ಮೆರವಣಿಗೆ ವೇಳೆ ಮಲಗಿದ ಭಕ್ತರ ಮೇಲೆ ನಡೆದ ಪಲ್ಲಕ್ಕಿ ಹೊತ್ತ ಪೂಜಾರಿ
Team Udayavani, Apr 5, 2021, 5:06 PM IST
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕ ತಂಗಡಗಿ ಗ್ರಾಮದಲ್ಲಿ ದೇವರ ಪಲ್ಲಕ್ಕಿ ಹೊತ್ತ ಪೂಜಾರಿ ಮೆರವಣಿಗೆ ಮಾರ್ಗದಲ್ಲಿ ಮಲಗಿದ್ದ ಹರಕೆ ಹೊತ್ತ ಭಕ್ತರ ಮೇಲೆ ನಡೆದುಕೊಂಡು ಹೋಗಿರುವ ಸಂಪ್ರದಾಯ ಚರ್ಚೆಗೆ ಗ್ರಾಸವಾಗಿದೆ.
ತಂಗಡಗಿ ಗ್ರಾಮದ ಸುಂಗಠಾಣ ಸಿದ್ದಪ್ಪ ಮುತ್ಯಾನ ಪಲ್ಲಕ್ಕಿ ಪುರಪ್ರವೇಶ ಸಂದರ್ಭ ಭಕ್ತರು ನೆಲದ ಮೇಲೆ ಮಲಗಿ ಹರಕೆ ತೀರಿಸಿದ್ದು, ಮಲಗಿದ್ದವರ ಮೇಲೆ ಪಲ್ಲಕ್ಕಿ ಹೊತ್ತ ಪೂಜಾರಿ ಓಡಾಡುವ ಮೂಲಕ ಸಂಪ್ರದಾಯ ಪಾಲಿಸಿದರು.
ಇದು ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದರೂ ಭಕ್ತರು ಕೋವಿಡ್ ಕುರಿತ ಯಾವ ಮುನ್ನೆಚ್ಚರಿಕೆ ವಹಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಬಂಧ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.
ಸೋಮವಾರ ದಿಂದ ಉತ್ಸವ ಆರಂಭಗೊಂಡಿದ್ದು, ಮಂಗಳವಾರ ಕೂಡ ಮುಂದುವರೆಯಲಿದೆ. ಸದರಿ ಉತ್ಸವದಲ್ಲಿ ದೇವರಿಗೆ ಮದ್ಯ ನೈವೇದ್ಯ ನೀಡುವ ಸಂಪ್ರದಾಯ ಇದ್ದು, ಪುರುಷರೊಂದಿಗೆ ಮಹಿಳೆ, ಮಕ್ಕಳೆಂಬ ವ್ಯತ್ಯಾಸ ಇಲ್ಲದೇ ಭಕ್ತರೆಲ್ಲರೂ ಸಿದ್ದಪ್ಪ ಮುತ್ಯಾಗೆ ಮದ್ಯ ಬಾಟಲಿ ಸಮರ್ಪಿಸುತ್ತಾರೆ. ಜೊತೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಕೃಷ್ಣಾ ನದಿ ತೀರದಲ್ಲೇ ಭಕ್ತರು ಮದ್ಯ ಸೇವಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು