ಹುಲಿ ದಾಳಿಗೆ ಮೂರು ಹಸು, ಒಂದು ಕುರಿ ಸಾವು
Team Udayavani, Nov 4, 2021, 12:08 PM IST
ಗುಂಡ್ಲುಪೇಟೆ: ಹುಲಿ ದಾಳಿಗೆ ಸಿಲುಕಿ ಮೂರು ಹಸು ಹಾಗೂ ಒಂದು ಕುರಿ ಸಾವನ್ನಪ್ಪಿರುವ ಘಟನೆ ತಾಲೂಕಿನ ವಡೆಯನಪುರ ಗ್ರಾಮದಲ್ಲಿ ಮಂಗಳವಾರ ತಡ ರಾತ್ರಿ ಜರುಗಿದೆ. ವಡೆಯನಪುರ ಶಿವಪ್ರಸಾದ್ ತೋಟದ ಮನೆಯ ಬಳಿ ಬೊಮ್ಮಲಾಪುರ ಗ್ರಾಮದ ನಂದೀಶ್ ಅವರಿಗೆ ಸೇರಿದ ಮೂರು ಹಸು ಹಾಗೂ ಒಂದು ಹಸುವಿನ ಕರುವನ್ನು ಹುಲಿ ಸಾಯಿಸಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಎರಡು ತೆನೆ ಹಸು, ಒಂದು ಹಾಲು ಕೊಡುತ್ತಿದ್ದ ಹಸು, ಮತ್ತೂಂದು ಹಸುವಿನ ಕರು ಪ್ರಾಣ ಕಳೆದುಕೊಂಡಿವೆ. ಇದು ರೈತ ನಂದೀಶ್ಗೆ ನುಂಗಲಾರದ ತುತ್ತಾಗಿದೆ. ಹಸುಗಳು ಸಾವನ್ನಪ್ಪಿರುವ ಸ್ಥಳದ ಸುತ್ತ ಮುತ್ತ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಬೆಳಗ್ಗೆಯೇ ಹುಲಿ ದಾಳಿಗೆ ಜಾನುವಾರು ಸಾವ ನ್ನಪ್ಪಿರುವ ವಿಷಯ ತಿಳಿದರೂ ಅರಣ್ಯ ಇಲಾಖೆ ಅಧಿ ಕಾರಿಗಳು ಮಧ್ಯಾಹ್ನದ ತನಕ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:- ದಕ್ಷಿಣಾ ಆಫ್ರಿಕಾದ ಪ್ರಸಿದ್ಧ ಲೇಖಕ, ಕಾದಂಬರಿಕಾರ ಡೇಮನ್ ಕೃತಿಗೆ ಬೂಕರ್ ಪ್ರಶಸ್ತಿ ಗರಿ
ನಂತರಕ್ಕೆ ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಡಾ.ಎಸ್.ಎಸ್. ಲೋಕೇಶ್ ಅವರಿಗೆ ರೈತರು ಘೇರಾವ್ ಹಾಕಿದರು. ಗ್ರಾಮಸ್ಥರಲ್ಲಿ ಆತಂಕ: ಮಂಗಳವಾರ ತಡ ರಾತ್ರಿ ಒಂದೇ ವೇಳೆಯಲ್ಲಿ ನಾಲ್ಕು ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿರುವ ಹಿನ್ನೆಲೆ ಸುತ್ತಮುತ್ತಲ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಜೊತೆಗೆ ಬೋನ್ ಇರಿಸಿ ಹುಲಿ ಸೆರೆಗೆ ಒತ್ತಾಯಿಸಿದ್ದಾರೆ. ಪರಿಹಾರಕ್ಕೆ ಒತ್ತಾಯ: ಹೈನುಗಾರಿಕೆಯಲ್ಲಿ ತೊಡಗಿದ್ದ ರೈತ ನಂದೀಶ್ ಅವರಿಗೆ ಹಸುಗಳೇ ಆಧಾರವಾಗಿದ್ದವು. ಇದೀಗ ಅವುಗಳು ಹುಲಿ ದಾಳಿಗೆ ಸಿಲುಕಿರುವ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಪರುಹಾರ ಶೀಘ್ರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ
Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ
Borderline Personality Disorder: ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್ ಎಂ.ಪೈ ಬ್ಲಾಕ್