ಬೆಳಗ್ಗೆಯೇ ಮಾರುಕಟ್ಟೆಗಳಲ್ಲಿ ಕಿಕ್ಕಿರಿದ ಜನ
Team Udayavani, May 27, 2021, 6:23 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುತಡೆಗಟ್ಟಲು ಮತ್ತೆ ಮೇ 27 ರಿಂದ 31ರ ಬೆಳಗ್ಗೆ 6 ಗಂಟೆಯವರೆ ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತ ದಿನಸಿ ಸಹಿತ ಅಗತ್ಯ ವಸ್ತುಗಳನ್ನು ಜನ ಸಾಮಾಜಿಕ ಅಂತರ ಮರೆತು ಖರೀದಿಸಿದರು.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಜಿಲ್ಲಾಡಳಿತ 3ದಿನಗಳ ಕಾಲಾವಾಕಾಶ ಕಲ್ಪಿಸಿತ್ತು ಈ ಮಧ್ಯೆ ಪ್ರತಿನಿತ್ಯಸಾಮಾಗ್ರಿಗಳ ಖರೀದಿಗಾಗಿ ಸಂತೆ ಮಾರುಕಟ್ಟೆ-ವಾಣಿಜ್ಯಪ್ರದೇಶಗಳಲ್ಲಿ ಹೆಚ್ಚು ಜನ ಕಂಡು ಬಂದರು.
ದಿನಸಿ-ತರಕಾರಿ ಅಂಗಡಿಗಳ ಬಳಿ ಸಾಲು: ಜನ ದಿನಸಿ,ತರಕಾರಿ ಅಂಗಡಿಗಳ ಬಳಿ ಸಾಲಾಗಿ ನಿಂತಿದ್ದರು. ವರ್ತಕರುಪೊಲೀಸರ ಭೀತಿಯಿಂದ ತಮ್ಮ ಅಂಗಡಿಗಳ ಮುಂದೆಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಿವ್ಯಾಪಾರ ಮಾಡಿಕೊಳ್ಳುವ ಪ್ರಯತ್ನ ಮಾಡಿದರು.
ಮಾಂಸಕ್ಕೆ ಬೇಡಿಕೆ: ಕೆಲವರು ಮಾಂಸ ಖರೀದಿ ಮಾಡಲುಮುಗಿಬಿದ್ದಿದ್ದರು. ಚಿಕಿನ್, ಮಟನ್ ಮತ್ತು ಮೀನುಖರೀದಿಯಲ್ಲಿ ಜನ ತೊಡಗಿದ್ದರು.
ಕಾರ್ಯಾಚರಣೆ: ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತಸಾಮಾಜಿಕ ಅಂತರ ಮರೆತು ಖರೀದಿಯಲ್ಲಿತೊಡಗಿದ್ದ ನಾಗರಿಕರನ್ನು ಗುರುತಿಸಿ ದಂಡ ವಿಧಿಸುವಕಾರ್ಯವನ್ನು ನಗರಸಭೆಯ ಅಧಿಕಾರಿಗಳು ಮತ್ತುಪೊಲೀಸರು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ