ಮಣ್ಣಿನ ಸಣ್ಣ ಗಣಪನಿಗೆ ಸರಳ ಪೂಜೆ
Team Udayavani, Aug 24, 2020, 4:35 PM IST
ವಿಜಯಪುರ: ಹಿಂದೂ ಧರ್ಮೀಯರ ದೊಡ್ಡ ಹಬ್ಬಗಳಲ್ಲಿ ಒಂದಾದ ಅದರಲ್ಲೂ ಯುವ ಸಮೂಹದ ಸಂಭ್ರಮದ ಹಬ್ಬಗಳಲ್ಲಿ ಪ್ರಮುಖವಾದ ಗಣೇಶ ಹಬ್ಬಕ್ಕೂ ಕೋವಿಡ್ ಕಾರ್ಮೋಡ ಕವಿದಿದೆ. ಹಿಂದಿನಂತೆ ದೊಡ್ಡ ದೊಡ್ಡ ಪೆಂಡಾಲ್, ಬೃಹತ್ ಗಣೇಶ ಮೂರ್ತಿ, ಪಟಾಕಿ ಸದ್ದು, ಅಬ್ಬರದ ಧ್ವನಿವರ್ಧಕ ಹಾಗೂ ಸಂಗೀತ-ಹಾಸ್ಯೋತ್ಸವದಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ. ಸಣ್ಣ ಮಣ್ಣಿನ ಗಣಪನಿಗೆ ಸರಳ ರೀತಿಯಲ್ಲೇ ಪೂಜೆ ಸಲ್ಲಿಸಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಗಣೇಶ ಹಬ್ಬ ಎಂದರೆ ಮನೆ ಮನೆಗಳಲ್ಲಿ ಸಂಭ್ರಮ. ಓಣಿಗಲ್ಲಿ ಸದ್ದು ಗದ್ದಲಸಾಮಾನ್ಯ. ಕಳೆದ ಆರು ತಿಂಗಳಿಂದ ಬಹುತೇಕ ಎಲ್ಲ ಧರ್ಮಿಯರ ಹಬ್ಬ-ಉತ್ಸವಗಳನ್ನು ಬಲಿ ಪಡೆದಿರುವ ಕೋವಿಡ್-19 ಕಾರ್ಮೋಡ ಗಣೇಶ ಉತ್ಸವದ ಮೇಲೂ ಆಗಿದೆ. ಸರ್ಕಾರ ಕೋವಿಡ್ ನಿಗ್ರಹಕ್ಕಾಗಿ ಗಣೇಶ ಉತ್ಸವವನ್ನು ಅದರಲ್ಲೂ ಸಾರ್ವಜನಿಕ ಗಣೇಶ ಪ್ರತಿ‚ಷ್ಠಾಪನೆಗೆ ಸಂಪೂರ್ಣ ನಿರ್ಬಂಧ ಹೇರಿತ್ತು. ಹಿಂದೂಪರ ವಿವಿಧ ಸಂಘಟನೆಗಳ ಹೋರಾಟದಿಂದಾಗಿ ಷರತ್ತು ಬದ್ಧ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದೆ. ಸರ್ಕಾರ ಪರವಾನಿಗೆ ನೀಡಿದರೂಗಣೇಶ ಉತ್ಸವದ ಸಂಭ್ರಮ ಮಾತ್ರ ಅದ್ಧೂರಿತನ ಕಳೆದುಕೊಂಡು ಸರಳವಾಗಿಯೇ ನಡೆದಿದೆ.
ವಿಜಯಪುರ ಮಹಾನಗರ ಒಂದರಲ್ಲೇ ಸುಮಾರು 200ಕ್ಕೂ ಹೆಚ್ಚು ಗಣೇಶ ಉತ್ಸವ ಸಮಿತಿಗಳಿದ್ದು, ಮಹಾ ಮಂಡಳವೂ ಇದೆ. ಇದಲ್ಲದೇ ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ದೇವರಹಿಪ್ಪರಗಿ, ಆಲಮೇಲ, ಇಂಡಿ, ಚಡಚಣ, ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಲ್ಲಿ 10ರಿಂದ 30ರವರೆಗೆ ಹಾಗೂ ಜಿಲ್ಲೆಯ ದೊಡ್ಡ ದೊಡ್ಡ ಗ್ರಾಮಗಳಲ್ಲೂ ನಾಲ್ಕಾರು ಕಡೆಗಳಲ್ಲಿ ಸಾರ್ವಜನಿಕ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪನೆ ಇದ್ದೇ ಇರುತ್ತಿತ್ತು. ಐದರಿಂದ ಹನ್ನೊಂದು ದಿನಗಳವರೆಗೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯೂ ಇರುತ್ತಿತ್ತು. ಗಲ್ಲಿ ಗಲ್ಲಿಗಳ ರಸ್ತೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದವು. ಎಲ್ಲರಿಗಿಂತ ವೈವಿಧ್ಯ ಹಾಗೂ ಆಕರ್ಷಣೀಯವಾಗಿ ತಮ್ಮ ಗಣೇಶ ಕಾಣಬೇಕೆಂದು ಹತ್ತಾರು ಲಕ್ಷ ರೂ. ಖರ್ಚು ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದು ಸಾಮಾನ್ಯವಾಗಿತ್ತು.
ಆದರೆ ಕೋವಿಡ್ ಕಾರಣಕ್ಕೆ ಸರ್ಕಾರ ವಿಧಿಸಿರುವ ಷರತ್ತು, ನಿರ್ಬಂಧಗಳ ಕಾರಣಕ್ಕೆ ಜಿಲ್ಲೆಯಲ್ಲಿ ಈ ಬಾರಿ ನಗರ-ಗ್ರಾಮೀಣ ಪ್ರದೇಶಗಳಲ್ಲಿ ಶೇ. 50ರಷ್ಟೂ ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಂಡಿಲ್ಲ. ಪ್ರತಿಷ್ಠಾಪನೆ ಆಗಿರುವ ಗಣೇಶ ಮೂರ್ತಿಗಳು ಕೂಡ ಸಣ್ಣ ಟೆಂಟ್ನಲ್ಲಿವೆ. ಹಲವು ದಶಕಗಳ ಬಳಿಕ ಜಿಲ್ಲೆಯಲ್ಲಿ ಮಣ್ಣಿನ ಗಣೇಶ ಮೂರ್ತಿಗಳೇ ಹೆಚ್ಚು ಪ್ರತಿಷ್ಠಾಪನೆಗೊಂಡಿದ್ದು, ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳು ಮೊದಲ ದಿನವೇ ವಿಸರ್ಜನಗೊಂಡಿವೆ.
ಜಿಲ್ಲೆಯಲ್ಲಿ ಈ ಬಾರಿ ಬಹುತೇಕ ಎಲ್ಲಿಯೂ ದೊಡ್ಡ ಪ್ರಮಾಣದ ಮಾತಿರಲಿ ಸಣ್ಣ ಪಟಾಕಿ ಸದ್ದು ಕೇಳಿ ಬಂದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲದ ಕಾರಣ ಅಲ್ಲಲ್ಲಿ ಭಜನೆ, ಸರಳ ಪೂಜೆಗಳು ಮಾತ್ರ ಪ್ರಧಾನವಾಗಿ ಕಂಡು ಬಂದವು. ಒಟ್ಟಾರೆ ಸಂಖ್ಯೆಯಲ್ಲೂ ಕುಸಿತ, ಅಬ್ಬದರಲ್ಲೂ ಕ್ಷೀಣವಾಗಿ ಸರಳವಾಗಿ-ಸಣ್ಣ ಸಣ್ಣ ಮಣ್ಣಿನ ಗಣೇಶ ಮೂರ್ತಿಗಳು ಪ್ರತಿಷ್ಠಾಪಿಸಿ ಹಬ್ಬ ಮುಗ್ಗದಂತೆ ನೋಡಿಕೊಂಡಿದ್ದಾರೆ.
– ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ