ತಹಶೀಲ್ದಾರ್ ಅಧಿಕಾರ ಸ್ವೀಕಾರ
Team Udayavani, Feb 2, 2019, 7:09 AM IST
ಸಂತೆಮರಹಳ್ಳಿ: ಯಳಂದೂರು ತಾಲೂಕಿನ ನೂತನ ತಹಶೀಲ್ದಾರ್ ಆಗಿ ವರ್ಷಾ ಶುಕ್ರವಾರ ಅಧಿಕಾರವನ್ನು ಸ್ವೀಕರಿಸಿದರು. ನಿರ್ಗಮಿತ ತಹಶೀಲ್ದಾರ್ ಗೀತಾ ಹುಡೇದ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಆಯೋಜಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವರ್ಷಾ, ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ತಾಲೂಕು ಇದಾಗಿದೆ. ತಾಲೂಕಿನ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇನೆ. ಮುಂದಿನ ದಿನಗಳಲ್ಲಿ ಪ್ರಾಮಾ ಣಿಕವಾಗಿ ಎಲ್ಲರ ವಿಶ್ವಾಸದೊಂದಿಗೆ ಅಧಿ ಕಾರ ನಿರ್ವಹಿಸುತ್ತೇನೆ ಎಂದು ಹೇಳಿದರು.
ನಿರ್ಗಮಿತ ತಹಶೀಲ್ದಾರ್ ಗೀತಾ ಹುಡೇದ ಮಾತನಾಡಿ, ತಾನು ಎಸಿ ಆಗಿ ಆಯ್ಕೆಯಾಗಿದ್ದೇನೆ. ಪ್ರೊಬೆಷನರಿ ಅವಧಿಯಲ್ಲಿ ಯಳಂದೂರು ತಹಶೀಲ್ದಾರ್ ಆಗಿ 4 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ಖುಷಿ ಕೊಟ್ಟಿದೆ. ಜನಪ್ರತಿನಿಧಿಗಳು, ಇಲಾಖೆಗಳ ಅಧಿಕಾರಿಗಳು ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಮಾಂಬಳ್ಳಿ ಗ್ರಾಮದ ಸ್ಮಶಾನದ ಸಮಸ್ಯೆ ಸೇರಿ ಇತರೆ ಪ್ರಮುಖ ಕೆಲಸಗಳು ಇನ್ನೂ ಬಾಕಿ ಇವೆ.
ಈ ಬಗ್ಗೆ ನೂತನ ತಹಶೀಲ್ದಾರ್ಗೆ ತಿಳಿಸಿದ್ದು, ಅವರಿಗೂ ಸಹಕರಿಸುವಂತೆ ಮನವಿ ಮಾಡಿದರು. ತಾಪಂ ಅಧ್ಯಕ್ಷ ನಿರಂಜನ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಸದಸ್ಯ ನಾಗರಾಜು ಇಒ ಬಿ.ಎಸ್. ರಾಜು ಶಿರಸ್ತೇದಾರ್ ಶಾಂತಿ, ರಜಸ್ವ ನಿರೀಕ್ಷಕ ನಂಜುಂಡಸ್ವಾಮಿ ಇದ್ದರು.