ವೀರಭದ್ರೇಶ್ವರನಿಗೆ ಮೈಸೂರು ಅರಸರ ಚಿನ್ನದ ಸರ
Team Udayavani, Jan 23, 2020, 12:47 PM IST
ಹುಮನಾಬಾದ: ಬೀದರ ಜಿಲ್ಲೆ ಹುಮನಾಬಾದ ಪಟ್ಟಣದಲ್ಲಿ ಪ್ರತಿವರ್ಷ ನಡೆವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಮೈಸೂರು ರಾಜಮನೆತನದ ಕೊನೆಯ ಅರಸ ಜಯಚಾಮರಾಜ ಒಡೆಯರ್ ವೀರಭದ್ರ ಸ್ವಾಮಿಗೆ ಅರ್ಪಿಸಿದ ಚಿನ್ನದ ಸರವನ್ನು ಉತ್ಸವ ಮೂರ್ತಿಗೆ ಧರಿಸಲಾಗುತ್ತದೆ.
1952ರಲ್ಲಿ ವೀರಭದ್ರೇಶ್ವರ ದೇವರ ಮಹಿಮೆ ತಿಳಿದು ಇಲ್ಲಿಗೆ ಭೇಟಿ ನೀಡಿದ್ದ ಅಂದಿನ ರಾಜ್ಯದ ಒಡೆಯ ಜಯಚಾಮರಾಜ ಒಡೆಯರ್ ಸುಮಾರು 15 ಗ್ರಾಂ ಚಿನ್ನದ ಸರ ದೇವರಿಗೆ ಕಾಣಿಕೆಯಾಗಿ ಸಲ್ಲಿಸಿದ್ದರು. ಆ ಸರವನ್ನು ದೇವರ ವಿವಿಧ ಉತ್ಸವಗಳಲ್ಲಿ ದೇವರಿಗೆ ಹಾಕಲಾಗುತ್ತದೆ. ಉತ್ಸವ ಮೂರ್ತಿಗೆ ಚಿನ್ನದ ಸರ ಹಾಕುವ ಮುನ್ನ “ಮೈಸೂರು ರಾಜರ ಚಿನ್ನದ ಸರ’ ಎಂದು ಹೇಳಿದ ನಂತರವೇ ಹಾಕಲಾಗುತ್ತದೆ ಎಂದು ದೇವಸ್ಥಾನ ಉತ್ಸವ ಮೂರ್ತಿ ಸಿದ್ಧತಾ ಮಂಡಳಿ ಪ್ರಮುಖ ಮಲ್ಲಿಕಾರ್ಜುನ ಮಾಶೆಟ್ಟಿ ತಿಳಿಸಿದ್ದಾರೆ.
ಈ ಚಿನ್ನದ ಸರದ ಪದಕದ ಎದುರಿಗೆ ಮೈಸೂರು ಒಡೆಯರ ರಾಜ್ಯದ ಲಾಂಛನ “ಗಂಡಬೇರುಂಡ’ ಪಕ್ಷಿ ಇದೆ. ಅದರ ಹಿಂದೆ ಜೆಸಿಆರ್ಡಬ್ಲ್ಯು 1952, ಎಚ್. ಎಚ್ ದಿ| ಮಹಾರಾಜ್ ಆಫ್ ಮೈಸೂರು ಎಂದು ಬರೆಯಲಾಗಿದೆ.
ಜ.27ರವರೆಗೆ ಜಾತ್ರೆ
ಪ್ರತಿವರ್ಷ ಜ.14ರಿಂದ ಜ.27ರವರೆಗೆ ವೀರಭದ್ರೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿವರ್ಷವೂ ಲಕ್ಷಾಂತರ ಭಕ್ತರು ಸೇರುತ್ತಾರೆ. ಈ ವೇಳೆ ಪಟ್ಟಣದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯುತ್ತದೆ. ಜ.25 ಹಾಗೂ ಜ.26ರಂದು ಪ್ರಮುಖ ಜಾತ್ರೆ ನಡೆಯುತ್ತದೆ. ಈ ವೇಳೆ ಅಗ್ನಿಕುಂಡ ಪ್ರವೇಶ, ರಥೋತ್ಸವ ಹಮ್ಮಿಕೊಳ್ಳಲಾಗಿರುತ್ತದೆ. ಅಲ್ಲದೇ ಉತ್ಸವ ಮೂರ್ತಿ ಮೆರವಣಿಗೆ ನಿರಂತರ 24 ಗಂಟೆ ಕಾಲ ನಡೆಯುತ್ತಿರುವುದು ವಿಶೇಷವಾಗಿದೆ.
ವೀರಭದ್ರೇಶ್ವರ ದೇವರ ಮಹಿಮೆ ಅಪಾರವಾಗಿದೆ. ಪುರಾತನ ಕಾಲದ ಈ ದೇವಾಲಯದಲ್ಲಿ ಅನೇಕ ವಿಸ್ಮಯಕಾರಿ ಘಟನೆಗಳು ಘಟಿಸಿವೆ. ಈ ಭಾಗದಲ್ಲಿ ಆಳ್ವಿಕೆ ಮಾಡಿದ ಮುಸ್ಲಿಂ ದೊರೆ ನಿಜಾಮ್ ಕೂಡ ವೀರಭದ್ರೇಶ್ವರ ಜಾತ್ರೆಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರು. ಅದೇ ರೀತಿ ಮೈಸೂರು ರಾಜರು ವೀರಭದ್ರೇಶ್ವರ ದರ್ಶನ ಪಡೆದು ಕಾಣಿಕೆ ಸಮರ್ಪಿಸಿದ್ದರು. ನಂತರ ಅವರಿಗೆ ಪುತ್ರ ಸಂತಾನ ಭಾಗ್ಯ ಪ್ರಾಪ್ತಿಯಾಗಿತ್ತು. ನಂತರದ ದಿನಗಳಲ್ಲಿ ರಾಜ ಮನೆತನದ ಯಾರೂ ಈ ಕಡೆ ಬಂದಿಲ್ಲ ಎಂದು ಹಿರಿಯರು ಹೇಳುತ್ತಾರೆ.
ಮಲ್ಲಿಕಾರ್ಜುನ ಮಾಶೆಟ್ಟಿ ,
ದೇವಸ್ಥಾನ ಉತ್ಸವ ಮೂರ್ತಿ ಸಿದ್ಧತಾ ಮಂಡಳಿ ಪ್ರಮುಖ
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ