ಪಾರ್ವತಾಂಬ ಜಾತ್ರೆಗೆ ಬಂಡಿ ಜತೆ ಬಂದ ಭಕರು


Team Udayavani, Nov 24, 2021, 12:41 PM IST

ಜಾತ್ರೆ

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಪಾರ್ವತಾಂಬ ಜಾತ್ರಾ ಮಹೋ ತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಹಸಗೂಲಿ ಗ್ರಾಮದಿಂದ ಸೋಮವಾರ ಮಧ್ಯಾಹ್ನ ಪಾರ್ವತಾಂಬ ದೇವಿಯ ವಿಗ್ರಹವನ್ನು ಕಸಗಲಪುರ ಕಾಡಿನಲ್ಲಿ ನೆಲೆಸಿರುವ ಮೂಲ ಸ್ಥಳಕ್ಕೆ ಕೊಂಡೊಯ್ಯಲಾಯಿತು.

ಸಾವಿರಾರು ಭಕ್ತರು, ಗ್ರಾಮಸ್ಥರು ಸೊಮವಾರ ದೇವರನ್ನು ಗ್ರಾಮದಿಂದ ಬೀಳ್ಕೊಟ್ಟರು. ಮರುದಿನ ಮಂಗಳವಾರ ಬೆಳಗ್ಗೆ ಆಲತ್ತೂರು, ಶೆಟ್ಟಹಳ್ಳಿ ಮೂಲಕ ದೇವರನ್ನು ಹೊತ್ತು ತಂದು ನಂತರ ಪಾರ್ವತಾಂಬ ಮಾರಮ್ಮ ತಾಯಿ ಯನ್ನು ಸಿಂಗರಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ರಥೋತ್ಸವವನ್ನು ಭಕ್ತರು ಉತ್ಸಾಹದಿಂದ ಎಳೆದು ಧನ್ಯತಾಭಾವ ಮೆರೆದರು.

ಎತ್ತಿನಗಾಡಿಗಳಲ್ಲಿ ಆಗಮಿಸಿದ ಭಕ್ತರು: ಪಾರ್ವತಾಂಬ ಜಾತ್ರೆಗೆ ಸೋಮವಾರ ರಾತ್ರಿಯೇ ಜಾನುವಾರುಗಳು ಹಾಗೂ ನೂರಾರು ಎತ್ತಿನಗಾಡಿಯಲ್ಲಿ ಆಗಮಿಸಿದ್ದವು. ಮಂಗಳವಾರ ಸಹ ಸಾವಿರಾರು ಜಾನುವಾರು ಹಾಗು ಎತ್ತಿನಗಾಡಿಯಲ್ಲಿ ಜನರು ಬಂದಿದ್ದರು. ತಾಲೂಕು ಹಾಗು ಅಕ್ಕಪಕ್ಕದ ತಾಲೂಕಿನಿಂದ ಭಕ್ತಾದಿಗಳು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಜಾತ್ರಾ ಮಹೋತ್ಸವಕ್ಕೆ ಎತ್ತಿನ ಗಾಡಿಯಲ್ಲಿ ಮನೆ-ಮಂದಿ ಕುಳಿತು ಜಾತ್ರೆಗೆ ಆಗಮಿಸಿ ದ್ದರು. ಸೋಮವಾರ ರಾತ್ರಿಯೇ ನೂರಾರು ಎತ್ತಿನ ಗಾಡಿಗಳು ಜಾತ್ರಾ ಮಾಳದಲ್ಲಿ ಜಮಾಯಿಸಿದ್ದವು. ಜಾತ್ರೆಗೆ ಜಾನುವಾರುಗಳನ್ನು ಕರೆತಂದು ದೇವಿಯ ಪೂಜೆ ಮಾಡಿಸಿದರೆ ಕಾಯಿಲೆ ಬರಲ್ಲ ಎಂಬ ನಂಬಿಕೆ ಇದೆ.

ಹೀಗಾಗಿ ಜಾತ್ರೆಗೆ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಮುಖ ಕಾರಣವಾಗಿದೆ. ಹರಕೆ ಹೊತ್ತವರು ಜಾತ್ರಾ ಮಾಳದಲ್ಲಿ ಬಾಯಿ ಬೀಗ ಹಾಕಿಸಿಕೊಂಡು ಭಕ್ತಿ ಮೆರೆ ದರು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ಬಸ್‌ ವ್ಯವಸ್ಥೆ: ಹಸಗೂಲಿ ಪಾರ್ವತಾಂಬ ಜಾತ್ರೆಗೆ ಸಾವಿರಾರು ಏಕಕಾಲಕ್ಕೆ ಆಗಮಿಸಿದ ನಿರೀಕ್ಷೆಯಿದ್ದ ಕಾರಣ ಕೆಎಸ್‌ಆರ್‌ಟಿಸಿ ವತಿ ಯಿಂದ ಗುಂಡ್ಲುಪೇಟೆ-ಹಸಗೂಲಿಗೆ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ ಗರಗನಹಳ್ಳಿ ಗೇಟ್‌ನಿಂದ ಖಾಸಗಿ ವಾಹನಗಳಾದ ಆಟೋ, ಗೂಡ್ಸ್‌ ಆಟೋ, ಟೆಂಪೋದಲ್ಲಿ ಕುರಿಗಳಂತೆ ತುಂಬಿಕೊಂಡು ತೆರಳುತ್ತಿದ್ದರು. ಪಾರ್ವತಾಂಬ ಜಾತ್ರೆಗೆ ಕಾಂಗ್ರೆಸ್‌ ಮು ಖಂಡ ಎಚ್‌.ಎಂ.ಗಣೇಶ್‌ಪ್ರಸಾದ್‌, ಚಾಮು ಲ್‌ ಅಧ್ಯಕ್ಷ ಎಚ್‌.ಎಸ್‌.ನಂಜುಂಡ ಪ್ರಸಾದ್‌ ಹಾಗೂ ಎಎಸ್ಪಿ ಕೆ.ಎಸ್‌.ಸುಂದರ ರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಭೇಟಿ ನೀಡಿ ದ್ದರು. ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ. ಲಕ್ಷ್ಮೀಕಾಂತ್‌ ಮಾರ್ಗದರ್ಶನದಲ್ಲಿ ಗುಂಡ್ಲು ಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್‌.ಮಹ ದೇವಸ್ವಾಮಿ, ಬೇಗೂರು ಸಬ್‌ ಇನ್ಸ್‌ ಪೆಕ್ಟರ್‌ ರಿಹಾನ ಬೇಗಂ ಬಂದೋಬಸ್ತ್ ಏರ್ಪಡಿಸಿದ್ದರು.

 ಸೇವಂತಿ ಹೂ ಅರ್ಪಣೆ

ಪಾರ್ವತಾಂಬ ಜಾತ್ರಾ ಮಹೋತ್ಸವದ ಮತ್ತೂಂದು ವಿಶೇಷ ಎಂದರೆ ಹರಕೆ ಹೊತ್ತ ಭಕ್ತರು ಸೇವಂತಿ ಹೂವು ನೀಡುತ್ತಾರೆ. ತಮ್ಮ ಶಕ್ತಾನುಸಾರ ದೇವಿಗೆ ಹೂವನ್ನು ಅರ್ಪಿಸಿ ಭಕ್ತಿ ಮೆರೆಯುವರು. ಹಾಗಾಗಿ ರಥೋತ್ಸವವು ಸಂಪೂರ್ಣ ಸೇವಂತಿ ಹೂ ಮಯವಾಗಿತ್ತು. ಸೇವಂತಿಗೆ ಹೂವಿನ ತೇರಿನಂತೆ ಕಂಡು ಬಂತು.

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.