65 ಕೋಟಿ ರೂ. ವೆಚ್ಚದಲ್ಲಿ ನಿರಂತರ ನೀರು

ಕೊಳ್ಳೇಗಾಲಕ್ಕೆ ನಿರಂತರ ಶುದ್ಧ ಕುಡಿಯುವ ನೀರಿನ ಯೋಜನೆ • 3ನೇ ಹಂತದ ಕಾಮಗಾರಿಗೆ ಸಿದ್ಧತೆ

Team Udayavani, Jul 20, 2019, 1:25 PM IST

cn-tdy-2

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿಗಾಗಿ ಸಿದ್ಧತೆಗಳು ನಡೆದಿದ್ದು, ಪೈಪುಗಳು ಮತ್ತಿತರ ಪರಿಕರಗಳನ್ನು ಶೇಖರಿಸಲಾಗಿದೆ.

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣಕ್ಕೆ ನಿರಂತರ (24×7) ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 65 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಕ್ಕೆ ನಗರಸಭೆ ಸಿದ್ಧತೆ ನಡೆಸಿದೆ.

ಕೊಳ್ಳೇಗಾಲ ನಗರಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಯೋಜನೆಯ ಮೊದಲ ಹಂತ 1965ರಲ್ಲಿ ಅನುಷ್ಠಾನಗೊಂಡಿದೆ. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 4.5 ಎಂಎಲ್ಡಿ ನೀರು ಸರಬರಾಜಾಗುತ್ತಿತ್ತು. 2ನೇ ಹಂತದ ಕಾಮಗಾರಿಯು 2006-07ರಲ್ಲಿ ಅನುಷ್ಠಾನಗೊಂಡಿದ್ದು, 2010ರ ಜನಗಣತಿ ಆಧಾರದ ಅನುಗುಣವಾಗಿ ಸುಮಾರು 9.0 ಎಂಎಲ್ಡಿ ನೀರು ಸದಸ್ಯ ಸರಬರಾಜಾಗುತ್ತಿದೆ.

ಪ್ರಸ್ತುತ ಕೊಳ್ಳೇಗಾಲ ಪಟ್ಟಣಕ್ಕೆ ಕಾವೇರಿ ನದಿಯಿಂದ ಸುಮಾರು 7 ಎಂಎಲ್ಡಿ ಹಾಗೂ ಎಲ್ಲ 31 ವಾರ್ಡುಗಳಲ್ಲಿ ಸುಮಾರು 120 ಬೋರ್‌ವೆಲ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಶುದ್ಧಿಕರಣ ಘಟಕದಲ್ಲಿ ಅಳವಡಿಸಿರುವ ಮೋಟಾರ್‌ ಪಂಪುಗಳು, ಕವಾಟಗಳು, ನೀರು ಶೋಧಕಗಳನ್ನು ಅಳವಡಿಸಿ ಸುಮಾರು 15 ವರ್ಷಗಳಾಗಿದ್ದು ದುರಸ್ತಿಯಲ್ಲಿವೆ.

3ನೇ ಹಂತದ ಕಾಮಗಾರಿಗೆ ಸಿದ್ಧತೆ: 2019-20ರಲ್ಲಿ 3ನೇ ಹಂತದ ಕಾಮಗಾರಿಯಾಗಿ ಈ ಪರಿಕರಗಳನ್ನು ಬದಲಾಯಿಸಿ ಪುನಶ್ಚೇತನಗೊಳಿಸಿ, 2035ರ ಜನಗಣತಿಗೆ ಅನುಗುಣವಾಗಿ 13.5 ಎಂಎಲ್ಡಿ ಹಾಗೂ 2050ರ ಜನಗಣತಿಗೆ ಅನುಗುಣವಾಗಿ 16.6 ಎಂಎಲ್ಡಿಗೆ ಉನ್ನತೀಕರಿಸುವ ಕಾಮಗಾರಿ ಹಾಗೂ ಸಮಗ್ರವಾಗಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು 12 ವಲಯಗಳಾಗಿ ವಿಂಗಡಿಸಿ ಸುಮಾರು 185 ಕಿ.ಮೀ. ವಿತರಣಾ ಜಾಲ, 6 ಮೇಲ್ಮಟ್ಟದ ಸಂಗ್ರಹಣಾಗಾರ ನಿರ್ಮಿಸುವ ಕಾಮಗಾರಿ, 16 ಸಾವಿರ ಸಂಖ್ಯೆಯ ಮನೆ ನಲ್ಲಿ ಸಂಪರ್ಕದ ಜತೆಗೆ ಮೀಟರ್‌ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಯ ಒಟ್ಟು ಅಂದಾಜು ರೂ. 65 ಕೋಟಿಗಳಾಗಿದ್ದು ಬೆಂಗಳೂರಿನ ಮಾಲೂ ಕನ್ಸ್‌ಸ್ಟಕ್ಷನ್‌ ಗೆ ನಗರಸಭೆ ವತಿಯಿಂದ ಟೆಂಡರ್‌ ಆಹ್ವಾನಿಸಿ ಆಯ್ಕೆ ಮಾಡಿ ಯೋಜನೆಯನ್ನು ವಹಿಸಲಾಗಿದೆ.

ನಗರಕ್ಕೆ ನಿರಂತರ ಶುದ್ಧ ನೀರು ಪೂರೈಕೆ: ಕೊಳ್ಳೇಗಾಲ ನಗರಕ್ಕೆ ನಿರಂತರ (24×7) ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗುವುದರಿಂದ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ನಿರಂತರವಾಗಿ ಸರಬರಾಜು ಮಾಡಲಾಗುವುದು. ಪ್ರತಿ ಮನೆಗೂ ಸಾಕಷ್ಟು ನೀರಿನ ಪೂರೈಕೆ ಮಾಡಿ ಕನಿಷ್ಠ ದರ ನೀಡುವುದು ಅವಶ್ಯವಾಗಿದೆ. ಪ್ರತಿ ಬಳಕೆದಾರರೂ ನೀರಿನ ದರವನ್ನು ನಿಯಮಿತವಾಗಿ ನೀಡಿದರೆ ನೀರಿನ ಪೂರೈಕೆಯನ್ನು ಸರಿಯಾಗಿ ನಿರ್ವಹಿಸಬಹುದಾಗಿದೆ. ನೀರಿನ ಪೂರೈಕೆ ವೆಚ್ಚ ಮತ್ತು ಆದಾಯ ಸರಿಸಮಾನವಾಗಿ ಇರಬೇಕು. ನೀರು ನಿರಂತರವಾಗಿ ಪೂರೈಕೆ ಆಗುವುದರಿಂದ ನೀರಿನ ಅಪವ್ಯಯವಾಗುವುದನ್ನು ತಡೆಗಟ್ಟುವುದು ಹಾಗೂ ಪರಿಸರ ಸ್ವಚ್ಛತೆಗೆ ಸಹಕರಿಸುವುದು. ಅನಧಿಕೃತ ನಳ ಸಂಪರ್ಕಗಳನ್ನು ತಡೆಗಟ್ಟುವುದು, ಹೊಸ ತಾಂತ್ರಿಕತೆಯನ್ನು ಅಳವಡಿಸುವುದರಿಂದ ಪದೇಪದೇ ಬರುವ ದುರಸ್ಥಿ ವೆಚ್ಚಗಳನ್ನು ತಡೆಗಟ್ಟುವುದು ಯೋಜನೆಯ ಉದ್ದೇಶವಾಗಿದೆ.

ಮೀಟರ್‌ ಅಳವಡಿಸಿದರೆ ಬಳಕೆ ಪ್ರಮಾಣ ಪತ್ತೆ: ಮೀಟರ್‌ ಅಳವಡಿಕೆಯಿಂದ ಬಳಸಿದಷ್ಟೇ ನೀರಿಗೆ ದರ ಪಾವತಿಸಬಹುದು. ಬಳಕೆಯ ನೀರಿನ ಪ್ರಮಾಣ ತಿಳಿಯಲಿದೆ. ಮೀಟರ್‌ ತಕ್ಕಂತೆ ದರ ಪಾವತಿಸುವುದರಿಂದ ಉತ್ತಮ ನೀರಿನ ಸೌಲಭ್ಯ ಲಭ್ಯವಾಗಿ ವಿತರಣಾ ವ್ಯವಸ್ಥೆಯ ಖಚಿತ ಮಾಹಿತಿ ದೊರೆಯುತ್ತದೆ. ನಿರ್ವಹಣೆಯ ಕಾರ್ಯಕ್ಷಮತೆ ಹೆಚ್ಚುತ್ತದೆ. ಶೇ. 40ರಿಂದ ಶೇ. 50ರಷ್ಟು ನೀರು ಸೋರಿಕೆಯಿಂದ ಆಗುವ ನಷ್ಟ ತಪ್ಪಿ ನಿಯಮಿತ ನೀರು ಪೂರೈಕೆಯಾಗಲಿದೆ. ನೀರಿನ ದರವನ್ನು ವೈಜ್ಞಾನಿಕವಾಗಿ ವಿಧಿಸಲಾಗುವುದು. ನೀರಿನ ಸಂರಕ್ಷಣೆ, ಜಲಮೂಲ ಕಾಯಿಲೆಗಳ ಬಗ್ಗೆ ತಿಳಿವಳಿಕೆ ಮೂಡಲಿದೆ. ಜಲಮೂಲಗಳಿಂದ ಬರುವ ಖಾಯಿಲೆಗಳನ್ನು ತಡೆಗಟ್ಟಬಹುದು.

ನಿರಂತರ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ ನಿವಾರಣೆಯಾಗಿ ಉತ್ತಮ ಆರೋಗ್ಯ ಲಭಿಸಲಿದೆ. ವಿತರಿಸಲು ಲಭ್ಯವಿರುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ನೀರನ್ನು ಸಂಗ್ರಹ ಮಾಡಬೇಕಾಗಿರುವುದಿಲ್ಲ. 10 ಮೀ. ಎತ್ತರದವರೆಗೆ ನೀರು ಬರುವುದರಿಂದ ಯಾವುದೇ ನೀರೆತ್ತುವ ಮೋಟಾರ್‌ಗಳ ಅವಶ್ಯಕತೆ ಇರುವುದಿಲ್ಲ. ಚಾವಣಿ ಮೇಲೆ ನೀರು ಸಂಗ್ರಹಾಗಾರ ಬೇಕಾಗಿರುವುದಿಲ್ಲ. ನಿರ್ವಹಣೆ ಖರ್ಚು, ಸಮಯ ಉಳಿತಾಯವಾಗಲಿದೆ ಎಂದು ನಗರಸಭೆ ತಿಳಿಸಿದೆ. ಯೋಜನೆ ಸಂಪೂರ್ಣವಾಗಿ ಸರ್ಕಾರದ ಹಣದಿಂದಲೇ ಅನುಷ್ಠಾನಗೊಳ್ಳುತ್ತಿರುವುದರಿಂದ ಮರುಪಾವತಿಸುವ ಪ್ರಶ್ನೆ ಉದ್ಗವಿಸುವುದಿಲ್ಲ. ಯೋಜನೆ ಖಾಸಗೀಕರಣವಾಗುವುದಿಲ್ಲ. ಸಾರ್ವಜನಿಕರು ನೀರನ್ನು ಬಳಸಿದ ಪ್ರಮಾಣಕ್ಕೆ ನೀರಿನ ತೆರಿಗೆಯನ್ನು ಕೌನ್ಸಿಲ್ ನಿರ್ಣಯದಂತೆ ಪಾವತಿಸಬಹುದಾಗಿದೆ ಎಂದು ನಗರಸಭೆ ತಿಳಿಸಿದೆ.

 

● ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.