ತೋಟದಲ್ಲಿಯೇ ಕೊಳೆಯುತ್ತಿದೆ ಕುಂಬಳಕಾಯಿ
Team Udayavani, Apr 7, 2020, 3:52 PM IST
ಸಿಂದಗಿ: ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಬಿಸನಾಳ, ಆಹೇರಿ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ
ಬೆಳೆದಿರುವ ಕುಂಬಳಕಾಯಿ ಮಾರಾಟವಾಗದೆ ತೋಟದಲ್ಲಿಯೇ ಕೊಳೆಯುತ್ತಿದೆ. ತಾಲೂಕಿನ ಮೋರಟಗಿ ಭಾಗದ ಬಿಸನಾಳ, ಆಹೇರಿ ಹಾಗೂ ಇತರ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ರೈತರು 50 ಏಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದು, ಮಾರುಕಟ್ಟೆ ಸಾಗಾಣಿಕೆ ಮಾಡಲು ಆಗದೆ ಇರುವುದರಿಂದ ಕುಂಬಳಕಾಯಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಪ್ರತಿ ಎಕರೆಗೆ 90 ಸಾವಿರ ರೂ. ಲಾಭ ಪಡೆಯುವ ರೈತರು ಇಂದು ಅವರಿಗೆ ಮಾರುಕಟ್ಟೆ ಸಾಗಾಣಿಕೆ ಮಾಡಲು ಆಗದೇ
ಇರುವುದರಿಂದ ನಷ್ಟ ಅನುಭವಿಸುವಂತಾಗಿದೆ.
ಸಾಲ ಮಾಡಿ ಬೆಳೆದ ಕುಂಬಳಕಾಯಿಯನ್ನು ಅನಿವಾರ್ಯವಾಗಿ ಗ್ರಾಮಗಳಲ್ಲಿ ಉಚಿತವಾಗಿ ಹಂಚಲಾಗುತ್ತಿದೆ ಎಂದು ರೈತರಾದ ಬಸಲಿಂಗಪ್ಪ
ಪಾಟೀಲ, ಬುಕರಾಯಗೌಡ ಬಿರಾದಾರ, ಶರಣಪ್ಪ ಪಾಟೀಲ, ಚನ್ನಬಸಪ್ಪ ಬಿರಾದಾರ, ಮಲಗೊಂಡಪ್ಪ ಪಾಟೀಲ, ಶಂಕರಗೌಡ ಬಿರಾದಾರ, ಬಾಳಪ್ಪ
ಪಾಟೀಲ, ಯಲ್ಲಪ್ಪ ಬಿರಾದಾರ, ರೇವಣಸಿದ್ದಪ್ಪ ಪೂಜಾರಿ, ಸಿದ್ರಾಮಪ್ಪ ಪಾಟೀಲ, ಶರಣಪ್ಪ ಪೂಜಾರಿ, ಶರಣಪ್ಪ ಮಂಗಾಳಿ, ಚಂದಪ್ಪ ಬಿರಾದಾರ, ರೇವಣಸಿದ್ದಪ್ಪ ಜೇರಟಗಿ, ಅಮೋಘಸಿದ್ದ ಅಳಲು ತೋಡಿಕೊಂಡಿದ್ದಾರೆ.
ತೋಟಗಾರಿಕೆ ಬೆಳೆ ಬೆಳೆದ ರೈತರು ಆತ್ಮ ಸ್ಥೈರ್ಯ ಕಳೆದುಕೊಳ್ಳಬೇಡಿ. ತಾವು ಬೆಳೆದ ಬೆಳೆಗಳ ಮಾಹಿತಿ ನೀಡಿ. ಸೂಕ್ತ ಮಾರುಕಟ್ಟೆ
ತಿಳಿದುಕೊಳ್ಳೋಣ. ಸಾಗಾಣಿಕೆಗೆ ಅನುಮತಿ ನೀಡಲಾಗುವುದು. ಯಾವುದು ತೊಂದರೆ ಆಗುವುದಿಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಘಿ ಹಿರೇಕುರಬರ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ