ಕರ್ನಾಟಕಕ್ಕೆ ಮತ್ತೂಂದು ಸೊನ್ನೆ: ಕುಮಾರಸ್ವಾಮಿ
Team Udayavani, Feb 2, 2018, 3:13 PM IST
ಮುದ್ದೇಬಿಹಾಳ: ಕೇಂದ್ರ ಸರ್ಕಾರ ಗುರುವಾರ ಮಂಡಿಸಿರುವ ಬಜೆಟ್ ಕರ್ನಾಟಕದ ಮಟ್ಟಿಗೆ ನಿರಾಶಾದಾಯಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಭಾರಿ ಕೊಡುಗೆ ನೀಡುತ್ತಾರೆ ಎಂದು ಕೆಲ ವಿದ್ಯುನ್ಮಾನ ಮಾಧ್ಯಮಗಳು ಬುಧವಾರ ದಿನವಿಡೀ ಸಿಕ್ಕಾಪಟ್ಟೆ ಹೊಗಳಿ ಚರ್ಚೆ ನಡೆಸಿದ್ದವು. ಆದರೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನೋಡಿದರೆ ಪ್ರಧಾನಿ ಮೋದಿ, ಹಣಕಾಸು ಖಾತೆ ಸಚಿವ ಜೇಟ್ಲಿ ಜೋಡಿ ಕರ್ನಾಟಕಕ್ಕೆ ಮತ್ತೂಂದು ಸೊನ್ನೆ ನೀಡಿದೆ. ಸೊನ್ನೆಗೆ ಕನ್ನಡ ನಾಡಿನ ಜನರು ಮರುಳಾಗುತ್ತಾರೆಯೇ ಎಂದು ಪ್ರಶ್ನಿಸಿದರು.
ಮೋದಿ, ಅಮಿತ್ ಶಾ, ಬಿಜೆಪಿ ನಾಯಕರನ್ನು ವೈಭವೀಕರಿಸಿ ಚರ್ಚೆ ಮಾಡುವ ಮಾಧ್ಯಮದವರೇ ನಿಮಗಾದರೂ ಈ ಬಜೆಟ್ ತೃಪ್ತಿ ತಂದಿದೆಯೇ ಅನ್ನೋದನ್ನು ನಾಡಿನ ಜನರಿಗೆ ಸ್ಪಷ್ಟಪಡಿಸಿ ಸತ್ಯಾಂಶ ತೆರೆದಿಡಬೇಕು ಎಂದರು.
ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಕರ್ನಾಟಕದ ರೈತರ ಸಾಲ ಮನ್ನಾ ಕುರಿತ ಯಾವುದೇ ಘೋಷಣೆ ಬಜೆಟ್ನಲ್ಲಿ ಹೊರಡಿಸಿಲ್ಲ. ಕರ್ನಾಟಕದ ಮಟ್ಟಿಗೆ ಇದು ನಿರಾಶಾದಾಯಕ ಬಜೆಟ್.
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್