದು ಸಿಡಿ ರೋಗ ಅಥವಾ ಸೊರಗು ರೋಗವನ್ನು ಹತೋಟಿಗೆ ತರಬಹುದು. ರೋಗ ನಿರೋಧಕ ತಳಿಗಳು ಆದಂತಹ ಜಿಆರ್‌ಜಿ 811, ಬಿತ್ತನೆ ಮಾಡುವುದರ ಮುಖಾಂತರ ಈ ರೋಗ ತಡೆಯಬಹುದು.

ಥಿಯೋಪಿನೈಟ್‌ ಮಿಥೈಲ್‌ 1 ಗ್ರಾಂ.ಲೀಟರ್, ವೈಟ್‌ ವ್ಯಾಕ್ಸ್‌ ಪವರ್‌ 2ಗ್ರಾಂ.ಲೀಟರ್‌, ಕಾಬೆಂರ್ಡೇಜಿಂ 2ಗ್ರಾಂ ಪರ್‌ ಲೀಟರ್‌ ಬಳಸಿ ಸಿಂಪಡಿಸಿದರೆ ಫಂಗಸ್‌ ನಿಯಂತ್ರಣದಲ್ಲಿ ಬರುತ್ತದೆ.

ಆಕಾಶ ದಾನಿ,ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಮುದಗಲ್ಲ

ದೇವಪ್ಪ ರಾಠೊಡ

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.