ಪಡಿತರ ಅಕ್ರಮ: 600 ಕ್ವಿಂಟಲ್ ಅಕ್ಕಿ, ತೊಗರಿಬೇಳೆ, ಹಾಲಿನ ಪುಡಿ ಜಪ್
Team Udayavani, Oct 8, 2018, 6:30 AM IST
ಬೀದರ: ಶನಿವಾರ ಬೆಳಗ್ಗೆ ನಗರದ ಗಾಂಧಿ ಗಂಜ್ ಹಾಗೂ ಚಿದ್ರಿ ಸಮೀಪದ ಗೋದಾಮಿನ ಮೇಲೆ ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರ ಮಾರ್ಗದರ್ಶನದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ತಡರಾತ್ರಿ ಮುಕ್ತಾಯಗೊಂಡಿದ್ದು, ಸುಮಾರು 600ಕ್ಕೂ ಅಧಿಕ ಕ್ವಿಂಟಲ್ ಅಕ್ಕಿ, ತೊಗರಿ ಬೇಳೆ, ಹಾಲಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಗಾಂಧಿಗಂಜ್ನ ಎಪಿಎಂಸಿ ಗೋದಾಮು ದಾಳಿಯಲ್ಲಿ 41.80 ಟನ್ ಅಕ್ಕಿ, 50.70 ಕ್ವಿಂಟಲ್ ತೊಗರಿ ಬೇಳೆ, 50 ಕೆಜಿ ಹಾಲಿನ ಪುಡಿ, 1.50 ಕ್ವಿಂಟಲ್ ಅಮೂಲ್ ಪ್ರೋಟಿನ್ ಪುಡಿ, 1.25 ಕ್ವಿಂಟಲ್ ಗೋಧಿ ವಶಪಡಿಸಿಕೊಳ್ಳಲಾಗಿದೆ.
ಸಾಗಣೆಗೆ ಬಳಸುತ್ತಿದ್ದ ಲಾರಿ ಕೂಡ ಜಪ್ತಿ ಮಾಡಲಾಗಿದೆ. ಚಿದ್ರಿ ಸಮೀಪದ ಇಂಡಿಯನ್ ಕೂಲರ್ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 22.55 ಟನ್ ಅಕ್ಕಿ, 15.25 ತೊಗರಿ ಬೇಳೆ, 52 ಕ್ವಿಂಟಲ್ ಗೋ ಧಿ, 22 ಕೆಜಿ ಹೆಸರು ಕಾಳು, 2.50 ಕ್ವಿಂಟಲ್ ಹಾಲಿನ ಪುಡಿ, 1 ಕ್ವಿಂಟಲ್ ಗೋಧಿ ರವಾ, 90 ಕೆಜಿ ಸಾಂಬಾರ ಮಸಾಲಾ, 13 ಬ್ಯಾಗ್ ಹಾಲಿನ ಪುಡಿ (1 ಕೆಜಿ ತೂಕದ 25 ಬ್ಯಾಗ್) ವಶಪಡಿಸಿಕೊಳ್ಳಲಾಗಿದೆ.
ಟೆಂಪೋ ಕೂಡ ಜಪ್ತಿ ಮಾಡಲಾಗಿದೆ. ಗಾಂಧಿ ಗಂಜ್ನ ಗೋದಾಮು ದಾಳಿಗೆ ಸಂಬಂಧಿಸಿದಂತೆ ನಿಶಾಂತ್ ಪವಾರ, ಕರಣ ಪಾಟೀಲ, ವೆಂಕಟ್,ಚಂದ್ರಪ್ಪಾ ಹಾಗೂ ಆರೋಣ ಅವರ ವಿರುದಟಛಿ ಪ್ರಕರಣ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಈಗಾಗಲೇ ಬಂಧಿಸಲಾಗಿದೆ. ಚಿದ್ರಿಯ ಇಂಡಿಯನ್ ಕೂಲರ್ ಮೇಲೆ ನಡೆಸಿದ ದಾಳಿಗೆ ಸಂಬಂ ಧಿಸಿದಂತೆ ಸೂರ್ಯಕಾಂತ್,ಮಚೇಂದ್ರ, ಕರಣ ಪಾಟೀಲ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ