ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಕೈ, ಕಮಲ ದೋಸ್ತಿ
Team Udayavani, Jul 29, 2018, 7:00 AM IST
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಗೆಲ್ಲುವ ಅವಕಾಶ ಸ್ಪಷ್ಟವಾಗಿದ್ದರೂ ಬಿಜೆಪಿ ಬಣ ರಾಜಕೀಯ ಎದುರಾಳಿ ಕಾಂಗ್ರೆಸ್ಗೆ ಅಧಿಕಾರ ತಂದು ಕೊಟ್ಟಿದೆ.
ಬಿಜೆಪಿ ಬಂಡುಕೋರರ ಬೆಂಬಲದಿಂದ ಕಾಂಗ್ರೆಸ್ನ ಐದನೇ ಮೇಯರ್ ಆಗಿ ಶ್ರೀದೇವಿ ಲೋಗಾಂವಿ, ಉಪ ಮೇಯರ್ ಆಗಿ ಬಿಜೆಪಿ ಬಂಡುಕೋರ ಗೋಪಾಲ ಘಟಕಾಂಬಳೆ ಆಯ್ಕೆಯಾಗಿದ್ದಾರೆ. ಜೆಡಿಎಸ್ ಸದಸ್ಯರು ಬಿಜೆಪಿ ಸೇರಿದ್ದರಿಂದ ಬಿಜೆಪಿಗೆ ಈ ಬಾರಿ ಗೆಲ್ಲುವ ಸುಲಭ ಹಾಗೂ ಸ್ಪಷ್ಟ ಅವಕಾಶ ಇತ್ತು. ಆದರೂ, ಸತತ ಐದನೇ ಬಾರಿಗೆ ಪಾಲಿಕೆ ಗದ್ದುಗೆ ಕಾಂಗ್ರೆಸ್ಗೆ ಸುಲಭವಾಗಿ ಲಭಿಸಿದ್ದು, ಮತ್ತೂಮ್ಮೆ ರಾಜಕೀಯ ಅಚ್ಚರಿಗೆ ಕಾರಣವಾಗಿದೆ.
ಚುನಾವಣೆಯಲ್ಲಿ ಮತ್ತೂಮ್ಮೆ ಕಾಂಗ್ರೆಸ್-ಬಿಜೆಪಿ ಬಂಡಾಯ ಮೈತ್ರಿ ಫಲ ನೀಡಿದ್ದು, ಮಾಜಿ ಸಚಿವ ಎಂ.ಬಿ.ಪಾಟೀಲರ ರಾಜಕೀಯ ತಂತ್ರ ಫಲ ನೀಡಿದೆ. ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಂತ್ರ ವಿಫಲವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಚುನಾವಣೆಯಲ್ಲಿ ಬಿಜೆಪಿ ಮಾಜಿ ಸಚಿವ ಅಪ್ಪು³ ಪಟ್ಟಣಶೆಟ್ಟಿ ಬಣ ಮೇಲುಗೈ ಸಾ ಧಿಸಿದ್ದು, ಯತ್ನಾಳ ಬಣಕ್ಕೆ ಸೋಲಿನ ಮುಜುಗುರ ಅನುಭವಿಸುವಂತೆ ಮಾಡಿದೆ.