Muddebihala: ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ: ಗೂಡಂಗಡಿಗಳ ತೆರವು
Team Udayavani, Jan 25, 2024, 1:13 PM IST
ಮುದ್ದೇಬಿಹಾಳ: ಪಟ್ಟಣದ ತಾಲೂಕು ಆಡಳಿತ ಸೌಧದ ಸರ್ಕಾರಿ ಜಾಗ ಅತಿಕ್ರಮಿಸಿ ಇಡಲಾಗಿದ್ದ ಗೂಡಂಗಡಿಗಳನ್ನು ತಾಲೂಕಾಡಳಿತ, ಪುರಸಭೆ ಮತ್ತು ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲು ಬೆಳಿಗ್ಗೆ ಪ್ರಾರಂಭಿಸಲಾಗಿದೆ.
ಕೊರೆಯುವ ಚಳಿಯಲ್ಲೂ ಅಧಿಕಾರಿಗಳು, ಪೊಲೀಸರು, ಪುರಸಭೆ ಸಿಬ್ಬಂದಿ ಜೊತೆ ಜೆಸಿಬಿ ಬಳಸಿ ಬಹುತೇಕ ಅಂಗಡಿಗಳನ್ನು ನೆಲಸಮಗೊಳಿಸತೊಡಗಿದ್ದಾರೆ.
ಈ ಬಗ್ಗೆ ಎದುರಾದ ಪ್ರತಿರೋಧವನ್ನು ಯಾವ ಅಧಿಕಾರಿಯೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಈ ಡಬ್ಬಾ ಅಂಗಡಿಗಳನ್ನು ಸರ್ಕಾರಿ ಜಾಗ ಅತಿಕ್ರಮಿಸಿ ಇಡಲಾಗಿತ್ತು. ನಿತ್ಯವೂ ಕಚೇರಿ ಕೆಲಸಗಳಿಗೆ ಹೋಗಿ ಬರುವ ಸಾರ್ವಜನಿಕರ ಸುಲಿಗೆ ಮಾಡಲು ಕೆಲ ಅಂಗಡಿಕಾರರು ಮುಂದಾಗಿದ್ದರು. ಇದನ್ನು ಖಂಡಿಸಿ, ಅನಧಿಕೃತವಾಗಿ ಇಟ್ಟಿರುವ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು, ಮಾಧ್ಯಮದವರು ತಹಶೀಲ್ದಾರ್, ಜಿಲ್ಲಾಧಿಕಾರಿ ಸೇರಿ ಹಲವರ ಮೇಲೆ ಭಾರೀ ಒತ್ತಡ ಹಾಕಿದ್ದರು.
ಸ್ಥಳೀಯ ಶಾಸಕರು ಕೂಡಾ ಅತಿಕ್ರಮಣ ತೆರವು ಪರ ಇದ್ದರು. ಹೀಗಾಗಿ ತೆರವು ಕಾರ್ಯಾಚರಣೆ ಬರದಿಂದ ಸಾಗಿದೆ. ಕಾಲಾವಕಾಶ ಕೊಟ್ಟರೂ ತೆರವುಗೊಳಿಸದ ಅಂಗಡಿಗಳು ಜೆಸಿಬಿ ಹೊಡೆತಕ್ಕೆ ಸಿಲುಕಿ ಛಿದ್ರಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್