ನಂದಿಧ್ವಜ ಮೆರವಣಿಗೆ-ಸಿದ್ದೇಶ್ವರ ಜಾತ್ರೆಗೆ ವಿಧ್ಯುಕ್ತ ಚಾಲನೆ
Team Udayavani, Jan 12, 2018, 12:06 PM IST
ವಿಜಯಪುರ: ಶತಮಾನೋತ್ಸವದ ಸಂಭ್ರಮದಲ್ಲಿರುವ ಐತಿಹಾಸಿಕ ವಿಜಯಪುರ ಮಹಾನಗರದ ಆರಾಧ್ಯ ದೈವ ಶ್ರೀಸಿದ್ಧೇಶ್ವರ ಏಳುದಿನಗಳ ನಮ್ಮೂರ ಜಾತ್ರೆಗೆ ಗುರುವಾರ ಅಧಿಕೃತ ಚಾಲನೆ ದೊರೆತಿದೆ. ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ, ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರು, ಗೋಮಾತೆಗೆ ಪೂಜೆ ಸಲ್ಲಿಸಿ ನಂದಿಧ್ವಜಕ್ಕೆ ಚಾಲನೆ ನೀಡಿದರು. ಸಿದ್ದೇಶ್ವರ ಜಾತ್ರೆಯಿಂದ ಆರಂಭಗೊಂಡ ನಂದಿಧ್ವಜಗಳ ಮೆರವಣಿಗೆ ದೇವಸ್ಥಾನದಿಂದ ಮಂಗಲವಾದ್ಯಗಳೊಂದಿಗೆ ಸಾಗಿ ಚತುರ್ಮುಖ ಗಣಪತಿ ದೇವಾಲಯದಲ್ಲಿ ವಿಘ್ನೇಶನಿಗೆ ಪೂಜೆ ಸಲ್ಲಿಸಿ ಮರಳಿ ಸಿದ್ದೇಶ್ವರ ದೇವಸ್ಥಾನಕ್ಕೆ ತಲುಪಿತು.
ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶಟ್ಟಿ, ಸಿದ್ಧೇಶ್ವರ ಸಂಸ್ಥೆ ಪ್ರಮುಖರಾದ ಸಂ.ಗು.ಸಜ್ಜನ, ಬಸಯ್ಯ ಹಿರೇಮಠ, ಸದಾನಂದ ದೇಸಾಯಿ, ಶಂಕರಗೌಡ ಪಾಟೀಲ, ಚಿದಾನಂದ ಇಟ್ಟಂಗಿ, ಶಶಿಧರ ಹಕ್ಕಾಪಕ್ಕಿ, ಶಿವಾನಂದ ನೀಲಾ, ಎಂ.ಎಸ್.ಕರಡಿ, ವಿಜಯಕುಮಾರ ಡೋಣಿ, ಬಸವರಾಜ ಗಣಿ, ನಿಂಗೊಂಡಪ್ಪ ಗೋಲಾಯಿ, ಬಸವರಾಜ ಸುಗೂರ, ಮಲ್ಲಿಕಾರ್ಜುನ ಸಜ್ಜನ, ಎಂ.ಜಿ. ಪಾಟೀಲ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಸ್.ಎಚ್. ನಾಡಗೌಡ, ಕಾರ್ಯಾಧ್ಯಕ್ಷ ಗುರು ಗಚ್ಚಿನಮಠ, ಸದಾಶಿವ ಗುಡ್ಡೋಡಗಿ, ಗೌರವಾಧ್ಯಕ್ಷ ಮಹಾದೇವ ಹತ್ತಿಕಾಳ, ಮಲ್ಲೇಶಪ್ಪ ಗಣಿಯಾರ, ಚಂದು
ಹುಂಡೆಕಾರ, ಸಾಯಿಬಣ್ಣ ಭೋವಿ, ಯಮನಪ್ಪ ಚರ್ಚನಕಲ್ಲ, ನಾಗಪ್ಪ ಗುಗ್ಗರಿ, ಕಿರಣ ಉಳ್ಳಾಗಡ್ಡಿ ಇತರರು ಇದರಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…