ಶರಣು ಸಲಗರಗೆ ಬಿಜೆಪಿ ಟಿಕೆಟ್ಗಾಗಿ ಪಾದಯಾತ್ರೆ
ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ.
Team Udayavani, Jan 22, 2021, 4:37 PM IST
ಬಸವಕಲ್ಯಾಣ: ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗಲೆಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಾಫರವಾಡಿ ಗ್ರಾಮದಿಂದ ಸುಕ್ಷೇತ್ರ ಹಾರಕೂಡ ಗ್ರಾಮದವರೆಗೆ ದೀಡ್ ನಮಸ್ಕಾರ ಮುಖಾಂತರ ಪಾದಯಾತ್ರೆ ನಡೆಸಿದರು.
ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್ ಹಾಗೂ ಊರಿನ ಹಿರಿಯ ಮುಖಂಡ ಶಾಂತವಿಜಯ ಪಾಟೀಲ್ ಅವರು ಗ್ರಾಮದ ಹನುಮಾನ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಶಾಂತವಿಜಯ ಪಾಟೀಲ್ ಮಾತನಾಡಿ, ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ. ಮೂರು ತಿಂಗಳ ದೀರ್ಘಾವ ಧಿ ಲಾಕ್ಡೌನ್ ದಿನಗಳಲ್ಲಿ ಕ್ಷೇತ್ರದ 50,000 ಬಡ ಕುಟುಂಬಗಳಿಗೆ ಅವರು ಮಾಡಿರುವ ಉಚಿತ ಅನ್ನದಾಸೋಹ ಸೇವೆ ಮರೆಯಲಾರದು ಎಂದರು.
ಹುಲಸೂರ, ಪರತಾಪುರ, ಮಂಠಾಳ, ಗುಂಡೂರ, ಯಲ್ಲದಗುಂಡಿ, ಭೋಸಾ, ಕೋಹಿನೂರ ಹಾಗೂ ಸಿರಗಾಪುರ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾಫರವಾಡಿ ಗ್ರಾಮದ ಪ್ರಮುಖರಾದ ಮಹಾರಾಜಪ್ಪ ಮುಳೆ, ಮಾರುತಿ ದಾಸರವಾಡಿ, ಗಣಪತಿ ದಾಸೂರೆ, ಸೂರ್ಯಕಾಂತ್ ಸೂರ್ಯವಂಶಿ, ಮೌನೇಶ್ವರ ಪಾಂಚಾಳ, ಚನ್ನಪ್ಪ ಪಾಟೀಲ್, ಮಹಾದೇವ ಪೂಜಾರಿ ಹಾಗೂ ಪಕ್ಷದ ವಿವಿಧ ಪದಾ ಧಿಕಾರಿಗಳಾದ ರಾಜಕುಮಾರ ಸಿರಗಾಪುರ, ಶಿವರಾಜ ತಾಟೆ, ನಿತ್ಯಾನಂದ ಕೊಂಡಗೆ, ಪ್ರಕಾಶ್ ಸುಂಠಾಣೆ, ರತಿಕಾಂತ್ ಕೋಹಿನೂರ, ನಾಗೇಶ್ ಮೇತ್ರೆ, ಸಿದ್ದು ಬಿರಾದಾರ, ಗುರುನಾಥ ಮೂಲಗೆ, ಸಲ್ಮಾನ್ ಶರೀಫ್, ಜ್ಞಾನೇಶ್ವರ ಪಾಟೀಲ್, ಶಿವಕುಮಾರ ಶೇಟಗಾರ, ಬಾಬುರಾವ ಹಿಂಸೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ