ರಸಗೊಬ್ಬರ ವಿತರಣೆಗೆ ಬೆರಳಚ್ಚು ಕಡ್ಡಾಯ
Team Udayavani, Nov 6, 2021, 4:59 PM IST
ಬಸವನಬಾಗೇವಾಡಿ: ತಾಲೂಕಿನ ಪ್ರತಿ ರೈತರಿಗೆ ಇನ್ನೂ ಮುಂದೆ ಕೀಟನಾಶಕ, ರಸಗೊಬ್ಬರ ವಿತರಣೆ ಮಾಡುವ ಮುನ್ನ ರೈತರಿಂದ ಕಡ್ಡಾಯವಾಗಿ ಬೆರಳಚ್ಚು ಪಡೆಯಬೇಕು ಎಂದು ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಕರ ಕಚೇರಿಯ ಸಭಾ ಭವನದಲ್ಲಿ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಇನ್ನೂ ಮುಂದೆ ತಾಲೂಕಿನ ಕೀಟನಾಶಕ, ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರೈತರಿಂದ ಆಧಾರ್ ಕಾರ್ಡ್ ಪಡೆಯಬೇಕು. ಕೀಟನಾಶಕ, ರಸಗೊಬ್ಬರ ವಿತರಣೆ ಮಾಡಿದ ಬಳಿಕ ಅವರ ಬೆರಳಚ್ಚನ್ನು ಕಡ್ಡಾಯವಾಗಿ ಪಡೆಯಬೇಕು. ಒಂದು ವೇಳೆ ಪಡೆಯದೆ ಹೋದಲ್ಲಿ ರಸಗೊಬ್ಬರದ ದಾಸ್ತಾನ ಇದ್ದಹಾಗೆ ಇರುತ್ತದೆ. ಮಾರಾಟವಾಗಿದ್ದು ನಮೊದಿಸಲು ಸಾಧ್ಯವಿಲ್ಲ. ಆಯಾ ಕಂಪನಿಯಿಂದ ಸಬ್ಸಿಡಿ ಹಣ ಪಡೆಯಲು ಮತ್ತು ಹೊಸ ದಾಸ್ತಾನು ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಕೃಷಿ ಅಧಿಕಾರಿ ಗಾಯತ್ರಿ ಸಂಧೆ ಸೇರಿದಂತೆ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ