ಕೈಗೆ ಬರುವ ಮುನ್ನ ಭತ್ತದ ಬೆಳೆ ನೆಲದ ಪಾಲು
Team Udayavani, Nov 25, 2021, 12:36 PM IST
ದೇವದುರ್ಗ: ಒಂದು ಕಡೆ ಬೆಲೆ ಕುಸಿತ, ಮತ್ತೊಂದು ಕಡೆ ಮಳೆ-ಗಾಳಿಗೆ ಬೆಳೆಗಳ ನಷ್ಟ. ಇಂತಹ ಸಂಕಷ್ಟ ಮಧ್ಯೆಯೂ ಮಂಗಳವಾಡ ತಡರಾತ್ರಿ ಧಾರಾಕಾರ ಸುರಿದ ಮಳೆಯಿಂದ ಬಹುತೇಕ ಗ್ರಾಮಗಳಲ್ಲಿ ಭತ್ತದ ಬೆಳೆ ನೆಲಕ್ಕಚ್ಚಿದೆ. ಕರಡಿಗುಡ್ಡ ಗ್ರಾಮದ ರೈತರು ಜಮೀನ ಗದ್ದೆಗೆ ಹೋಗಿ ನೆಲಕ್ಕೂರಗಿದ ಭತ್ತದ ಬೆಳೆ ನೋಡಿ ದಿಗಿಲು ಬಡಿದಂತಾಗಿದೆ.
ಕಳೆದೊಂದು ವಾರಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಬಾಗೂರು, ಕರಡಿಗುಡ್ಡ, ನಿಲವಂಜಿ, ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ನೂರಾರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ಏಕಾಏಕಿ ಹತ್ತಿ ಬೆಲೆ ಕುಸಿದೆ. ಇನ್ನು ಬಿಡಿಸುವ ಹಂತದಲ್ಲಿರುವ ಹತ್ತಿ ಮೋಡ ಕವಿದ ವಾತಾವರಣ, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಅವಾಂತರಕ್ಕೆ ಬೆಳೆ ಕೆಂಪು ಬಣ್ಣಕ್ಕೆ ತೀರಿಗಿ ರೋಗ ಬಾಧೆ ಹೆಚ್ಚಾಗಿದೆ.
ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರಗಳು ಆರಂಭಿಸಬೇಕು ಎನ್ನುವ ರೈತರ ಕೂಗಿನ ಧ್ವನಿ ಕೇಳುಸುತ್ತಿಲ್ಲ. ಬುಧವಾರ ಕೂಡ ಮೋಡ ಕವಿದ ವಾತಾವರಣ, ಆಗಾಗ ಸುರಿಯುತ್ತಿರುವ ಮಳೆಯಿಂದ ರೈತರಿಗೆ ಇನ್ನಷ್ಟು ಆತಂಕ ತಂದಿದೆ. ಕೃಷ್ಣಾ ನದಿ ತೀರದ ರೈತರು ಭತ್ತ ಕಟಾವು ಮಾಡಿಕೊಂಡಿದ್ದು, ಬೆಲೆ ಇಲ್ಲದ ಕಾರಣ ಅವರವರ ಜಮೀನಲ್ಲಿ ಬರಕ್ ರಕ್ಷಣೆಯೊಂದಿಗೆ ರಕ್ಷಿಸಲಾಗುತ್ತಿದೆ. ಜಾಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಭತ್ತದ ಬೆಳೆ ಗಾಳಿಗೆ ನೆಲಕ್ಕಚ್ಚಿದೆ. ಸಾವಿರಾರು ರೂ. ಖರ್ಚು ಮಾಡಿಕೊಂಡು ಕಟಾವು ಮಾಡುವ ಮುನ್ನವೇ ಭತ್ತದ ಬೆಳೆ ನೆಲಕ್ಕಚ್ಚಿದೆ ಎಂದು ರೈತ ರಂಗಪ್ಪ ನೋವು ತೊಡಿಕೊಂಡರು.
ಈ ಹಿಂದೆ ಬಿದ್ದ ಮಳೆಗೆ ಹಾನಿಯಾದ ಬೆಳೆ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಬುಧವಾರ ಮತ್ತೂಮ್ಮೆ ಮಳೆ ಬಿದ್ದು, ಜಾಲಹಳ್ಳಿ ಹಾಗೂ ದೇವದುರ್ಗ ಹೋಬಳಿಯಲ್ಲಿ ಬೆಳೆಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ, ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. -ಶ್ರೀನಿವಾಸ್ ಚಾಪಲ್, ಪ್ರಭಾರ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ