ಸೋಮನಾಥಪುರದಲ್ಲಿ ಆರೋಗ್ಯ ಕೇಂದ್ರಕ್ಕೆ ಆಗ್ರಹ
Team Udayavani, Apr 5, 2022, 4:11 PM IST
ಪಾತಪಾಳ್ಯ: ಸೋಮನಾಥಪುರದಲ್ಲಿ ಪ್ರಾಥ ಮಿಕ ಉಪ ಆರೋಗ್ಯ ಕೇಂದ್ರ ತೆರೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಾತಪಾಳ್ಯ ಹೋಬಳಿ ವ್ಯಾಪ್ತಿಯ ಸೋಮನಾಥಪುರ ಗ್ರಾಪಂ ವ್ಯಾಪ್ತಿಗೆ 16 ಹಳ್ಳಿಗಳು ಬರುತ್ತದೆ. ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲದೆ 8 ಕಿ.ಮೀ ದೂರದ ಶಿವಪುರ(ಯರ್ರಗುಡಿ), 6 ಕಿ.ಮೀ. ದೂರದ ಪಾತಪಾಳ್ಯ, 12 ಕಿ.ಮೀ. ದೂರದ ಚೇಳೂರಿಗೆ ಹೋಗಬೇಕಾಗಿದೆ. ದೇವಾರ್ಲ ಪಲ್ಲಿ, ದಿಗವ ಹಾಗೂ ಎಗವನೆಟ್ಟ ಕುಂಟ್ಲ ಪಲ್ಲಿ, ದೊಡ್ಡಿಪಲ್ಲಿ, ಮರಿಮಾಕಲಪಲ್ಲಿ ಜನರು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದು, ಬಸ್ ಸೌಕರ್ಯವಿಲ್ಲದೆ ಕಾಲ್ನಡಿಗೆಯಲ್ಲಿ ಸೋಮನಾಥಪುಕ್ಕೆ ಬಂದು ಬಸ್ ಹತ್ತ ಬೇಕು. ಸೋಮನಾಥಪುದಲ್ಲಿ ಆಸ್ಪತ್ರೆ ತೆರೆ ದರೆ ನಕ್ಕಲಪಲ್ಲಿ, ಸೀಗಲಪಲ್ಲಿ, ಚೀಮನ್ನ ಗಾರಪಲ್ಲಿ, ಗೊಟ್ಲಪಲ್ಲಿ, ಕುರ್ರಪಲ್ಲಿ, ಎಂ.ಎಂ. ಪಲ್ಲಿ, ಚಿನ್ನಗಾನಪಲ್ಲಿ, ಗಾಧಿ ವಾಂಡ್ಲಪಲ್ಲಿ, ಕುರುಬರಹಳ್ಳಿ ಮುಂತಾದ ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ವ್ಯವ ಸಾಯ ಹಾಗೂ ಕೂಲಿ ಮಾಡಿ ಜೀವನ ನಡೆ ಸುವ ಇಲ್ಲಿನ ಜನ ಆಸ್ಪತ್ರೆಗೆ ಹೋಗಬೇಕಾ ದರೆ ಒಂದು ದಿನವೆಲ್ಲಾ ಹಾಳಾಗುತ್ತದೆ.
ಸೋಮನಾಥಪುರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರವಾಗಿ ಸೋಮನಾಥಪುರ ದಲ್ಲಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಕಾರ್ಯಗತವಾಗಿಲ್ಲ. ಕಳೆದ 40 ವರ್ಷದ ಹಿಂದೆ ಗ್ರಾಮದಲ್ಲಿ ಆರೋಗ್ಯ ಸಹಾಯಕಿಯ ವಸತಿ ಗೃಹವಿದ್ದು, ಅದು ಪಾಳುಬಿದ್ದು ಪ್ರಯೋಜನವಿಲ್ಲದಂತಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳಿದ್ದು, ಅವುಗಳಲ್ಲಿ ತಾತ್ಕಾಲಿಕವಾಗಿ ಉಪ ಆರೋಗ್ಯ ಕೇಂದ್ರ ತೆರೆದರೆ ರೋಗಿಗಳಿಗೆ ಅನುಕೂಲವಾ ಗುತ್ತದೆ ಎಂದು ಆಗ್ರಹಿಸಿದ್ದಾರೆ.
ಸೋಮನಾಥಪುರದಲ್ಲಿ ಶೀಘ್ರವಾಗಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರದ ಗಮನಕ್ಕೆ ತರಲಾಗುವುದು. –ಸಿ.ಎಸ್.ಸತ್ಯನಾರಾಯಣರೆಡ್ಡಿ, ಟಿ.ಎಚ್.ಒ, ಬಾಗೇಪಲ್ಲಿ
ಕೇಂದ್ರ ಸ್ಥಾನದಲ್ಲಿ ಉಪ ಆರೋಗ್ಯ ಕೇಂದ್ರ ತೆರೆದರೆ, ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಹಾಗೂ ದೂರದ ಊರುಗಳಿಗೆ ಹೋಗುವುದು ತಪ್ಪುತ್ತದೆ. –ಬಿ.ವಿ.ಪಾಪಿರೆಡ್ಡಿ, ನಗದು ಗುಮಾಸ್ತ, ಎಸ್ಎಸ್ಎನ್ ಬ್ಯಾಂಕ್, ಸೋಮನಾಥಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್