ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ-ಸಮವಸ್ತ್ರ ಪೂರೈಕೆ
•ಸರ್ಕಾರಿ ಶಾಲೆಗಳು ಆರಂಭ •23 ಸಿಆರ್ಸಿ ವ್ಯಾಪ್ತಿಯ ಶಾಲೆಗಳಿಗೆ ಕೆಲ ಪಠ್ಯಪುಸ್ತಕ ಸರಬರಾಜು
Team Udayavani, May 28, 2019, 10:21 AM IST
ಬಸವಕಲ್ಯಾಣ: ನಗರ ಹೊರವಲಯದ ಹಳೆ ವಿದ್ಯಾಪೀಠ ಶಾಲೆ ಕಟ್ಟಡದಿಂದ ಆಯಾ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ.
ಬಸವಕಲ್ಯಾಣ: ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಅನುದಾನ ಸಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳು ಸರಬರಾಜು ಕಾರ್ಯ ಭರದಿಂದ ಸಾಗಿದೆ.
ಮೇ ಅಂತ್ಯದೊಳಗೆ ಎಲ್ಲ ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಬೇಕೆಂಬ ಇಲಾಖೆ ಆದೇಶ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜಕ ತುಕರಾಮ ರೊಡ್ಡೆ ಸಮ್ಮುಖದಲ್ಲಿ ವಿತರಣೆ ಕಾರ್ಯ ನಡೆಯುತ್ತಿದೆ. ನಗರದ ಬಂಗ್ಲಾ ಹತ್ತಿರದ ಹಳೆ ವಿದ್ಯಾಪೀಠ ಶಾಲೆಯ ಕಟ್ಟಡದಲ್ಲಿ ಸಂಗ್ರಹಿಸಲಾದ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಆಯಾ ಶಾಲೆಗಳಿಗೆ ವಾಹನಗಳ ಮೂಲಕ ಕೆಲವು ದಿನಗಳಿಂದ ಸರಬರಾಜು ಮಾಡಲಾಗುತ್ತಿದೆ.
ತಾಲೂಕಿನ ಒಟ್ಟು 24 ಸಿಆರ್ಸಿ ಪೈಕಿ ಬಸವಕಲ್ಯಾಣ ನಗರದ ಹೊರತು ಪಡಿಸಿ 23 ಸಿಆರ್ಸಿ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಈಗಾಗಲೇ ಸರ್ಕಾರದಿಂದ ಬಂದ ಕೆಲವು ಪಠ್ಯಪುಸ್ತಕಗಳನ್ನು ತಲುಪಿಸುವ ಕಾರ್ಯ ಮುಗಿದಿದೆ. ಮರಾಠಿ ಮತ್ತು ಉರ್ದು ವಿಷಯಕ್ಕೆ ಸಂಬಂಧ ಪಟ್ಟ ಶೇ.40ರಷ್ಟು ಪುಸ್ತಗಳು ಸಂಬಂಧ ಪಟ್ಟ ಇಲಾಖೆ ಯಿಂದ ಸರಬರಾಜು ಆಗಿಲ್ಲ. ಅವುಗಳನ್ನು ಕೆಲವು ದಿನಗಳಲ್ಲಿ ತರಿಸಿ ಆಯಾ ಶಾಲೆ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಒಂದು ವೇಳೆ ವಿಳಂಬವಾದಲ್ಲಿ, ಕಳೆದ ವರ್ಷ ಉಳಿದ ಅಲ್ಪಸ್ವಲ್ಪ ಪುಸ್ತಕಗಳನ್ನು ಶೈಕ್ಷಣಿಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಬಾರದ ಪುಸ್ತಕಗಳು: 3ನೇ ತರಗತಿಯ ಗಣಿತ, ನಲಿಕಲಿ, 4ನೇ ತರಗತಿಯ ಗಣಿತ ಮತ್ತು ಪರಿಸರ ವಿಷಯ, 6ನೇ ತರಗತಿಯ ಗಣಿತ ಭಾಗ-2, ವಿಜ್ಞಾನ, ಸಮಾಜ ವಿಜ್ಞಾನ ಭಾಗ-2, ಇಂಗ್ಲಿಷ್, 7ನೇ ತರಗತಿಯ ಗಣಿತ ಭಾಗ-1 ಮತ್ತು ವಿಜ್ಞಾನ ಭಾಗ-2, ಸಮಾಜ ವಿಜ್ಞಾನ ಭಾಗ-2, 8ನೇ ತರಗತಿಯ ವಿಜ್ಞಾನ ಭಾಗ-1, ಸಮಾಜ ವಿಜ್ಞಾನ ಭಾಗ-2, ದೈಹಿಕ ಶಿಕ್ಷಣ, 9ನೇ ತರಗತಿಯ ವಿಜ್ಞಾನ ಭಾಗ-1 ಮತ್ತು 2, ಇಂಗ್ಲಿಷ್ ಮತ್ತು 10ನೇ ತರಗತಿಯ ವಿಜ್ಞಾನ ಭಾಗ-2 ಪುಸ್ತಕಗಳ ಕೊರತೆ ಇದೆ.
•ವೀರಾರೆಡ್ಡಿ ಆರ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು