ಭೂ ಮೇಲ್ಮೈ ನ ನೀರು ಬಳಕೆಗೆ ಆದ್ಯತೆ ನೀಡಿ
Team Udayavani, Jul 23, 2021, 6:14 PM IST
ಚಿಂತಾಮಣಿ: ಅವಳಿ ಜಿಲ್ಲೆಯಲ್ಲಿ ಅಂತರ್ಜಲಬಳಕೆ ಕಡಿಮೆ ಮಾಡಿ, ಮೇಲ್ಮೈ ನೀರು ಹೆಚ್ಚುಉಪಯೋಗಿಸಿಕೊಂಡು ಬೆಳೆ ಬೆಳೆಯಬೇಕು ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಸಂತೆಕಲ್ಲಹಳ್ಳಿ, ತಳಗವಾರಗ್ರಾಪಂ ವ್ಯಾಪ್ತಿಯಲ್ಲಿ ಅಟಲ್ ಭೂಜಲಯೋಜನೆಗೆ ಚಾಲನೆ ನೀಡಿ ಮಾತನಾಡಿ,ಕಡಿಮೆ ನೀರಲ್ಲಿ ಹೆಚ್ಚು ಇಳುವರಿ ನೀಡುವ ಬೆಳೆಬೆಳೆಯಲು ಹೆಚ್ಚು ಒತ್ತು ನೀಡಬೇಕು. ಆದಷ್ಟುಮಳೆಯಾಧಾರಿತ ಬೆಳೆಗೆ ಆದ್ಯತೆ ನೀಡಬೇಕುಎಂದು ಸಲಹೆ ನೀಡಿದರು.
ಮಾರ್ಗದರ್ಶನದಂತೆ ನಡೆಯಿರಿ: ಅಟಲಭೂಜಲ ಯೋಜನೆ ಮುಖ್ಯ ಉದ್ದೇಶ ಅಂತರ್ಜಲ ಅಭಿವೃದ್ಧಿ.ಈಯೋಜನೆಯ ಮಾರ್ಗದರ್ಶನದಂತೆ ಕೃಷಿ ಪ¨ತಿ ಅ œ ಳವಡಿಕೆಮಾಡಿಕೊಂಡು ಸಂಸ್ಥೆಯ ಸೂಚನೆಯಂತೆನೀರನ್ನು ಬಳಕೆ ಮಾಡಿಕೊಂಡು, ಉತ್ತಮ ಬೆಳೆಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಆಗಬೇಕುಎಂದು ವಿವರಿಸಿದರು.ಇನ್ನು ಕೃಷಿಯನ್ನಷ್ಟೇ ನಂಬದೇ ಹೈನುಗಾರಿಕೆಯಲ್ಲಿ ತೊಡಗಿ ಮೇಕೆ, ಕುರಿ ಹಾಗೂ ಹಸುಸಾಕಾಣಿಕೆ ಮಾಡಿ ಆರ್ಥಿಕ ಅಭಿವೃದ್ಧಿ ಆಗಬೇಕು. ಇದರಿಂದ ನೀರಿನ ಬಳಕೆಯೂಕಡಿಮೆಯಾಗುತ್ತೆ, ಅಂತರ್ಜಲವೂ ವೃದ್ಧಿಆಗುತ್ತದೆ ಎಂದು ಹೇಳಿದರು.
ಅಂತರ್ಜಲ ಅಭಿವೃದ್ಧಿಗೆ ಸಹಕಾರ: ಇಒಮಂಜುನಾಥ ಮಾತನಾಡಿ, ಅಂತರ್ಜಲಹೆಚ್ಚಿಸಬೇಕಾದರೆ ಮಳೆ ಸುರಿಯಬೇಕು. ಅದಕ್ಕೆಸಸಿ ನೆಟ್ಟು ಮಣ್ಣು ಸವಕಳಿ ತಡೆದು, ನೀರುನಿಲ್ಲುವಂತೆ ಮಾಡಬೇಕು. ನಂತರ ನಿಂತನೀರು ಇಂಗುವಂತೆ ಮಾಡಿದಾಗ ಅಂತರ್ಜಲವೃದ್ಧಿ ಆಗುತ್ತೆ. ಆದರಿಂದ ಪ್ರತಿಯೊಬ್ಬರುಗಿಡನೆಟ್ಟು ಪೋಷಣೆ ಮಾಡಬೇಕು ಜೊತೆಗೆನರೇಗಾ ಯೋಜನೆಯಡಿ ಇಂಗುಗುಂಡಿ,ಕೃಷಿ ಹೊಂಡ, ಕೆರೆ ಕಟ್ಟೆ ನಿರ್ಮಾಣ ಮಾಡಿಅಂತರ್ಜಲ ಅಭಿವೃದ್ಧಿಗೆ ಸಹಕರಿಸಬೇಕುಎಂದು ವಿವರಿಸಿದರು.
ಎನ್ಆರ್ಡಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟರವಣಸ್ವಾಮಿ, ಅಟಲ್ ಭೂಜಲಯೋಜನೆ ನೋಡಲ್ ಅಧಿಕಾರಿ ಹರೀಶ್ಕುಮಾರ್, ಕೃಷಿ ಇಲಾಖೆ ನಿರ್ದೇಶಕಅನುರೂಪಾ, ಸಹಾಯಕ ನಿರ್ದೇಶಕಶ್ರೀನಿವಾಸ್, ರೇಷ್ಮೆ ಸಹಾಯಕ ನಿರ್ದೇಶಕಆಂಜನೇಯರೆಡ್ಡಿ, ತಾಲೂಕು ಅಟಲ್ ಭೂಜಲ ತಂಡದ ಮುಖ್ಯಸ್ಥ ಎಂ.ಎನ್.ರಾಮಪ್ಪ,ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ, ತಾಪಂಮಾಜಿ ಸದಸ್ಯ ಸಂತ್ತೆಕಲ್ಲಹಳ್ಳಿ ಎಚ್.ನಾರಾಯಣಸ್ವಾಮಿ, ಕೈವಾರ ಸುಬ್ಟಾರೆಡ್ಡಿ,ಸಂತ್ತೆಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾಚೌಡರೆಡ್ಡಿ, ತಳಗವಾರ ಗ್ರಾಪಂ ಅಧ್ಯಕ್ಷಮಂಜುನಾಥ, ಪಿಡಿಒ ಪ್ರತಿಭಾ, ತಳಗವಾರಪಿಡಿಒ ಸುಕಾಂತ್, ಸಂತ್ತೆಕಲ್ಲಹಳ್ಳಿ ಗ್ರಾಪಂಕಾರ್ಯದರ್ಶಿ ಆದಿಲಕ್ಷಿ ¾à, ಮುಖಂಡರಾದಮಹೇಶ್, ಆಟ್ಟೂರು ಗ್ರಾಪಂ ಸದಸ್ಯನರಸಿಂಹಮೂರ್ತಿ, ಪ್ರಭಾಕರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್