ಪಾಪು ಧೀಮಂತ ಹೋರಾಟಗಾರ

ಅಕ್ಕಲಕೋಟದಲ್ಲಿ ಕನ್ನಡ ಭವನ ನಿರ್ಮಾಣದ ಪಾಪು ಕನಸು ನನಸು ಮಾಡಿ

Team Udayavani, Mar 19, 2020, 6:21 PM IST

19-March-26

ಸೊಲ್ಲಾಪುರ: ಹೊರನಾಡು ಕನ್ನಡಿಗರಿಗೆ ಸಮಸ್ಯೆಗಳು ಬಂದಾಗ, ಪಾಪು ಅವರು ತಮ್ಮ ಹೋರಾಟದ ಮೂಲಕ ಮತ್ತು ನೇರ ದಿಟ್ಟ ಬರವಣಿಗೆ ಮೂಲಕ ಸರಕಾರಕ್ಕೆ ವಿಷಯ ತಲುಪಿಸಿ ಸಮಸ್ಯೆಗಳು ಬಗೆ ಹರಿಯುವಂತೆ ಮಾಡುತ್ತಿದ್ದರು. ಇಂತಹ ಧೀಮಂತ ಕನ್ನಡಪರ ಹೋರಾಟಗಾರನನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಕನ್ನಡಿಗರ ಮನ-ಮಂದಿರದಲ್ಲಿರುವ ದೇವರು ಎದ್ದು ಹೊದಂತಾಗಿದೆ ಎಂದು ಯುವ ಸಾಹಿತಿ ಗಿರೀಶ ಜಕಾಪುರೆ ಹೇಳಿದರು.

ಅಕ್ಕಲಕೋಟ ಪಟ್ಟಣದ ಗೆಸ್ಟ್‌ ಹೌಸ್‌ನಲ್ಲಿ ಆದರ್ಶ ಕನ್ನಡ ಬಳಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ, ಸಾಹಿತಿ, ಹೋರಾಟಗಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಇನ್ನು ನಮಗೆ ನೆನಪು ಮಾತ್ರ. ಅವರ ಅಗಲಿಕೆಯಿಂದ ಹೊರನಾಡು ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ರಾಷ್ಟ್ರಮಟ್ಟದಲ್ಲಿ ಹೊರನಾಡು ಕನ್ನಡಿಗರನ್ನು ಒಂದು ವೇದಿಕೆಯಡಿ ತರಲು ಶ್ರಮಿಸಿದ ಅವರ ಕಾರ್ಯ ಮರೆಯುವಂತಿಲ್ಲ. ಅವರು ಬಿತ್ತಿ ಹೊದ ಹೋರಾಟದ ಬೀಜಗಳು ವೃಕ್ಷವಾಗಿ ಬೆಳೆದು ನಾಡು, ನುಡಿಯನ್ನು ಪೋಷಿಸಬೇಕು ಎಂದರು.

ನಾಡಿನ ಒಳಗೂ-ಹೊರಗೂ ಕನ್ನಡ ಗಟ್ಟಿಯಾಗಿ ನಿಲ್ಲಬೇಕಾದರೇ ಪಾಪುವಿನಂತಹ ಇನ್ನೊಬ್ಬ ಹೋರಾಟಗಾರ ಹುಟ್ಟಬೇಕು. ಅಲ್ಲದೆ ಅಕ್ಕಲಕೋಟದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬುದು ಪಾಪು ಅವರ ಕೊನೆ ಆಸೆಯಾಗಿತ್ತು. ಸರಕಾರ ಈ ಬಗ್ಗೆ ಬೇಗ ನಿರ್ಣಯ ಕೈಗೊಂಡು ಅವರ ಅಂತಿಮ ಆಸೆ ಪೂರೈಸಿ ಅವರ ಆತ್ಮಕ್ಕೆ ಶಾಂತಿ ಲಭಿಸುವಂತೆ ಮಾಡಬೇಕು ಎಂದು ಹೇಳಿದರು.

ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕಜಾನ್‌ ಶೇಖ್‌ ಮಾತನಾಡಿ, ಕನ್ನಡ ಮಾತನಾಡಬೇಕಾದರೆ ಅಕ್ಕಲಕೋಟಗೆ ಬರಬೇಕು, ಬಂದವರು ಯಾರು ಹಾಗೆ ಹೋಗುವುದಿಲ್ಲ. ಕನ್ನಡದೊಂದಿಗೆ ಕನ್ನಡಿಗರಾಗಿ ಹೋಗುತ್ತಾರೆ. ಇಂತಹ ಅಕ್ಕಲಕೋಟೆಯಲ್ಲಿ ಮಹಾಮೇಳ ನಡೆಯುತ್ತಿರುವುದು ತುಂಬಾ ಸಂತೋಷ ಎಂದು ಪಾಪು ಹೇಳಿದ್ದರೆಂದು ಸ್ಮರಿಸಿದರು.

ಹಿರಿಯ ಸಾಹಿತಿ ಅ.ಬಾ. ಚಿಕ್ಕಮಣೂರ, ಶಿಕ್ಷಕರಾದ ವಿದ್ಯಾಧರ ಗುರವ, ಸಿದ್ರಾಮಯ್ಯ ಸ್ವಾಮಿ ಸಂತಾಪ ವ್ಯಕ್ತಪಡಿಸಿದರು. ನಾಡೋಜ ದಿವಂಗತ ಡಾ| ಪಾಟೀಲ ಪುಟ್ಟಪ್ಪನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆದರ್ಶ ಕನ್ನಡ ಬಳಗದ ರಾಜಶೇಖರ ಉಮರಾಣಿಕರ, ಮಹೇಶ ಮೇತ್ರಿ, ದಿನೇಶ ಥಂಬದ, ದಿನೇಶ ಚವ್ಹಾಣ, ಶರಣು ಕೋಳಿ, ಕಲ್ಲಪ್ಪ ಕುಟನೂರ, ಸಂಗಣ್ಣ ಫತಾಟೆ, ವಾಸುದೇವ ದೇಸಾಯಿ, ಶರದಚಂದ್ರ ಗಂಗೊಂಡಾ, ಗೌರಿಶಂಕರ ಕೊನಾಪುರೆ ಇದ್ದರು. ಶರಣಪ್ಪ ಫುಲಾರಿ ನಿರೂಪಿಸಿದರು. ಸಂತೋಷ ಪರಿಟ ವಂದಿಸಿದರು.

ಟಾಪ್ ನ್ಯೂಸ್

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.