“ಹರಿವ ನೀರಿಗೆ ನಿಲ್ಲೆಂದ, ನಿಂತ ನೀರು ಸಂಗ್ರಹಿಸಿದ”
Team Udayavani, Mar 22, 2022, 2:38 PM IST
ಬೀದರ: ಬೀದರ ಸತತ ಬರದ ತೆಕ್ಕೆಗೆ ಜಾರುವ ಜಿಲ್ಲೆ. ಆದರೆ, ಇಲ್ಲಿನ ಚಿಟ್ಟಾವಾಡಿಯ ಪ್ರಯೋಗಶೀಲ ಕೃಷಿಕ ಮಹ್ಮದ್ ಜಾಫರ್ “ಜಲ ಮರುಪೂರಣ’ ಮೂಲಕ ಬಹು ಬೆಳೆ ಬೆಳೆದು ರೈತ ವಿಜ್ಞಾನಿ ಎನಿಸಿಕೊಂಡಿದ್ದಾನೆ.
ಬಿದ್ದ ಮಳೆ ನೀರಿನಲ್ಲಿ ಶೇ.2ರಷ್ಟು ಮಾತ್ರ ಭೂಮಿಯೊಳಗೆ ಇಳಿದು, ಉಳಿದದ್ದು ಹರಿದು ಹೋಗುವುದರಿಂದ ನಮಗೇನು ಲಾಭ ಎಂದು ಅರಿತ ರೈತ, ಹರಿದು ಪೋಲಾಗುವ ಮಳೆ ನೀರು ಸಂಗ್ರಹಣೆ, ತೆರೆದ ಬಾವಿಗೆ ಜಲ ಮರುಪೂರಣ, ಇಂಗು ಹೊಂಡ ನಿರ್ಮಾಣದ ಮೂಲಕ ನೀರು ಸದ್ಬಳಕೆ ಮಾಡಿಕೊಳ್ಳುವ ವಿಧಾನ ಅನುಸರಿಸುತ್ತಿದ್ದಾನೆ.
ಬೆಟ್ಟ, ಹಳ್ಳದ ಮೂಲಕ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳಲು 500 ಅಡಿ ಉದ್ದದ ಚೆಕ್ ಡ್ಯಾಂ ಮತ್ತು ಅದರ ಎದುರಿಗೆ 400 ಅಡಿಯ ಇಂಗು ಹೊಂಡ ನಿರ್ಮಿಸಿಕೊಂಡಿದ್ದಾನೆ. ಹಾಗಾಗಿ ಬರಗಾಲ ಸ್ಥಿತಿಯಲ್ಲೂ ಇಲ್ಲಿನ ಬಾವಿ ನೀರಿನಿಂದ ತುಂಬಿಕೊಂಡಿರುತ್ತದೆ.
ಈ ನೀರಿನಲ್ಲಿ ತಮ್ಮ 12 ಎಕರೆ ಜಮೀನಿನಲ್ಲಿ ವಿವಿಧ ಬಗೆ ಹಣ್ಣು- ತರಕಾರಿ ಬೆಳೆಯುತ್ತಿದ್ದಾರೆ. ಓದಿದ್ದು ಎಸ್ಸೆಸ್ಸೆಲ್ಸಿ ಆದರೂ, ಕೃಷಿ ವಿಜ್ಞಾನಿಗಳಂತೆ ಈ ರೈತನ ಕೃಷಿ ಪ್ರಯೋಗಗಳು ಒಂದೆರಡಕ್ಕೆ ನಿಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್