9 ಕೈದಿಗಳಿಗೆ ಕೋವಿಡ್ ಸೋಂಕು ದೃಢ
Team Udayavani, Apr 26, 2021, 3:10 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿದ್ದು,ನಾಗರಿಕರಲ್ಲಿ ಆತಂಕ ಮನೆ ಮಾಡಿದೆ.ಮತ್ತೂಂದೆಡೆ ಚಿಕ್ಕಬಳ್ಳಾಪುರ ಸಮೀಪದಅಣಕನೂರು ಕಾರಾಗೃಹದಲ್ಲಿವಿಚಾರಣಾ ಧೀನ 9 ಕೈದಿಗಳಿಗೆಕೊರೊನಾ ಸೋಂಕು ದೃಢಪಟ್ಟಿದ್ದು,ಅಲ್ಲಿನ ಜೈಲು ಸಿಬ್ಬಂದಿ, ಇತರೆ ಕೈದಿಗಳಲ್ಲಿಆತಂಕ ಮನೆ ಮಾಡಿದೆ.ಕೊರೊನಾ ಸೋಂಕು ನಿಯಂತ್ರಿಸಲುರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನುಕೈಗೊಳ್ಳುತ್ತಿದೆ ಜಿಲ್ಲೆಯಲ್ಲಿ ಈಗಾಗಲೇವಾರಾಂತ್ಯದ ಕರ್ಫ್ಯೂ ಯಶಸ್ವಿಯಾಗಿದೆ.
ಜಿಲ್ಲಾಧಿ ಕಾರಿ ಆರ್.ಲತಾ ಅವರನೇತೃತ್ವದಲ್ಲಿ ಕೊರೊನಾ ಸೋಂಕುನಿಯಂತ್ರಿಸಲು ಮತ್ತು ಜಿಲ್ಲಾದ್ಯಂತಸರ್ಕಾರಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳುಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿಕೊರೊನಾ ಸೋಂಕಿತರಿಗೆ ಯಾವರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ,ವೈದ್ಯರು ಸರಿಯಾಗಿ ಬರುತ್ತಿದ್ದಾರಾ?ಆಸ್ಪತ್ರೆಗಳಲ್ಲಿ ಶುಚಿತ್ವದ ಕಾಪಾಡಿಕೊಂಡಿದ್ದಾರೆಯೇ? ಎಂಬುದರಕುರಿತು ಖುದ್ದು ಪರಿಶೀಲನೆ ಕಾರ್ಯವನ್ನು ನಡೆಸುತ್ತಿದ್ದಾರೆ.
ಚಿಕಿತ್ಸೆ ನೀಡಲು ಕ್ರಮ: ಈ ಮಧ್ಯೆಚಿಕ್ಕಬಳ್ಳಾಪುರ ನಗರದ ಅಣಕನೂರುಬಳಿಯಿರುವ ಕಾರಾಗೃಹದಲ್ಲಿ ವಿಚಾರಣಾಧೀನ 9 ಕೈದಿಗಳಿಗೆ ಕೊರೊನಾಸೋಂಕು ದೃಢಪಟ್ಟಿರುವ ಮಾಹಿತಿಯನ್ನು ಅರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಇಂದಿರಾ ಆರ್.ಕಬಾಡೆಮತ್ತು ಚಿಕ್ಕಬಳ್ಳಾಪುರ ತಾಲೂಕುಪ್ರಭಾರ ತಹಶೀಲ್ದಾರ್ ತುಳಸಿ ಅವರುಕಾರಾಗೃಹಕ್ಕೆ ಭೇಟಿ ನೀಡಿ ಸರ್ಕಾರದಆದೇಶದಂತೆ ಕೊರೊನಾ ಸೋಂಕುತಗಲಿರುವ ಕೈದಿಗಳಿಗೆ ಚಿಕಿತ್ಸೆ ನೀಡಲುಕ್ರಮ ಕೈಗೊಂಡಿದ್ದಾರೆ.
ಜೊತೆಗೆಸೋಂಕು ತಗುಲಿರುವ ಕೈದಿಗಳೊಂದಿಗೆಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕ ಸಾಧಿ ಸಿದವರ ಗಂಟಲುದ್ರವ ಪರೀಕ್ಷೆ ಮಾಡಲು ಕ್ರಮಕೈಗೊಳ್ಳಲಾಗಿದೆ.
ಮಾರ್ಗಸೂಚಿಯಂತೆ ಕ್ರಮ: ಕಾರಾಗೃಹದ ವಿಚಾರಣಾ ಧೀನ ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸೆನೀಡುತ್ತಿದ್ದೇವೆ. ಕೈದಿಗಳೊಂದಿಗೆಸಂಪರ್ಕ ಸಾ ಧಿಸಿದ ಜನರ ಗಂಟಲುದ್ರವ ಪರೀಕ್ಷೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕದಕೊರತೆಯಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್. ಕಬಾಡೆಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ