ವಿವೇಕಾನಂದರು ಯುವಕರಿಗೆ ಅನುಕರಣೀಯವಾಗಲಿ
Team Udayavani, Mar 26, 2021, 9:33 PM IST
ಔರಾದ: ಯುವಕರು ಜಾಗೃತರಾದರೆ ಮಾತ್ರ ದೇಶದ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದಕ್ಕೆ ವೀರಸನ್ಯಾಸಿ ವಿವೇಕಾನಂದರೇ ನಮಗೆ ಅನುಕರಣೀಯ ಎಂದು ನೆಹರು ಯುವ ಕೇಂದ್ರದ ಅಧಿಕಾರಿ ಮಯೂರಕುಮಾರ್ ಅಭಿಪ್ರಾಯಪಟ್ಟರು.
ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಯುವಕರ ಜೀವನ ಸಮಯ ಪ್ರಜ್ಞೆ ಭಾರತೀಯ ಪರಂಪರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ದೇಶದ ಅನೇಕ ಸತ್ಯವಾದ ಘಟನೆಗಳು ಮೆಲುಕು ಹಾಕಿ ಸಂತರ, ಯುಗ ಪುರುಷರ ಜೀವನ ಶೈಲಿ ನಮ್ಮಲ್ಲಿ ಹಾಸು ಹೊಕ್ಕಾಗಬೇಕು. ಯುವಕರಾದವರು ಗುರಿ ತಲುಪಲು ಜ್ಞಾನವೇ ಮುಖ್ಯ ಭೂಮಿಕೆ ಆಗಲಿದೆ ಎಂದರು. ಸ್ಥಳೀಯ ಶಾಹೀನ್ ಕಾಲೇಜಿನ ಪ್ರಾಚಾರ್ಯ ಗಣೇಶ್ ಜೋಜನಾ, ಐಟಿಐ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಬುರಾವ ಸೋನಾರ, ಅನಿತಾ ರಾಠೊಡ, ದಯಾನಂದ ಬಂಬುಳಗೆ, ಚಂದ್ರಕಾಂತ ಹುಲ್ಸುರೆ, ದಯಾನಂದ, ಸುಜಾತ ಗೋವಿಂದ, ರತ್ನದೀಪ ಕಸ್ತೂರೆ, ಶಿವಕುಮಾರ ಸೂರ್ಯವಂಶಿ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ