ಚಿಕ್ಕಬಳ್ಳಾಪುರ: ದಾಖಲೆ ಇಲ್ಲದ ನಲವತ್ತು ಲಕ್ಷ ಹಣ ವಶ
Team Udayavani, Dec 1, 2019, 10:27 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಬಳಿ ಸಂಜೆ ೪ ಗಂಟೆ ಸಮಯದಲ್ಲಿ ಬೀರಮಂಗಲದ ಚೆಕ್ ಪೋಸ್ಟ್ ನಲ್ಲಿ ಪಿ.ಡಿ.ಓ ವೀರಭದ್ರ ರವರ ತಂಡದವರಿಂದ ಗಸ್ತಿನಲ್ಲಿದ್ದ ಸಂದರ್ಭ KA 50 N 6499 ಮಾರುತಿ ಶಿಫ್ಟ್ ಡಿಸೈರ್ ಕಾರಿನಲ್ಲಿ ಲೋಟಸ್ ಕಂಪನಿಯವರು ಸಾಗಿಸುತ್ತಿದ್ದ ಸುಮಾರು 40 ಲಕ್ಷ ರೂಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಈ ವಿಚಾರವನ್ನು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಸದ್ಯಕ್ಕೆ ವಶ ಪಡಿಸಿಕೊಂಡಿರಲಾಗಿರುವ ಹಣವನ್ನು ಜಿಲ್ಲಾ ಖಜಾನೆ ಭದ್ರತಾ ಕೊಠಡಿಯಲ್ಲಿ ಇಡಲಾಗುವುದು ಎಂದು ಚುನಾವಣಾ ಪರಿಹಾರ ನಗದು ಮುಟ್ಟುಗೋಲು ಪರಿಹಾರ ಸಮಿತಿ ಸದಸ್ಯರಾದ ಮುನಿರಡ್ಡಿ ತಿಳಿಸಿದ್ದಾರೆ.