ಶತಮಾನ ಕಂಡ ಶಾಲಾವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ವ್ಯಾಪಕ ವಿರೋಧ
Team Udayavani, Nov 27, 2023, 11:15 PM IST
ಚಾಮರಾಜನಗರ: ನಗರದ ಶತಮಾನ ಕಂಡ ಸರ್ಕಾರಿ ಶಾಲೆಯಾದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದ್ದು, ಸಾಹಿತಿಗಳು, ಚಿಂತಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಪೇಟೆ ಪ್ರೈಮರಿ ಶಾಲೆ 118 ವರ್ಷ ಹಳೆಯದಾಗಿದ್ದು, ಪಾರಂಪರಿಕ ಕಟ್ಟಡವನ್ನು ಹೊಂದಿದೆ.1 ರಿಂದ 7ನೇ ತರಗತಿಯವರೆಗೆ, ಈ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಪುನರುಜ್ಜೀವನಗೊಳಿಸಬೇಕೆಂದು ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಒತ್ತಾಯಿಸಿದ್ದರು.
ಆದರೆ ಶಾಲಾ ಕಟ್ಟಡ ಪುನರ್ನಿರ್ಮಾಣ ಮಾಡುವುದಿರಲಿ, ಶಾಲೆಯ ಮುಂದೆ ವಿಶಾಲವಾದ ಆವರಣವಿದ್ದು, ಇಲ್ಲಿ ಸಾರ್ವಜನಿಕ ಬಳಕೆಗಾಗಿ ಸ್ನಾನಗೃಹ ಹಾಗೂ ಶೌಚಾಲಯ ನಿರ್ಮಾಣ ಮಾಡಲು ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ನಗರಸಭೆ ಆಯುಕ್ತ ರಾಮದಾಸ್ ಮತ್ತು ಸಿಬ್ಬಂದಿ ಶಾಲೆಯ ಮೈದಾನದಲ್ಲಿ 30*40 ಅಡಿ ಜಾಗವನ್ನು ಶೌಚಾಲಯ ನಿರ್ಮಾಣಕ್ಕಾಗಿ ಗುರುತಿಸಿದ್ದಾರೆ.
ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾದಲ್ಲಿ ಶಾಲೆಯ ಶೈಕ್ಷಣಿಕ ವಾತಾವರಣವೇ ಕಲುಷಿತವಾಗಲಿದೆ ಎಂದು ಎಸ್ಡಿಎಂಸಿ ಸದಸ್ಯರು, ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಿರಿಯ ಸಾಹಿತಿಗಳಾದ ಡಾ. ಹನೂರು ಕೃಷ್ಣಮೂರ್ತಿ ಮತ್ತು ಪ್ರೊ. ಜಿ.ಎಸ್. ಜಯದೇವ್ ಸೇರಿದಂತೆ ಚಿಂತಕರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲೆಯು ಶತಮಾನದಾಟಿದ ಶಾಲೆಯಾಗಿದ್ದು, ಪಾರಂಪರಿಕ ಶೈಲಿಯ ಕಟ್ಟಡಗಳನ್ನೊಳಗೊಂಡ, ವಿಶಾಲ ಮೈದಾನವನ್ನೂ ಹೊಂದಿರುವ ಈ ಶಾಲೆಯು ನಗರದ ಹೃದಯ ಭಾಗದಲ್ಲಿರುವುದು ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ.
ದೂರದೃಷ್ಟಿಯುಳ್ಳ ತಾವು ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಇಂಟ್ಯಾಕ್ ಸಂಸ್ಥೆಯ ಮೂಲಕ ಪಾರಂಪರಿಕ ಶೈಲಿಯಲ್ಲೇ ಪುನರ್ನಿರ್ಮಾಣ ಮಾಡಿಸುವ ಪ್ರಯತ್ನದಲ್ಲಿದ್ದೀರಿ ಎಂದು ಪತ್ರಿಕೆಗಳು ವರದಿ ಮಾಡಿವೆ. ತಮ್ಮ ಈ ಶ್ಲಾಘನೀಯ ಪ್ರಯತ್ನವನ್ನು ನಾವೆಲ್ಲರೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಆದರೆ ಸದರಿ ಶಾಲೆಯ ಆವರಣದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯವೊಂದನ್ನು ನಿರ್ಮಿಸುವ, ಯೋಜನೆಯೊಂದು ಈಗಾಗಲೇ ಕಾರ್ಯಪ್ರವೃತ್ತವಾಗಿದೆಯೆಂದು ಮತ್ತು ಈಗಾಗಲೇ ನಿರ್ಮಾಣ ಕಾರ್ಯಕ್ಕೆ ಸಂಬಂಧಪಟ್ಟ ಪೂರ್ವ ಸಿದ್ಧತೆಗಳನ್ನು ನಗರಸಭೆಯ ಪೌರಾಯುಕ್ತರು ಕೈಗೊಂಡಿದ್ದಾರೆಂದು ತಿಳಿದು ಬಂದಿದೆ. ಶತಮಾನ ದಾಟಿದ ಶಾಲೆಯ ಆವರಣವನ್ನು ಅನ್ಯ ಉದ್ದೇಶಗಳಿಗೆ ಹೀಗೆ ಬಳಸಲು ಪ್ರಾರಂಭಿಸಿದರೆ, ಶತಮಾನಗಳ ಕಾಲ ಸಮಾಜದ ಭಾಗವಾಗಿ ಬೆಳೆದು ಬಂದ ಈ ಶಿಕ್ಷಣ ಸಂಸ್ಥೆಯನ್ನು ನಾವೇ ನಾಶ ಮಾಡಿದ ಹಾಗೆ ಆಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಆಕ್ರಮಣಶೀಲವಾಗಿ ಸಂಭವಿಸುತ್ತಿರುವ ಪ್ರಗತಿ ಮಕ್ಕಳ ಶಿಕ್ಷಣವನ್ನು ಅಂಚಿಗೆ ತಳ್ಳುತ್ತಿದೆ. ಈ ಸಂದರ್ಭದಲ್ಲಿ ತಾವು ದಯಮಾಡಿ ಶಾಲಾವರಣವನ್ನು ಶೌಚಾಲಯ ಇತ್ಯಾದಿ ಯಾವುದೇ ಅನ್ಯ ಉದ್ದೇಶಗಳಿಗೆ ಬಿಟ್ಟುಕೊಡದಂತೆ ತಡೆಯಾಜ್ಞೆ ಹೊರಡಿಸಬೇಕೆಂದು ಮತ್ತು ಶತಮಾನ ದಾಟಿದ ತಾಲೂಕಿನ ಅತಿಮುಖ್ಯವಾದ ಈ ಶಾಲೆಯನ್ನು ಪುನರುಜ್ಜೀವನಗೊಳಿಸಲು ತೀವ್ರ ಕ್ರಮಗಳನ್ನು ಕೈಗೊಳ್ಳಬೇಕೆಂದ ಈ ಮೂಲಕ ಕೋರುತ್ತೇವೆ.ಎಂಬ ಪತ್ರವನ್ನು ಬರೆದಿದ್ದಾರೆ.
ಈ ಪತ್ರಕ್ಕೆ ಹನೂರು ಕೃಷ್ಣಮೂರ್ತಿ ಮತ್ತು ಜಿಎಸ್ ಜಯದೇವ್ ಅವರಲ್ಲದೇ, ರಂಗಕರ್ಮಿ ಕೆ. ವೆಂಕಟರಾಜು, ಸಾಹಿತಿ ಸೋಮಶೇಖರ ಬಿಸಲವಾಡಿ, ಗಾಯಕ ಸಿ.ಎಂ. ನರಸಿಂಹಮೂರ್ತಿ, ಮುಖ್ಯ ಶಿಕ್ಷಕ ನಾಗೇಂದ್ರ, ಶಿಕ್ಷಕಿ ಸುನೀತಮ್ಮ, ಪರಿಸರವಾದಿ ಡಿ.ಎಸ್. ದೊರೆಸ್ವಾಮಿ, ಹಿರಿಯ ಪತ್ರಕರ್ತ ಅಬ್ರಹಾಂ ಡಿಸಿಲ್ವ, ರಂಗನಿರ್ದೇಶಕಿ ಚಿತ್ರಾ, ನಳಿನಿ ವೆಂಕಟರಾಜು ಮತ್ತಿತರರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ