ಕೊಣ್ಣೂರಲ್ಲಿ ಸ್ವಚ್ಛತಾ ಅಭಿಯಾನ
Team Udayavani, Sep 4, 2017, 12:21 PM IST
ತಾಳಿಕೋಟೆ: ಭಾರತೀಯ ಜನತಾ ಪಾರ್ಟಿ ಮುದ್ದೇಬಿಹಾಳ ಮಂಡಲ ಕೊಣ್ಣೂರ ಗ್ರಾಮದಲ್ಲಿ ರವಿವಾರ ಗ್ರಾಮದ ಬಸ್ ನಿಲ್ದಾಣ ಹಾಗೂ ಮಾರುತೇಶ್ವರ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಸcತ್ಛತಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಬಿಜೆಪಿ ಹಿರಿಯ ಮುಖಂಡ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಈ ಅಭಿಯಾನದ ಉದ್ದೇಶ ನಮ್ಮ ರಸ್ತೆ, ಬೀದಿ ಸ್ವತ್ಛ ಮಾಡುವುದು. ಅಭಿಯಾನವನ್ನು ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾವೇ ಸ್ವತಃ ರಾಜಘಾಟ್ನಲ್ಲಿ ರಸ್ತೆಯಲ್ಲಿ ಕಸ ಗೂಡಿಸುವುದರ ಮೂಲಕ ಚಾಲನೆ ನೀಡಿದ್ದಾರೆ. ಅದನ್ನು ನಾವು ರಾಜಾದ್ಯಂತ ಸಕ್ರಿಯವಾಗಿ ಮುನ್ನಡಿಸಿಕೊಂಡು ಹೊಗೋಣ ಎಂದರು.
ಮಂಗಳಾದೇವಿ ಬಿರಾದಾರ, ಅರವಿಂದ ಕಾಶಿನಕುಂಟಿ, ಜ್ಯೋತಿ ಅಸ್ಕಿ, ಗುರುಬಾಯಿ ನಾಯ್ಯೋಡಿ, ರಾಮನಗೌಡ ನಿರಲಗಿ, ಬಸವರಾಜ ಕೂಡಗಿ, ಬಾಪುಗೌಡ ಬಿರಾದಾರ, ರಮೇಶ ಆಲೂರ, ಅಶೋಕ ರಾಠೊಡ (ನೇಬಗೇರಿ), ಬಸವರಾಜ ಅಗಸರ ಮುದಕಪ್ಪ ವಾಲೀಕಾರ, ಯಲ್ಲಪ್ಪ ಮಾದರ, ಸದಾಶಿವ ತಳವಾರ, ಶಾಂತು ದೊಡಮನಿ, ಕಿರಣ ನಾಯ್ಯೋಡಿ ಇದ್ದರು.